ಇದು ಕಸದ ಮಾರ್ಕೆಟ್, ಒಣ ಕಸ ಮಾರಿ ಹಣ ಪಡೆಯಿರಿ
ಬೆಂಗಳೂರು, ಡಿ.13 : ಮಾರುಕಟ್ಟೆಗೆ ಹೋಗಿ ಹಣ ನೀಡಿ ವಸ್ತುಗಳನ್ನು ತರುತ್ತೀರಿ, ಅದೇ ರೀತಿ ಮನೆಯಲ್ಲಿರುವ ಒಣ ಕಸವನ್ನು ಮಾರಿ ನಿಮ್ಮ ಜೇಬು ತುಂಬಿಸಿಕೊಳ್ಳಬಹುದು. ಬೆಂಗಳೂರಿನ ಬಿಟಿಎಂ ಲೇಔಟ್ನಲ್ಲಿ ಇಂತಹ ಕಸದ ಘಟಕ ಶನಿವಾರ ಆರಂಭಗೊಳ್ಳಲಿದೆ.
ಹಾಲಿನ ಕವರ್, ಹಳೆಯ ತಂತಿ, ವೈರ್, ಮೊಬೈಲ್ ಬಿಡಿಭಾಗಗಳು, ಬಿಸ್ಕೆಟ್ ಕವರ್ಗಳು, ಪ್ಲಾಸ್ಟಿಕ್ ಚಮಚ, ಲೋಟ, ಬಕೆಟ್, ಟಬ್, ತೆಂಗಿನಕಾಯಿ ಕರಟ, ಕೊಕಾಕೋಲಾ, ಮಾಜಾ ಮುಂತಾದ ತಂಪು ಪಾನೀಯಗಳ ಬಾಟಲಿಗಳನ್ನು ನೀವು ಮಾರಾಟ ಮಾಡಿ ಹಣಗಳಿಸಬಹುದು. [ಕಸದ ಮಾರುಕಟ್ಟೆ ಫೇಸ್ ಬುಕ್ ಪುಟ]

ಮಡಿವಾಳದ ಬಿಬಿಎಂಪಿ ಸದಸ್ಯ ಬಿ.ಎನ್.ಮಂಜುನಾಥ ರೆಡ್ಡಿ ಅವರು ಇಂತಹ ಕಸ ಮಾರ್ಕೆಟ್ಅನ್ನು ಆರಂಭಿಸಲು ಯೋಜನೆ ತಯಾರಿಸಿದ್ದರು. ಅದು ಇಂದು ಕಾರ್ಯರೂಪಕ್ಕೆ ಬಂದಿದ್ದು, ಕೇಂದ್ರ ರೇಷ್ಮೇ ಮಂಡಳಿ ಫ್ಲೈ ಓವರ್ ಕೆಳಗೆ 180*80 ಚದರಡಿ ಸ್ಥಳದಲ್ಲಿ ಕಸದ ಮಾರ್ಕೆಟ್ ಆರಂಭವಾಗುತ್ತಿದೆ. [ಕಸ ವಿಂಗಡನೆ ಮಾಡದಿದ್ದರೆ ದಂಡ ಕಟ್ಟಬೇಕು]
ಸದ್ಯ, ಈ ಮಾರ್ಕೆಟ್ನಲ್ಲಿ 10 ಟನ್ ಒಣ ತ್ಯಾಜ್ಯ ಸಂಗ್ರಹಣೆ ಮಾಡಬಹುದಾಗಿದೆ. ಮುಂದಿನ ದಿನಗಳಲ್ಲಿ ಈ ಘಟಕದಲ್ಲಿ ಹೆಚ್ಚು ಕಸ ಸಂಗ್ರಹಿಸಲು ವ್ಯವಸ್ಥೆ ಮಾಡಲಾಗುತ್ತದೆ. ಒಣ ಕಸದ ಮಾರ್ಕೆಟ್ ನಿರ್ವಹಣೆಯನ್ನು ನಿರ್ಮಲ್ ಎನ್ವಿರೋ ಸೆಲ್ಯೂಷನ್ಸ್ ಎಂಬ ಸಂಸ್ಥೆ ಹೊತ್ತುಕೊಂಡಿದೆ.

ಒಣ ತ್ಯಾಜ್ಯಕ್ಕೆ ಸೂಕ್ತವಾದ ಬೆಲೆ ಮತ್ತು ವಿಲೇವಾರಿಗೆ ಸೂಕ್ತ ಸ್ಥಳ ಎಂಬ ಧ್ಯೇಯ ವಾಕ್ಯದಡಿ ಈ ಒಣ ಕಸದ ಮಾರ್ಕೆಟ್ಅನ್ನು ಆರಂಭಿಸಲಾಗಿದೆ. ನೀವು ಮಾರ್ಕೆಟ್ಗೆ ಹೋಗಿ ಹಣಕೊಟ್ಟು ವಸ್ತುಗಳನ್ನು ಖರೀದಿ ಮಾಡುವಂತೆ ಇಲ್ಲಿ ಒಣ ಕಸ ಕೊಟ್ಟು ಹಣ ಪಡೆಯಬಹುದು.
ಯಾವ ಕಸಕ್ಕೆ ಎಷ್ಟು ಹಣ?
* ಡೈರಿ ಮಿಲ್ಕ್, ಓರಿಯೋ ಬಿಸ್ಕೆಟ್ ಖಾಲಿ ಕವರ್ ಕೆ.ಜಿ.ಗೆ 1 ರೂ.
* ಪಾಸ್ಟಿಕ್ ಚಮಚ, ಲೋಟ, ಬಕೆಟ್, ಟವ್ಗಳಿಗೆ 14 ರೂ.
* ತೆಂಗಿನಕಾಯಿ ಕರಟ 3 ರೂ.
* ತಂಪುಪಾನೀಯಗಳ ಬಾಟಲಿ 16 ರೂ.
* ಟಾಲ್ಕಂ ಪೌಡರ್ ಡಬ್ಬಗಳಿಗೆ 60 ರೂ.
ಈ ಮಳಿಗೆ ವಾರದ ಎಲ್ಲಾ ದಿನ 10 ರಿಂದ ಸಂಜೆ 6 ಗಂಟೆಯ ತನಕ ತೆರೆದಿರುತ್ತದೆ.
-
SWR: ಏಪ್ರಿಲ್ 2-5 ಬೆಂಗಳೂರು, ಹುಬ್ಬಳ್ಳಿಯಿಂದ ವಿಶೇಷ ಎಕ್ಸ್ಪ್ರೆಸ್ ರೈಲು ಕಾರ್ಯಾಚರಣೆ, ವೇಳಾಪಟ್ಟಿ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Hindi Language: ಹಿಂದಿ ಭಾಷೆ ರದ್ದು, ಎಸ್ಎಸ್ಎಲ್ಸಿ ಮಕ್ಕಳ ಬದುಕಿಗೆ ಕಲ್ಲು:ಆರ್ ಅಶೋಕ್ -
Venkatesh Daggubati: ಬೆಂಗಳೂರಿನ ಐಕಾನಿಕ್ ವಿದ್ಯಾರ್ಥಿ ಭವನದಲ್ಲಿ ದೋಸೆ ಸವಿದ ಟಾಲಿವುಡ್ ನಟ ವೆಂಕಟೇಶ್ ದಗ್ಗುಬಾಟಿ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ












Click it and Unblock the Notifications