ಬೆಂಗಳೂರು: ಉತ್ತರ ನಗರ ಪಾಲಿಕೆ ಬಜೆಟ್ 2026–27: ₹4,344 ಕೋಟಿ ಅನುದಾನಕ್ಕೆ ‘ಬಜೆಟ್ ಟು ಆಕ್ಷನ್’ ಯೋಜನೆ, ಅಭಿವೃದ್ಧಿಗೆ ವೇಗ

ಬೆಂಗಳೂರು ಉತ್ತರ ನಗರ ಪಾಲಿಕೆಯ 2026-27ನೇ ಸಾಲಿನ ಬಜೆಟ್‌ಗೆ ಮಂಜೂರಾದ ₹4,344 ಕೋಟಿ ಅನುದಾನವನ್ನು ಸಮರ್ಪಕವಾಗಿ ಹಾಗೂ ಪರಿಣಾಮಕಾರಿಯಾಗಿ ಬಳಸುವ ಉದ್ದೇಶದಿಂದ, ಶುಕ್ರವಾರ ಇನ್ಫ್ಯಾನ್ಟ್ರಿ ರಸ್ತೆಯ ಐಎಎಸ್ ಅಧಿಕಾರಿಗಳ ಸಂಘದ ಸಭಾಂಗಣದಲ್ಲಿ 'ಬಜೆಟ್ ಟು ಆಕ್ಷನ್ ಪ್ಲಾನ್' ಕಾರ್ಯಾಗಾರವನ್ನು ಆಯೋಜಿಸಲಾಯಿತು.

ಕಾರ್ಯಕ್ರಮದಲ್ಲಿ ನಗರ ಪಾಲಿಕೆ ಆಯುಕ್ತರಾದ ಪೊಮ್ಮಲ ಸುನೀಲ್ ಕುಮಾರ್ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಪಾಲಿಕೆಗೆ ಹಂಚಿಕೆ ಮಾಡಲಾದ ಪ್ರತಿಯೊಂದು ಪೈಸೆಯನ್ನೂ ಜನಹಿತಕ್ಕಾಗಿ ಪರಿಣಾಮಕಾರಿಯಾಗಿ ಬಳಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು. ನಗರದ ಅಭಿವೃದ್ಧಿ ಕಾರ್ಯಗಳಲ್ಲಿ ಎಲ್ಲ ಎಂಜಿನಿಯರರು ಶ್ರದ್ಧೆಯಿಂದ ಕಾರ್ಯನಿರತರಾಗಿದ್ದು, ಅಪರ ಆಯುಕ್ತರು ಸಹ ಸಮನ್ವಯದೊಂದಿಗೆ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ತಿಳಿಸಿದರು.

Bengaluru

ಪಾಲಿಕೆಯ ಎಂಜಿನಿಯರರು, ಅಧಿಕಾರಿಗಳ ಜೊತೆ ನಗರದ ಪಾಲುದಾರರು ಸಕ್ರಿಯವಾಗಿ ಭಾಗಿಯಾಗಿ ಯೋಜನೆಗಳನ್ನು ರೂಪಿಸಿದಾಗ ಉತ್ತಮ ಯೋಜನೆಗಳು ರೂಪುಗೊಂಡು, ಅವುಗಳನ್ನು ವಾಸ್ತವವಾಗಿ ಕಾರ್ಯಗತಗೊಳಿಸಲು ಸಾಧ್ಯವಾಗುತ್ತದೆ. ನಗರದ ಹಲವಾರು ಪ್ರತಿಭಾನ್ವಿತರು ಇಲ್ಲಿ ಸೇರಿ ಹಲವಾರು ಯೋಜನೆಗಳನ್ನು ರೂಪಿಸಿ ಅದನ್ನು ಕಾರ್ಯರೂಪಕ್ಕೆ ತರುವುದರಿಂದ ಸಾರ್ವಜನಿಕರಿಗೆ ಅನುಕೂಲವಾಗಲಿದೆ ಎಂದು ಆಯುಕ್ತರು ಅಭಿಪ್ರಾಯಪಟ್ಟರು.

ಕಾರ್ಯಾಗಾರದ ಉದ್ದೇಶ

ಈ ಕಾರ್ಯಾಗಾರದ ಉದ್ದೇಶವು ಬಜೆಟ್‌ನಲ್ಲಿರುವ ಅನುದಾನಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವುದು ಹಾಗೂ ಉತ್ತರ ನಗರ ಪಾಲಿಕೆಯ ಜನರ ಜೀವನಮಟ್ಟವನ್ನು ಸುಧಾರಿಸಲು ಪ್ರಮುಖ ಯೋಜನೆಗಳನ್ನು ಸಮರ್ಥವಾಗಿ ಜಾರಿಗೆ ತರಲು ಸೂಕ್ತ ಕಾರ್ಯತಂತ್ರಗಳ ಕುರಿತು ಚರ್ಚಿಸುವುದು. ಉತ್ತರ ನಗರ ಪಾಲಿಕೆ ಶೀಘ್ರದಲ್ಲೇ ಗುಲಾಬಿ ಮಾರ್ಗ ಮತ್ತು ನೀಲಿ ಮೆಟ್ರೋ ಮಾರ್ಗಗಳ ಮೂಲಕ ಉತ್ತಮ ಸಂಪರ್ಕ ಪಡೆಯಲಿದ್ದು, ನಗರ ಪಾಲಿಕೆಯ ವ್ಯಾಪ್ತಿಯಲ್ಲಿ 18 ಹೊಸ ಮೆಟ್ರೋ ನಿಲ್ದಾಣಗಳು ನಿರ್ಮಾಣವಾಗಲಿವೆ. ಈ ಹಿನ್ನೆಲೆಯಲ್ಲಿ ಪಾದಚಾರಿ ಮಾರ್ಗ, ಸೈಕ್ಲಿಂಗ್, ಬಸ್ ಜಾಲ ಹಾಗೂ ಮೆಟ್ರೋ ಸಂಪರ್ಕವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸುವ ಕುರಿತು ಚರ್ಚಿಸಲಾಯಿತು.

ಕ್ರಿಯಾ ಯೋಜನೆಗಳ ಬಗ್ಗೆ ಚರ್ಚೆ

ಈ ಕಾರ್ಯಾಗಾರದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು, ತಜ್ಞರು ಹಾಗೂ ಎನ್‌ಜಿಒಗಳು ಭಾಗವಹಿಸಿ ಬಜೆಟ್‌ನಲ್ಲಿರುವ ಯೋಜನೆಗಳನ್ನು ಸಮರ್ಥವಾಗಿ ಕಾರ್ಯರೂಪಕ್ಕೆ ತರಲು ಅಗತ್ಯವಾದ ಕ್ರಿಯಾಯೋಜನೆಗಳ ಕುರಿತು ಚರ್ಚಿಸಿದರು. ನಗರದ ಅಭಿವೃದ್ಧಿಯನ್ನು ಪರಿಣಾಮಕಾರಿಯಾಗಿ ಮುಂದುವರಿಸಲು, ಪ್ರಾಯೋಗಿಕ ಚರ್ಚೆಗಳ ಮೂಲಕ ಪರಿಣಾಮಕಾರಿ ಯೋಜನೆಗಳನ್ನು ಗುರುತಿಸಲಾಯಿತು.

ಯೋಜನೆಯ ಪ್ರಮುಖಾಂಶಗಳು:

1. ಎಲ್ಲರನ್ನೂ ಒಳಗೊಂಡ ರಸ್ತೆ ಸಂಪರ್ಕ ಮತ್ತು ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸುವುದು.

2. ಸಾಮೂಹಿಕ ಸಾರಿಗೆ ಕಾರಿಡಾರ್‌ಗಳ ಸುತ್ತ ಮೊದಲ ಮತ್ತು ಕೊನೆಯ ಮೈಲಿ ಸಂಪರ್ಕವನ್ನು ಹೆಚ್ಚಿಸುವುದು

3. ಹವಾಮಾನ ಸ್ಥಿತಿಸ್ಥಾಪಕತ್ವ ಮತ್ತು ತಾಪ ತಗ್ಗಿಸುವಿಕೆಯನ್ನು ಬಲಪಡಿಸುವುದು

4. ಉದ್ಯಾನವನಗಳು ಮತ್ತು ನಗರ ಅರಣ್ಯಗಳ ಅಭಿವೃದ್ಧಿಯ ಮೂಲಕ ಹಸಿರೀಕರಣಕ್ಕೆ ಹೆಚ್ಚಿನ ಆದ್ಯತೆ ನೀಡುವುದು.

5. ಪ್ರವಾಹ ನಿರ್ವಹಣೆ ಮತ್ತು ಮಳೆ ನೀರಿನ ವ್ಯವಸ್ಥೆಗಳನ್ನು ಸುಧಾರಿಸುವುದು

6. ಅಗ್ನಿಶಾಮಕ ಸೇರಿದಂತೆ ತುರ್ತು ಪ್ರತಿಕ್ರಿಯೆ ವ್ಯವಸ್ಥೆಗಳನ್ನು ನವೀಕರಿಸುವುದು

7. ಕೆರೆಗಳು ಮತ್ತು ಇತರ ನೈಸರ್ಗಿಕ ನೀರಿನ ವ್ಯವಸ್ಥೆಗಳನ್ನು ಬಲಪಡಿಸುವುದು

ಯೋಜನಾ ಹಂತಗಳ ವಿವರ

ಕಾರ್ಯಾಗಾರದ ವೇಳೆ ರೂಪಿಸಲಾದ ಪ್ರಾಥಮಿಕ ಕ್ರಿಯಾಯೋಜನೆಗಳನ್ನು ಶೀಘ್ರದಲ್ಲೇ ತಿದ್ದುಪಡಿ ಮಾಡಿ ಆಯುಕ್ತರಿಗೆ ಸಲ್ಲಿಸಲಾಗುತ್ತದೆ. ನಂತರ ಅವುಗಳನ್ನು ಹಂತ ಹಂತವಾಗಿ ಜಾರಿಗೆ ತರಲಾಗುವುದು. ಜಾರಿಗೆ ತಂದ ನಂತರ ಪ್ರತಿ ತಿಂಗಳು ಪ್ರಗತಿ ಪರಿಶೀಲನೆಯನ್ನು ನಡೆಸಲಾಗುವುದು ಹಾಗೂ ತ್ರೈಮಾಸಿಕವಾಗಿ ಸಮಗ್ರ ಪ್ರಗತಿ ವರದಿಗಳನ್ನು ಸಿದ್ಧಪಡಿಸಿ ಅನುಸರಣೆ ಮಾಡಲಾಗುತ್ತದೆ. ಈ ಮೂಲಕ ಬಜೆಟ್‌ನ ಗುರಿಗಳನ್ನು ಸಮಯಬದ್ಧವಾಗಿ ಹಾಗೂ ಪರಿಣಾಮಕಾರಿಯಾಗಿ ಜಾರಿಗೊಳಿಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+