ಹಿರಿಯರ ಮೇಲೆ ಕಿರುಕುಳ: ಬೆಂಗಳೂರಿನಲ್ಲೇ ಹೆಚ್ಚು ಪ್ರಕರಣ
ಬೆಂಗಳೂರು, ಜೂನ್14: ರಾಷ್ಟ್ರೀಯ ಸಹಾಯವಾಣಿಯಾಗಿರುವ ಹಿರಿಯರವಾಣಿಗೆ ಬೆಂಗಳೂರು ನಗರದಿಂದ ಹೆಚ್ಚಿನ ದೂರುಗಳು ದಾಖಲಾಗಿವೆ. ಹಿರಿಯರಿಗೆ ನೆರವಾಗಲು ಕೇಂದ್ರ ಸರ್ಕಾರ 2021ರ ಜೂನ್ನಲ್ಲಿ ಹಿರಿಯರವಾಣಿ (14567) ಪ್ರಾರಂಭಿಸಿತ್ತು. ಅಂದಿನಿಂದ ಹಿರಿಯರು ಕರೆ ಮಾಡಿ ದೂರು ದಾಖಲಿಸುತ್ತಿದ್ದಾರೆ.
ಜೂನ್ 2021 ಮತ್ತು ಮೇ 2022ರ ನಡುವೆ ಹಿರಿಯರವಾಣಿ ಸ್ವೀಕರಿಸಿದ ಕರೆಗಳ ಪಟ್ಟಿಯಲ್ಲಿ ಬೆಂಗಳೂರು ನಗರ ಅಗ್ರಸ್ಥಾನದಲ್ಲಿದೆ. ಕಳೆದ ಒಂದು ವರ್ಷದಲ್ಲಿ 104 ಕರೆಗಳು ಬೆಂಗಳೂರಿನಿಂದ ದಾಖಲಾಗಿದೆ. ಬೆಳಗಾವಿ 24, ಮೈಸೂರು 20, ಶಿವಮೊಗ್ಗ 17, ಹಾವೇರಿ 13, ಮತ್ತು ವಿಜಯಪುರ ಮತ್ತು ಮಂಡ್ಯ ಜಿಲ್ಲೆಯಿಂದ 11 ಕರೆಗಳನ್ನು ಸ್ವೀಕರಿಸಲಾಗಿದೆ.
ಕಳೆದ ಒಂದು ವರ್ಷದಲ್ಲಿ ಹಿರಿಯರವಾಣಿಗೆ 341 ಕರೆಗಳು ಹಿರಿಯರ ನಿಂದನೆ ಬಗ್ಗೆ ಸಂಬಂಧಿಸಿದ್ದಾಗಿವೆ. ಬೆಂಗಳೂರಿನಲ್ಲಿ ಹಿರಿಯರ ಸಹಾಯವಾಣಿ (1090) ಅಸ್ತಿತ್ವದಲ್ಲಿದೆ. ಕಳೆದ ಮೂರು ವರ್ಷಗಳಲ್ಲಿ ಹಿರಿಯರಿಂದ ದಾಖಲಾಗಿರುವ ಸಂಖ್ಯೆಗಳನ್ನು ನೋಡುವುದಾದರೆ, 2019-20ರಲ್ಲಿ 80 ಇದ್ದ ದೂರುಗಳ ಸಂಖ್ಯೆ 2020-21 ರಲ್ಲಿ 86 ಕ್ಕೆ ಏರಿಕೆಯಾಗಿದೆ. ಏಪ್ರಿಲ್ 2021 ರಿಂದ ಮೇ 2022ರ ನಡುವೆ, ಸಹಾಯವಾಣಿಗೆ 99 ಕರೆಗಳು ಬಂದಿವೆ.

ನಿಂದನೆ ಬಗ್ಗೆ ಹೆಚ್ಚಿನ ದೂರು
ಜೂನ್ 2021 ರಲ್ಲಿ ಪ್ರಾರಂಭವಾದ ಹಿರಿಯರವಾಣಿ (14567), ಕೇವಲ ಒಂದು ವರ್ಷದಲ್ಲಿ 341 ಕರೆಗಳನ್ನು ಸ್ವೀಕರಿಸಿದೆ ಮತ್ತು ಹೆಚ್ಚಿನವು ಹಿರಿಯ ನಾಗರಿಕರ ನಿಂದನೆಗೆ ಸಂಬಂಧಿಸಿದೆ.
ಕೋವಿಡ್ ಸಾಂಕ್ರಾಮಿಕದ ನಂತರ ಹಿರಿಯರಿಗೆ ಕಿರುಕುಳ ಪ್ರಕರಣದಲ್ಲಿ ಹೆಚ್ಚಳವಾಗಿದೆ. ಲಾಕ್ಡೌನ್ ಪರಿಣಾಮ ಅನಿವಾರ್ಯವಾಗಿ ಕುಟುಂಬ ಒಂದೇ ಕಡೆ ಉಳಿಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ಸಂದರ್ಭದಲ್ಲಿ ಮಕ್ಕಳು ಪೋಷಕರಿಗೆ ನಿಂದಿಸಿದ, ಮಾನಸಿಕ ಕಿರುಕುಳ ನೀಡಿದ ಬಗ್ಗೆ ಹೆಚ್ಚಿನ ಕರೆಗಳು ಬಂದಿವೆ ಎನ್ನುತ್ತಾರೆ.

ಆಸ್ತಿ ಆಸೆಗೆ ಪೋಷಕರಿಗೆ ಕಿರುಕುಳ
"ಪತಿಯ ಮರಣದ ನಂತರ ಆಸ್ತಿಯನ್ನು ಪತ್ನಿಯ ಹೆಸರಿನಲ್ಲಿ ನೋಂದಾಯಿಸಲಾಗಿದೆ. ಆದರೆ ಮಕ್ಕಳು ಆಸ್ತಿಯನ್ನು ಆಕ್ರಮಿಸಿಕೊಂಡಿದ್ದಾರೆ ಮತ್ತು ಅವರು ಮನೆ ನಿರ್ಮಾಣಕ್ಕೆ ಹಣ ಬೇಕು ಎಂದು ತಂದೆ ತಾಯಿ ಆಸ್ತಿಯನ್ನು ಕಬಳಿಸಲು ಯತ್ನಿಸುತ್ತಿದ್ದಾರೆ" ಎಂದು ದೂರೊಂದು ದಾಖಲಾದ ಬಗ್ಗೆ ಹಿರಿಯರ ಸಹಾಯವಾಣಿಯ ಅಧಿಕಾರಿಯೊಬ್ಬರು ಹೇಳುತ್ತಾರೆ.
ಪೋಷಕರ ವಸತಿ ಆಸ್ತಿಯನ್ನು ಮಕ್ಕಳು ಆಕ್ರಮಿಸಿಕೊಂಡು, ಪೋಷಕರನ್ನು ಹೊರಹಾಕಿದ್ದಾರೆ. ತಮ್ಮ ಆಸ್ತಿಯನ್ನು ಮರಳಿ ಪಡೆಯಲು ಪೋಷಕರು ನೆರವಿಗಾಗಿ ಯಾಚಿಸಿದ್ದಾರೆ ಎಂದು ಹೇಳಿದ್ದಾರೆ.
ಹಿರಿಯ ನಾಗರಿಕರು ಆಸ್ತಿಗೆ (ಫ್ಲಾಟ್) ಹಣ ಪಾವತಿಸಿದ ನಿದರ್ಶನಗಳಿವೆ. ಪೋಷಕರ ಮಗ ಅಥವಾ ಮಗಳ ಹೆಸರಿನಲ್ಲಿ ಸಾಲ ಪಾವತಿ ಮಾಡುತ್ತಾರೆ. ಏಕೆಂದರೆ 55 ವರ್ಷ ವಯಸ್ಸಿನ ನಂತರ ಬ್ಯಾಂಕುಗಳು ಸಾಲ ನೀಡುವುದಿಲ್ಲ. ಪರಿಣಾಮವಾಗಿ, ಸಾಲ ತೀರಿದ ನಂತರ ಆಸ್ತಿ ಮಗ, ಮಗಳಿಗೆ ಸೇರುತ್ತದೆ. ಹಣ ಕೊಟ್ಟ ಪೋಷಕರನ್ನು ಹೊರಗೆ ಹೋಗಲು ಒತ್ತಾಯಿಸಲಾಗುತ್ತದೆ ಎಂದು ಅಧಿಕಾರಿ ಹೇಳಿದ್ದಾರೆ.

ಕೊರೊನಾ ನಂತರ ಹೆಚ್ಚಾದ ದೂರುಗಳು
"ನಿಂದನೆ ದೈಹಿಕ, ಮಾನಸಿಕ ಮತ್ತು ಭಾವನಾತ್ಮಕವಾಗಿರಬಹುದು. ಬೆಂಗಳೂರು ನಗರದಿಂದ ಹೆಚ್ಚಿನ ಪ್ರಕರಣಗಳನ್ನು ದಾಖಲಾಗಿವೆ. ಸಾಂಕ್ರಾಮಿಕ ಮತ್ತು ನಂತರದ ಸಮಯದಲ್ಲಿ ದೂರುಗಳ ಸಂಖ್ಯೆ ಹೆಚ್ಚಳವಾಗಿದೆ. ಅನೇಕರು ತಮ್ಮ ಉದ್ಯೋಗಗಳನ್ನು ಕಳೆದುಕೊಂಡಿದ್ದಾರೆ ಅಥವಾ ನಗರಗಳನ್ನು ಬದಲಾಯಿಸಿದ್ದಾರೆ ಮತ್ತು ಹೊಸದಾಗಿ ಜೀವನ ಪ್ರಾರಂಭಿಸಲು ಹಣದ ಅಗತ್ಯವಿದೆ. ನಾವು ದಿನಕ್ಕೆ ಕನಿಷ್ಠ 200 ಕರೆಗಳನ್ನು ಸ್ವೀಕರಿಸಿದ ಉದಾಹರಣೆಗಳಿವೆ" ಎಂದು ಹಿರಿಯರವಾಣಿ ಅಧಿಕಾರಿಯೊಬ್ಬರು ಹೇಳಿದರು.

ಲಿಖಿತ ದೂರು ದಾಖಲಿಸಿದ ಪೋಷಕರು
ಹೆತ್ತವರಿಗೆ ಹೆಗ್ಗಣ ಮುದ್ದು ಎನ್ನುವ ಗಾದೆಯಂತೆ ಮಕ್ಕಳೂ ಏನೇ ಮಾಡಿದರು ಅವರನ್ನು ಸಮರ್ಥಿಸಿಕೊಳ್ಳುವ ಪೋಷಕರಿಗೇನು ಕೊರತೆಯಿಲ್ಲ. ಹಿರಿಯರವಾಣಿಗೆ ಕರೆ ಮಾಡಿ ದೂರು ನೀಡುವ ಪೋಷಕರು, ಮಕ್ಕಳ ಭವಿಷ್ಯದ ದೃಷ್ಟಿಯಿಂದ ಲಿಖಿತ ದೂರು ದಾಖಲಿಸುವ ಪ್ರಯತ್ನ ಮಾಡುವುದಿಲ್ಲ.
ಮಕ್ಕಳ ಭವಿಷ್ಯ ಹಾಳಾಗುತ್ತದೆ. ಮರ್ಯಾದೆ ಹೋಗುತ್ತದೆ ಎಂದು ಹೆದರಿ ಮಕ್ಕಳು ನೀಡುವ ಕಿರುಕುಳವನ್ನು ಸಹಿಸಿಕೊಳ್ಳುವ ಪೋಷಕರಿಗೇನೂ ಕಡಿಮೆ ಇಲ್ಲ.
ವಾರ್ಷಿಕ 3 ಲಕ್ಷಕ್ಕಿಂತ ಕಡಿಮೆ ಆದಾಯ ಹೊಂದಿರುವ ಹಿರಿಯ ನಾಗರಿಕರಿಗೆ ತಮ್ಮ ಹಕ್ಕುಗಳನ್ನು ಮರುಪಡೆಯಲು ಮತ್ತು ಅವರಿಗೆ ಸೇರಿರುವ ಆಸ್ತಿಗಾಗಿ ಹೋರಾಡಲು ಸಹಾಯ ಮಾಡುವ ವಕೀಲರ ಸಮಿತಿಯನ್ನು ಸಹಾಯವಾಣಿ (14567) ಹೊಂದಿದೆ. ಅನ್ಯಾಯಕ್ಕೆ ಒಳಗಾದ ಹಿರಿಯ ನಾಗರೀಕರು ಇದರ ಉಪಯೋಗ ಪಡೆಯಬಹುದು.
-
ಉನ್ನತ ಶಿಕ್ಷಣಕ್ಕೆ ಭಾರತದ ಯಾವ ನಗರ ಬೆಸ್ಟ್? QS ರ್ಯಾಂಕಿಂಗ್ ಪಟ್ಟಿಯಲ್ಲಿದೆ ಬೆಂಗಳೂರು ಸೇರಿದಂತೆ 4 ನಗರಗಳ ಹೆಸರು -
ಯುದ್ಧದ ಬಿಸಿ: ಬೆಂಗಳೂರಿಗೆ ಅರಬ್ ರಾಷ್ಟ್ರಗಳ ವಿಮಾನ ಸಂಚಾರ ಕಡಿತ; ರಾಜ್ಯ ಟ್ರಾವೆಲ್ಸ್ ಮಾಲೀಕರಲ್ಲಿ ಆತಂಕ -
Gold Price: ಯುಗಾದಿಗೆ ಚಿನ್ನಪ್ರಿಯರಿಗೆ ಶುಭ ಸುದ್ದಿ: ಚಿನ್ನದ ಬೆಲೆಯಲ್ಲಿ ಭರ್ಜರಿ ಇಳಿಕೆ, ಬೆಳ್ಳಿ ದರ 15,000 ರೂ.ಕುಸಿತ -
Property Mutation: ಆಸ್ತಿ ನೋಂದಣಿ ನಂತರ ಶೇ.98ರಷ್ಟು ಖಾತೆಗಳು ಸ್ವಯಂ ಚಾಲಿತವಾಗಿ ಬದಲಾವಣೆ: ಸಚಿವ ಕೃಷ್ಣ ಬೈರೇಗೌಡ -
Gold Price Today: ಯುಗಾದಿಗೂ ಮೊದಲೇ ಚಿನ್ನದ ದರದಲ್ಲಿ ಭಾರೀ ಇಳಿಕೆ; ಆಭರಣ ಪ್ರಿಯರಿಗೆ ಇಂದೇ ಹಬ್ಬ -
Karnataka: ಧಾರ್ಮಿಕ ಮೆರವಣಿಗೆ, ಜಯಂತಿಗಳಲ್ಲಿ DJ ಸದ್ದಿಗೆ ಬ್ರೇಕ್? 'ಐಟಂ ಸಾಂಗ್' ಬ್ಯಾನ್ ಮಾಡಲು ರಾಜ್ಯ ಸರ್ಕಾರ ಒಲವು -
Karnataka Weather: ಧಾರವಾಡದಲ್ಲಿ 101 ಮಿಮೀ ಮಳೆ ದಾಖಲು, ಒಳನಾಡಿಗೆ ಅಲಿಕಲ್ಲು ಸಹಿತ ಮಳೆ ಮುನ್ಸೂಚನೆ -
RCB: ಆರ್ಸಿಬಿಯಲ್ಲಿ ಜೋಶ್ ಹ್ಯಾಜಲ್ವುಡ್ ಸ್ಥಾನ ತುಂಬುವ ಆಟಗಾರ ಇವರೇ ನೋಡಿ -
ಶೆಲ್ ಬಂಕ್ನಲ್ಲಿ ಪೆಟ್ರೋಲ್ ದರ ಏರಿಕೆ: ಬೆಂಗಳೂರಿನಲ್ಲಿ 10 ದಿನಗಳಲ್ಲಿ 4.50 ರೂಪಾಯಿ ಹೆಚ್ಚಳ; ಇಲ್ಲಿದೆ ದರಪಟ್ಟಿ -
SSLC ಪರೀಕ್ಷೆ-1 ಆರಂಭ: ಮಲ್ಲೇಶ್ವರಂನ ಕೆಪಿಎಸ್ ಶಾಲೆಗೆ ಸಚಿವ ಮಧು ಬಂಗಾರಪ್ಪ ಭೇಟಿ, ವಿದ್ಯಾರ್ಥಿಗಳಿಗೆ ಶುಭಹಾರೈಕೆ -
Rain Alert: ಕರ್ನಾಟಕದ ಈ 9 ಜಿಲ್ಲೆಗಳಿಗೆ ಮುಂದಿನ 2 ದಿನ ವ್ಯಾಪಕ ಆಲಿಕಲ್ಲು ಮಳೆ ಎಚ್ಚರಿಕೆ -
KD Song Controversy: ಸೆರಗ ಸರ್ಸೆ ಹಾಡು ವಿವಾದ: ಪ್ರೇಮ್ ವಿರುದ್ಧ ದೂರು, ನೋಟಿಸ್ ಬೆನ್ನಲ್ಲೇ ಹಿಂದಿ ಹಾಡು ಡಿಲೀಟ್












Click it and Unblock the Notifications