ಸಿಲಿಕಾನ್ ಸಿಟಿಯಲ್ಲೂ ಬಾಹುಬಲಿ ಮಹಾಮಸ್ತಕಾಭಿಷೇಕ!
ಬೆಂಗಳೂರು, ಫೆಬ್ರವರಿ 27 : ಜೈನಕಾಶಿ ಶ್ರವಣಬೆಳಗೊಳದಲ್ಲಿ ನಡೆದ ಐತಿಹಾಸಿಕ ಮಹಾಮಸ್ತಕಾಭಿಷೇಕ ಕಣ್ತುಂಬಿಕೊಳ್ಳಲು ಸಾಧ್ಯವಾಗದವರು ನಿರಾಶರಾಗಬೇಕಿಲ್ಲ.
ಅಟ್ಟಣಿಗೆ ನಿರ್ಮಾಣದಿಂದ ಹಿಡಿದು ಹಾಲು-ಕೇಸರಿ ವಿವಿಧ ದ್ರವ್ಯಗಳ ಅಭಿಷೇಕದ ಸಂಪೂರ್ಣ ವಿಧಿವಿಧಾನ ವೀಕ್ಷಿಸುವ ಅವಕಾಶ ಸಿಲಿಕಾನ್ ಸಿಟಿಗೆ ಒದಗಿಬಂದಿದೆ. ಈ ಬಾರಿಯ ಮಹಾಮಸ್ತಕಾಭಿಷೇಕ ಹಾಗೂ ಜೈನಕಾಶಿಯ ವೈಭವವನ್ನು ನಗರದಲ್ಲಿ ಮರುಕಳಿಸುವ ಸಿದ್ಧತೆ ಆರಂಭವಾಗಿದೆ.
In Pics: ಮುಗಿಲೆತ್ತರಕ್ಕೆ ನಿಂತ ವಿರಾಗಿಗೆ ಮಹಾಮಸ್ತಕಾಭಿಷೇಕ
ಈ ಅದ್ಭುತವನ್ನು ನೋಡಲು ನೂರಾರು ಮೆಟ್ಟಿಲುಗಳನ್ನು ಹತ್ತಬೇಕಿಲ್ಲ. ಬದಲಾಗಿ ಒಂದೇ ಸ್ಥಳದಲ್ಲಿ ಮಹಾಮಸ್ತಕಾಭಿಷೇಕ ಮಹೋತ್ಸವ ಹಾಗೂ ಸುತ್ತಮುತ್ತಲಿನ ಪ್ರವಾಸಿ ಸ್ಥಳಗಳನ್ನು 3ಡಿ ಕನ್ನಡಕದ ಮೂಲಕ ವೀಕ್ಷಿಸಬಹುದಾಗಿದೆ. ಛಾಯಾಗ್ರಹಣ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಬೆಂಗಳೂರಿನ 3 ಡಿ ಸ್ಟುಡಿಯೋದ ಸದಸ್ಯರು 3 ಡಿ ಕ್ಯಾಮರಾ ಮೂಲಕ ಕಳೆದ 3 ತಿಂಗಳಿನಿಂದ ಶ್ರವಣಬೆಳಗೊಳವನ್ನು ಸೆರೆಹಿಡಿದಿದ್ದಾರೆ. ಈ ಅವಧಿಯಲ್ಲಿ ತೆಗೆಯಲಾದ ಫೋಟೋಗಳನ್ನು ನಗರದ ಮಹಾತ್ಮಾ ಗಾಂಧಿ ರಸ್ತೆಯಲ್ಲಿರುವ ರಂಗೋಲಿ ಮೆಟ್ರೋದಲ್ಲಿ ಪ್ರದರ್ಶನ ಮಾಡಲಾಗುತ್ತಿದೆ.

2 ಸಾವಿರಕ್ಕೂ ಅಧಿಕ 3 ಡಿ ಛಾಯಾಚಿತ್ರ: 3 ಡಿ ಛಾಯಾಚಿತ್ರ ಸಂಸ್ಥೆಯು ನಂದಕುಮಾರ್, 3 ಸಾವಿರಕ್ಕೂ ಅಧಿಕ 3 ಡಿ ಫೋಟೊ ಕ್ಲಿಕ್ಕಿಸಿದ್ದಾರೆ.ಇದರಲ್ಲಿ ಮಸ್ತಕಾಭಿಷೇಕ ದೇಶ್ಯಾವಳಿ, ವಿಂಧ್ಯಗಿರಿ, ಚಂದ್ರಗಿರಿ ಬೆಟ್ಟದ ಸೌಂದರ್ಯ, ಬಾಹುಬಲಿಯ ಪಾದಪೂಜೆ, ಪ್ರಥಮ ಕಳಶದ ಅಭಿಷೇಕ, ಚಿಕ್ಕದೇವರಾಜ ಒಡೆಯರ್ ಕಲ್ಯಾಣಿ, ಚಿಕ್ಕಬೆಟ್ಟದ 14 ಬಸದಿಗಳು, ತ್ಯಾಗಸ್ತಂಭ, ಮಾನಸ್ತಂಭ, ಬ್ರಹ್ಮಸ್ತಬ್ಧ, ಜೈನ ಮಠದ ಭಿತ್ತಿ ಚಿತ್ರಗಳು ಸೇರಿ ಮಹಾಮಸ್ತಕಾಭಿಷೇಕದ ವೈಭವವನ್ನು ಸೆರೆ ಹಿಡಿಯಲಾಗಿದೆ.
ಸಿಂಗಾಪುರದಿಂದ ಕನ್ನಡಕ: 3 ಡಿ ಸ್ಟುಡಿಯೋ 3 ಡಿ ಛಾಯಾಚಿತ್ರ ಪ್ರದರ್ಶನಕ್ಕೆ ಬೇಕಾದ ಕನ್ನಡಕವನ್ನು ಸಿಂಗಾಪುರದಿಂದ ಆಮದು ಮಾಡಿಕೊಳ್ಳಲಾಗುತ್ತಿದೆ. ಪ್ರತಿ 3 ಡಿ ಕನ್ನಡಕಕ್ಕೆ 18 ರೂ ವೆಚ್ಚವಾಗಲಿದ್ದು ಬೆಂಗಳೂರಿನಲ್ಲಿ ನಡೆಯುವ 3 ಡಿ ಛಾಯಾಚಿತ್ರ ಪ್ರದರ್ಶನಕ್ಕೆ ಈಗಾಗಲೇ ಬೇಡಿಕೆ ಬಂದಿದೆ.
-
Gold Price Today: ಯುಗಾದಿಗೂ ಮೊದಲೇ ಚಿನ್ನದ ದರದಲ್ಲಿ ಭಾರೀ ಇಳಿಕೆ; ಆಭರಣ ಪ್ರಿಯರಿಗೆ ಇಂದೇ ಹಬ್ಬ -
Karnataka Weather: ಧಾರವಾಡದಲ್ಲಿ 101 ಮಿಮೀ ಮಳೆ ದಾಖಲು, ಒಳನಾಡಿಗೆ ಅಲಿಕಲ್ಲು ಸಹಿತ ಮಳೆ ಮುನ್ಸೂಚನೆ -
ವಲಸೆ ಕಾರ್ಮಿಕರಿಂದಾಗಿ ಉದ್ಯೋಗ ನಷ್ಟವಾಗುತ್ತಿರುವ ಬಗ್ಗೆ ಅಧಿಕೃತ ದೂರು ಸಲ್ಲಿಕೆಯಾಗಿಲ್ಲ: ಕಾರ್ಮಿಕ ಇಲಾಖೆ ಸ್ಪಷ್ಟನೆ -
RCB: ಆರ್ಸಿಬಿಯಲ್ಲಿ ಜೋಶ್ ಹ್ಯಾಜಲ್ವುಡ್ ಸ್ಥಾನ ತುಂಬುವ ಆಟಗಾರ ಇವರೇ ನೋಡಿ -
ಶೆಲ್ ಬಂಕ್ನಲ್ಲಿ ಪೆಟ್ರೋಲ್ ದರ ಏರಿಕೆ: ಬೆಂಗಳೂರಿನಲ್ಲಿ 10 ದಿನಗಳಲ್ಲಿ 4.50 ರೂಪಾಯಿ ಹೆಚ್ಚಳ; ಇಲ್ಲಿದೆ ದರಪಟ್ಟಿ -
Gold Rate Today: ಬಂಗಾರ ಪ್ರಿಯರಿಗೆ ಸಿಹಿಸುದ್ದಿ: ಇಂದೂ ಇಳಿಕೆ ಕಂಡ ಚಿನ್ನದ ಬೆಲೆ, ಬೆಂಗಳೂರಿನಲ್ಲಿ ದರಗಳು ಹೀಗಿವೆ -
ಯುಗಾದಿ, ರಂಜಾನ್ ಹಬ್ಬಕ್ಕೆ 2000 ವಿಶೇಷ ಬಸ್: ಮುಂಗಡ ಟಿಕೆಟ್ ಗೆ ರಿಯಾಯ್ತಿ ಘೋಷಿಸಿದ KSRTC -
ಮಗುವನ್ನ ಸಾಕಲು ಹಣ ಬೇಕಾದ್ರೆ ಯಾರ ಜೊತೆ ಬೇಕಿದ್ರೂ ಮಲಗುವೆ: ಬಿಗ್ಬಾಸ್ ಖ್ಯಾತಿಯ ಚಂದ್ರಿಕಾ ದೀಕ್ಷಿತ್ -
Karnataka Weather: ಬೆಂಗಳೂರು ಸೇರಿದಂತೆ ರಾಜ್ಯದ 17 ಜಿಲ್ಲೆಗಳಲ್ಲಿ ನಾಳೆವರೆಗೆ ಗುಡುಗು ಸಹಿತ ಮಳೆ ಸಾಧ್ಯತೆ -
SSLC ಪರೀಕ್ಷೆ 2026: ವೇಳಾಪಟ್ಟಿ, ಸಮಯ, ಡ್ರೆಸ್ಕೋಡ್ ಹಾಗೂ ಪ್ರಮುಖ ಮಾರ್ಗಸೂಚಿಗಳ ಮಾಹಿತಿ ಇಲ್ಲಿದೆ -
Karnataka Weather: ಕರ್ನಾಟಕದ ಈ 9 ಜಿಲ್ಲೆಗಳಲ್ಲಿ ಮಾರ್ಚ್ 21ರವರೆಗೆ ಮಳೆ ಸಾಧ್ಯತೆ: ಹವಾಮಾನ ಇಲಾಖೆ -
Bengaluru Rent: ಬೆಂಗಳೂರು ಬಾಡಿಗೆ ಮನೆ ಸಮಸ್ಯೆ: 10 ತಿಂಗಳ ಮುಂಗಡ ಹಣ,ಮಾಲೀಕರ ಕಿರಿಕಿರಿ; 2026ರ ಹೊಸ ಬಾಡಿಗೆ ನಿಯಮವೇನು












Click it and Unblock the Notifications