ರಾಜಕೀಯದಲ್ಲಿ ಆಸಕ್ತಿಯಿದ್ದರೆ ಈ ಶಿಬಿರದಲ್ಲಿ ಪಾಲ್ಗೊಳ್ಳಿ
ಬೆಂಗಳೂರು, ಮಾ. 28 : ರಾಜಕೀಯ ಅಂದರೆ ಏನು? ಎಂಬ ಪ್ರಶ್ನೆ ಕೇಳಿದರೆ ಕಕ್ಕಾಬಿಕ್ಕಿಯಾಗುವ ಇಂದಿನ ಯುವಪೀಳಿಗೆಗೆ ರಾಜಕೀಯ ವ್ಯವಸ್ಥೆಯ ಆಳಅಗಲಗಳನ್ನು, ಅರಿತುಕೊಳ್ಳಬೇಕಾದ ಪಟ್ಟುಗಳನ್ನು ತಿಳಿಯಪಡಿಸುವ ಉದ್ದೇಶದಿಂದ ಐಐಎಂ-ಬೆಂಗಳೂರು ಪ್ರೊಫೆಸರ್ ರಾಜೀವ್ ಗೌಡ ಅವರು ಮೂರು ವಾರಗಳ (ಮಾ.29ರಿಂದ ಏ.18) ಕಾರ್ಯಾಗಾರ ಹಮ್ಮಿಕೊಂಡಿದ್ದಾರೆ.
ಈ ವರ್ಕ್ಶಾಪ್ನಲ್ಲಿ, ಲೋಕಸಭೆ ಚುನಾವಣೆಯಲ್ಲಿ ರಾಜಕಾರಣಿಗಳ ಪ್ರಚಾರ ಹೇಗೆ ನಡೆಯುತ್ತದೆ, ಮತದಾನ (ಕರ್ನಾಟಕದಲ್ಲಿ ಏ.17) ಮತ್ತು ಎಣಿಕೆ ಪ್ರಕ್ರಿಯೆ (ಮೇ 16) ಯಾವ ರೀತಿ ಸಾಗುತ್ತದೆ, ಚುನಾವಣೋತ್ತರ ಸಮೀಕ್ಷೆ ಅಂದ್ರೇನು, ಮಾಧ್ಯಮಗಳು ಇಂಥ ಚುನಾವಣೆಗಳನ್ನು ಹೇಗೆ ಪ್ರಸಾರ ಮಾಡುತ್ತವೆ ಮುಂತಾದ ವಿಷಯಗಳ ಕುರಿತು, ರಾಜಕೀಯ ಆಗುಹೋಗುಗಳನ್ನು ಅರಿತ ತಜ್ಞರು ವಿಷದವಾಗಿ ತಿಳಿಯಪಡಿಸಲಿದ್ದಾರೆ. [ಮೋದಿ ಮಾತನ್ನು ಕನ್ನಡದಲ್ಲಿ ಕೇಳಿರಿ]

ಕಾಂಗ್ರೆಸ್ ಧುರೀಣ ಪ್ರೊ. ರಾಜೀವ್ ಗೌಡ, ಜೈನ್ ವಿಶ್ವವಿದ್ಯಾಲಯದ ಉಪಕುಲಪತಿ ಡಾ. ಸಂದೀಪ್ ಶಾಸ್ತ್ರೀ, ಬ್ರಾಂಡ್ ಗುರು ಹರೀಶ್ ಬಿಜೂರ್, ತಕ್ಷಶಿಲಾ ಥಿಂಕ್ ಟ್ಯಾಂಕ್ ಸಂಸ್ಥಾಪಕ ನಿತಿನ್ ಜೈನ್, ಲೋಕಸತ್ತಾ ಪಕ್ಷದ ನಾಯಕ ಡಾ. ಅಶ್ವಿನ್ ಮಹೇಶ್ ಮುಂತಾದವರು ಕಾರ್ಯಾಗಾರದಲ್ಲಿ ಭಾಗವಹಿಸುತ್ತಿರುವವರ ಮೇಲೆ ಜ್ಞಾನಧಾರೆ ಎರೆಯಲಿದ್ದಾರೆ. ಇದರಲ್ಲಿ ಯುವಕರು ಮಾತ್ರವಲ್ಲ ಯಾರು ಬೇಕಾದರೂ ಭಾಗವಹಿಸಬಹುದು.
ಈ ರಾಜಕೀಯ ತರಬೇತಿ ಶಿಬಿರದಲ್ಲಿ ಭಾಗವಹಿಸುವವರು ತಾವು ಕಲಿತ ಸಂಗತಿಗಳನ್ನು, ಅನುಭವಗಳನ್ನು, ಅನಿಸಿಕೆಗಳನ್ನು, ಇದಕ್ಕಾಗಿ ಸೃಷ್ಟಿಸಲಾಗುವ ಬ್ಲಾಗ್ ನಲ್ಲಿ ಬರೆಯಬಹುದಾಗಿದೆ. ಶಿಬಿರಾರ್ಥಿಗಳು ಪ್ರಚಾರದಲ್ಲಿ ಭಾಗವಹಿಸಲಿದ್ದಾರೆ, ಮಾಧ್ಯಮದವರೊಡನೆ ಮತ್ತು ರಾಜಕೀಯ ಪಂಡಿತರೊಡನೆ ಚರ್ಚೆ ನಡೆಸಲಿದ್ದಾರೆ. ಚುನಾವಣಾ ಪ್ರಕ್ರಿಯೆಯನ್ನು ಇನ್ನಷ್ಟು ಸುಲಭಗೊಳಿಸಲು ಅವರಿಂದ ಸಲಹೆಗಳನ್ನು ಕೂಡ ಪಡೆಯಲಾಗುತ್ತದೆ.
ಬೆಂಗಳೂರು ದಕ್ಷಿಣದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ನಂದನ್ ನಿಲೇಕಣಿ, ಬೆಂಗಳೂರು ಉತ್ತರದಲ್ಲಿ ಸ್ಪರ್ಧೆಗಿಳಿದಿರುವ ಸಿ ನಾರಾಯಣ ಸ್ವಾಮಿ ಮುಂತಾದವರ ರಾಜಕೀಯ ಕಲ್ಪನೆ, ದೃಷ್ಟಿಕೋನ, ಆಶಯಗಳ ಬಗ್ಗೆ, ಬಿಪ್ಯಾಕ್ನ ಚುನಾವಣಾ ಜಾಗೃತಿ ಅಭಿಯಾನ, ಚುನಾವಣಾ ಪ್ರಣಾಳಿಕೆಗಳ ವಿಶ್ಲೇಷಣೆ ಕುರಿತು ವಿವರ ನೀಡಲಾಗುವುದು.
ವಿವಿಧ ಕ್ಷೇತ್ರಗಳಲ್ಲಿನ ಮತದಾರರನ್ನು ಸಂಘಟಿಸಿ, ಒಂದೇ ವೇದಿಕೆಯ ಮೇಲೆ ಕಾಂಗ್ರೆಸ್ ಪಕ್ಷದಿಂದ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳೊಂದಿಗೆ ಕ್ಷೇತ್ರಗಳಲ್ಲಿನ ಸಮಸ್ಯೆಗಳ ಬಗ್ಗೆ ಸಂವಾದ ನಡೆಸುವ ಅಪರೂಪದ ಅವಕಾಶವನ್ನು ಕೂಡ ರಾಜೀವ್ ಗೌಡ ಅವರು ಶಿಬಿರಾರ್ಥಿಗಳಿಗೆ ದೊರಕಿಸಿಕೊಡಲಿದ್ದಾರೆ.
ಜೊತೆಗೆ, ಚುನಾವಣಾ ಪ್ರಚಾರಗಳ ವಿಡಿಯೋ ಚಿತ್ರೀಕರಣ ಮಾಡುವುದಲ್ಲದೆ, ಚುನಾವಣಾ ಸುದ್ದಿ ಸಂಗ್ರಹಿಸಿ, ವಿವಿಧ ವಿಷಯಗಳ ಬಗ್ಗೆ ಬರೆದ ಲೇಖನಗಳನ್ನು ಸಾಮಾಜಿಕ ತಾಣಗಳಲ್ಲಿ ಅವುಗಳನ್ನು ಫೋಟೋಗಳ ಸಮೇತ ಪ್ರಕಟಿಸಲು ಉತ್ತೇಜನ ನೀಡಲಾಗುವುದು. ಯುವಜನರು ರಾಜಕೀಯ ಸೇರಲು ಮತ್ತು ಕಡ್ಡಾಯವಾಗಿ ಮತಹಾಕಲು ಕೂಡ ಉತ್ತೇಜಿಸಲಾಗುವುದು ಎಂದು ರಾಜೀವ್ ಗೌಡ ಅವರು ಹೇಳುತ್ತಾರೆ.
ಸಂಪರ್ಕ
ಈಮೇಲ್ : [email protected]
ಮೊಬೈಲ್ : 91-9620011631
ವೆಬ್ ತಾಣ : http://www.facebook.com/ProfRajeevGowda
ಸ್ಥಳ : ಸ್ಟುಡಿಯೋ ಚಾಪೆ, 50/1, 2ನೇ ಮಹಡಿ, ಎಸ್ಬಿಐ ಕಟ್ಟಡ, ಭೀಮಾಸ್ ರೆಸ್ಟೋರೆಂಟ್ ಎದುರಿಗೆ, ಚರ್ಚ್ ಸ್ಟ್ರೀಟ್, ಬೆಂಗಳೂರು.
ಟ್ವಿಟ್ಟರ್ : https://twitter.com/rajeevgowda
-
Bengaluru: ಬೆಂಗಳೂರಿನ ಹೋಟೆಲ್ಗಳಲ್ಲಿ ಗ್ರಾಹಕರಿಗೆ ಶಾಕ್: ಸಾಂಬಾರ್ ಬದಲು ಬೇರೆ ಆಯ್ಕೆ - ಪೋಸ್ಟ್ ವೈರಲ್, ಡಿಸಿ ಹೇಳಿದ್ದೇನು -
Sulekere: ಮಂಡ್ಯದಲ್ಲಿ ಸೂಳೇಕೆರೆ ಮರುನಾಮಕರಣ ಚರ್ಚೆ: ಇತಿಹಾಸಕ್ಕೆ ಮಸಿ ಬಳಿಯಬೇಡಿ ಎಂದ ಜಗದೀಶ್ ಕೊಪ್ಪ -
B Khata: ಬಿ ಖಾತಾದಿಂದ ಎ ಖಾತಾ ಪರಿವರ್ತನೆ ಸವಾಲುಗಳು: ವೆಚ್ಚ, ಪ್ರಕ್ರಿಯೆ ಸ್ವಂತ ವಿವರ ಹಂಚಿಕೊಂಡ ಆಸ್ತಿದಾರ ಶ್ರೀನಿವಾಸ ಮಠ -
Rain in Karnataka: ಬಿರು ಬಿಸಿಲಿನ ನಡುವೆ ಬೆಂಗಳೂರು ಸೇರಿ ಕರ್ನಾಟಕದ ಈ ಜಿಲ್ಲೆಗಳಲ್ಲಿ ನಾಲ್ಕು ದಿನ ಮಳೆ: ಐಎಂಡಿ ರಿಪೋರ್ಟ್ -
ವಿಶ್ವಕಪ್ ಕಿರೀಟದ ಹಿಂದೆ ದೈವಬಲ: ಕರಾವಳಿಯ ಅಳಿಯ ಸೂರ್ಯಕುಮಾರ್ ಯಾದವ್ ನಡೆಗೆ ಮೆಚ್ಚುಗೆಗಳ ಸುರಿಮಳೆ -
New Airport: 3 ಜಿಲ್ಲೆ ಜನರ ಅನುಕೂಲಕ್ಕಾಗಿ ಸರ್ಕಾರದ ಮಾಸ್ಟರ್ ಪ್ಲ್ಯಾನ್: ಬಳ್ಳಾರಿ ಬಳಿ ಹೊಸ ಏರ್ಪೋರ್ಟ್ -
KSRTC: ಸಾರಿಗೆ ಲೋಕಕ್ಕೆ 'ಪಲ್ಲಕ್ಕಿ' ಮೆರುಗು: ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ 115 ಹೊಸ ಬಸ್ಗಳ ಲೋಕಾರ್ಪಣೆ -
ಬೆಂಗಳೂರಲ್ಲಿ ಗ್ಯಾಸ್ ಏಜೆನ್ಸಿಗಳ ಭರ್ಜರಿ ದಂಧೆ: ಸಿಲಿಂಡರ್ ಸಿಗದೇ ಗ್ರಾಹಕರು ಕಂಗಾಲು; ಕಾಳಸಂತೆಯಲ್ಲಿ ₹3,000ಕ್ಕೆ ಮಾರಾಟ -
LPG Gas: ಎಲ್ಪಿಜಿ ನಿಯಮಗಳಲ್ಲಿ ಭಾರೀ ಬದಲಾವಣೆ; ಗ್ರಾಹಕರು ದೂರು ನೀಡಲು ಸಹಾಯವಾಣಿ ಸಂಖ್ಯೆಗಳ ಬಿಡುಗಡೆ -
Gold Rate March 13: ಸತತ 3ನೇ ದಿನವೂ ಚಿನ್ನ - ಬೆಳ್ಳಿ ಬೆಲೆ ಭರ್ಜರಿ ಕುಸಿತ, ಎಷ್ಟಾಗಿದೆ ಇಂದಿನ ಬಂಗಾರದ ಬೆಲೆ -
Resort: ಕರ್ನಾಟಕದಲ್ಲಿ ಶುರುವಾಯ್ತು ರೆಸಾರ್ಟ್ ರಾಜಕೀಯ: ‘ಅವರು ನಮ್ಮ ಅತಿಥಿಗಳು’ ಎಂದ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ -
Horoscope March 13: ಈ ರಾಶಿಯವರ ಬದುಕಲ್ಲಿ ಸಕಾರಾತ್ಮಕ ಬೆಳವಣಿಗೆ, ಅಧಿಕ ಲಾಭ; ದಿನ ಭವಿಷ್ಯ












Click it and Unblock the Notifications