ಇದು ಕಸದ ಮಾರ್ಕೆಟ್, ಒಣ ಕಸ ಮಾರಿ ಹಣ ಪಡೆಯಿರಿ
ಬೆಂಗಳೂರು, ಡಿ.13 : ಮಾರುಕಟ್ಟೆಗೆ ಹೋಗಿ ಹಣ ನೀಡಿ ವಸ್ತುಗಳನ್ನು ತರುತ್ತೀರಿ, ಅದೇ ರೀತಿ ಮನೆಯಲ್ಲಿರುವ ಒಣ ಕಸವನ್ನು ಮಾರಿ ನಿಮ್ಮ ಜೇಬು ತುಂಬಿಸಿಕೊಳ್ಳಬಹುದು. ಬೆಂಗಳೂರಿನ ಬಿಟಿಎಂ ಲೇಔಟ್ನಲ್ಲಿ ಇಂತಹ ಕಸದ ಘಟಕ ಶನಿವಾರ ಆರಂಭಗೊಳ್ಳಲಿದೆ.
ಹಾಲಿನ ಕವರ್, ಹಳೆಯ ತಂತಿ, ವೈರ್, ಮೊಬೈಲ್ ಬಿಡಿಭಾಗಗಳು, ಬಿಸ್ಕೆಟ್ ಕವರ್ಗಳು, ಪ್ಲಾಸ್ಟಿಕ್ ಚಮಚ, ಲೋಟ, ಬಕೆಟ್, ಟಬ್, ತೆಂಗಿನಕಾಯಿ ಕರಟ, ಕೊಕಾಕೋಲಾ, ಮಾಜಾ ಮುಂತಾದ ತಂಪು ಪಾನೀಯಗಳ ಬಾಟಲಿಗಳನ್ನು ನೀವು ಮಾರಾಟ ಮಾಡಿ ಹಣಗಳಿಸಬಹುದು. [ಕಸದ ಮಾರುಕಟ್ಟೆ ಫೇಸ್ ಬುಕ್ ಪುಟ]

ಮಡಿವಾಳದ ಬಿಬಿಎಂಪಿ ಸದಸ್ಯ ಬಿ.ಎನ್.ಮಂಜುನಾಥ ರೆಡ್ಡಿ ಅವರು ಇಂತಹ ಕಸ ಮಾರ್ಕೆಟ್ಅನ್ನು ಆರಂಭಿಸಲು ಯೋಜನೆ ತಯಾರಿಸಿದ್ದರು. ಅದು ಇಂದು ಕಾರ್ಯರೂಪಕ್ಕೆ ಬಂದಿದ್ದು, ಕೇಂದ್ರ ರೇಷ್ಮೇ ಮಂಡಳಿ ಫ್ಲೈ ಓವರ್ ಕೆಳಗೆ 180*80 ಚದರಡಿ ಸ್ಥಳದಲ್ಲಿ ಕಸದ ಮಾರ್ಕೆಟ್ ಆರಂಭವಾಗುತ್ತಿದೆ. [ಕಸ ವಿಂಗಡನೆ ಮಾಡದಿದ್ದರೆ ದಂಡ ಕಟ್ಟಬೇಕು]
ಸದ್ಯ, ಈ ಮಾರ್ಕೆಟ್ನಲ್ಲಿ 10 ಟನ್ ಒಣ ತ್ಯಾಜ್ಯ ಸಂಗ್ರಹಣೆ ಮಾಡಬಹುದಾಗಿದೆ. ಮುಂದಿನ ದಿನಗಳಲ್ಲಿ ಈ ಘಟಕದಲ್ಲಿ ಹೆಚ್ಚು ಕಸ ಸಂಗ್ರಹಿಸಲು ವ್ಯವಸ್ಥೆ ಮಾಡಲಾಗುತ್ತದೆ. ಒಣ ಕಸದ ಮಾರ್ಕೆಟ್ ನಿರ್ವಹಣೆಯನ್ನು ನಿರ್ಮಲ್ ಎನ್ವಿರೋ ಸೆಲ್ಯೂಷನ್ಸ್ ಎಂಬ ಸಂಸ್ಥೆ ಹೊತ್ತುಕೊಂಡಿದೆ.

ಒಣ ತ್ಯಾಜ್ಯಕ್ಕೆ ಸೂಕ್ತವಾದ ಬೆಲೆ ಮತ್ತು ವಿಲೇವಾರಿಗೆ ಸೂಕ್ತ ಸ್ಥಳ ಎಂಬ ಧ್ಯೇಯ ವಾಕ್ಯದಡಿ ಈ ಒಣ ಕಸದ ಮಾರ್ಕೆಟ್ಅನ್ನು ಆರಂಭಿಸಲಾಗಿದೆ. ನೀವು ಮಾರ್ಕೆಟ್ಗೆ ಹೋಗಿ ಹಣಕೊಟ್ಟು ವಸ್ತುಗಳನ್ನು ಖರೀದಿ ಮಾಡುವಂತೆ ಇಲ್ಲಿ ಒಣ ಕಸ ಕೊಟ್ಟು ಹಣ ಪಡೆಯಬಹುದು.
ಯಾವ ಕಸಕ್ಕೆ ಎಷ್ಟು ಹಣ?
* ಡೈರಿ ಮಿಲ್ಕ್, ಓರಿಯೋ ಬಿಸ್ಕೆಟ್ ಖಾಲಿ ಕವರ್ ಕೆ.ಜಿ.ಗೆ 1 ರೂ.
* ಪಾಸ್ಟಿಕ್ ಚಮಚ, ಲೋಟ, ಬಕೆಟ್, ಟವ್ಗಳಿಗೆ 14 ರೂ.
* ತೆಂಗಿನಕಾಯಿ ಕರಟ 3 ರೂ.
* ತಂಪುಪಾನೀಯಗಳ ಬಾಟಲಿ 16 ರೂ.
* ಟಾಲ್ಕಂ ಪೌಡರ್ ಡಬ್ಬಗಳಿಗೆ 60 ರೂ.
ಈ ಮಳಿಗೆ ವಾರದ ಎಲ್ಲಾ ದಿನ 10 ರಿಂದ ಸಂಜೆ 6 ಗಂಟೆಯ ತನಕ ತೆರೆದಿರುತ್ತದೆ.
-
Bengaluru-Hyderabad ಬುಲೆಟ್ ಟ್ರೈನ್: ಕೇವಲ 2 ಗಂಟೆ ಪ್ರಯಾಣ, 626 ಕಿಮೀ ಉದ್ದದ ಹಾದಿಯಲ್ಲಿ 12 ನಿಲ್ದಾಣಗಳು -
ದುಬೈಯಿಂದ ತಾಯ್ನಾಡಿಗೆ ಮರಳಿದ ಕನ್ನಡಿಗರು: ಪಿ.ವಿ ಸಿಂಧು, ಭೋಜೇಗೌಡ ಸೇರಿದಂತೆ ಹಲವರು ಬೆಂಗಳೂರಿಗೆ ವಾಪಾಸ್ -
Bengaluru: ‘92 ಲಕ್ಷದ ಪ್ಯಾಕೇಜ್ ಇದ್ದರೂ ಉಳಿಯಲಿಲ್ಲ ಕೆಲಸ’; ಒಂದೇ ದಿನ ಶೇ. 40ರಷ್ಟು ಸಿಬ್ಬಂದಿ ವಜಾ ಮಾಡಿದ ಐಟಿ ಕಂಪನಿ -
Gold Rate: ಮಾರುಕಟ್ಟೆಯಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಹೀಗಿದೆ, ನಿಮ್ಮ ನಗರದ ದರ ಪರಿಶೀಲಿಸಿ -
PV Sindhu: ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧು ಪತಿ ಸ್ವಿಮ್ಮಿಂಗ್ ಪೂಲ್ನಲ್ಲಿ ಈಜು ಸಾಹಸ: ಫಿಟ್ನೆಸ್ ತಜ್ಞರು ಹೇಳಿದ್ದೇನು? -
Viral : ರ್ಯಾಪಿಡೋ ಬುಕ್ ಮಾಡಿದವನಿಗೆ ಕಾದಿತ್ತು ಬಿಗ್ ಶಾಕ್: ತನ್ನ ಶಾಲೆಯ 'ಕ್ಲಾಸ್ ಟಾಪರ್' ಈಗ ರ್ಯಾಪಿಡೋ ರೈಡರ್ -
Gold Rate: ಚಿನ್ನ, ಬೆಳ್ಳಿ ದರದಲ್ಲಿ ಏರಿಳಿತ; ಬೆಂಗಳೂರಿನಲ್ಲಿ ಇಂದು ಚಿನ್ನದ ಬೆಲೆ ಎಷ್ಟಿದೆ? -
ಒಂದೇ ವರ್ಷದಲ್ಲಿ 800 ಕೋಟಿ ರೂ ಮೌಲ್ಯದ ಕಂಪನಿ ಕಟ್ಟಿದ 23ರ ಹರೆಯದ ಅಂಜಲಿ ಸರ್ದಾನಾ -
Vrial News: ಕೆಲಸದಿಂದ ತೆಗೆದ ಬಳಿಕ ಪುಕ್ಕಟೆ ಸಹಾಯ ಕೇಳಿದ ಮಾಜಿ ಬಾಸ್: ನೌಕರ ಕೊಟ್ಟ ಉತ್ತರ ವೈರಲ್ -
Today Horoscope Mar 3: ಹುಣ್ಣಿಮೆಯ ದಿನ ಚಂದ್ರಗ್ರಹಣ, ಈ ರಾಶಿಯವರ ಆರೋಗ್ಯದಲ್ಲಿ ಏರುಪೇರು -
Property: ಖಾತಾ ಎಂದರೇನು, ಇ, ಬಿ - ಎ ಖಾತಾಗಳ ವ್ಯತ್ಯಾಸ, ಆಸ್ತಿದಾರರಿಗೆ ಹೇಗೆ ಲಾಭ ಇಲ್ಲಿದೆ ಸಂಪೂರ್ಣ ವಿವರ -
National Highway: ರಾಷ್ಟ್ರೀಯ ಹೆದ್ದಾರಿ-373 ಕಾಮಗಾರಿ ಎಲ್ಲಿಗೆ ಬಂತು?












Click it and Unblock the Notifications