ಪ್ರತಿವರ್ಷ ಶೇ.5 ತ್ಯಾಜ್ಯ ಸೆಸ್ ಹೆಚ್ಚಳಕ್ಕೆ ಬಿಬಿಎಂಪಿ ಸಿದ್ಧತೆ
ಬೆಂಗಳೂರು, ಆಗಸ್ಟ್ 6: ಘನತ್ಯಾಜ್ಯ ನಿರ್ವಹಣಾ ಕರಡು ನೀತಿ ಸಿದ್ಧಪಡಿಸಲಾಗಿದ್ದು, ತ್ಯಾಜ್ಯ ಉಪಕರವನ್ನು ಪ್ರತಿ ವರ್ಷ ಶೇ.5ರಷ್ಟು ಹೆಚ್ಚಳ ಮಾಡಲು ಬಿಬಿಎಂಪಿ ಸಿದ್ಧವಾಗಿದೆ.
ನಿತ್ಯ 4 ಸಾವಿರ ಟನ್ಗೂ ಹೆಚ್ಚಿನ ತ್ಯಾಜ್ಯ ಉತ್ಪತ್ತಿಯಾಗುತ್ತಿದ್ದು, ಅದರ ನಿರ್ವಹಣೆಗಾಗಿ 7 ಪ್ರತ್ಯೇಕ ಸಂಸ್ಕರಣಾ ಘಟಕ ಸ್ಥಾಪಿಸಲಾಗಿದೆ. ಮಿಶ್ರತ್ಯಾಜ್ಯ ವಿಲೇವಾರಿಗಾಗಿ ಕ್ವಾರಿ ನಿಗದಿ ಮಾಡಲಾಗಿದೆ. ಹಾಗೆಯೇ, ಕಸ ಸಮಸ್ಯೆ ನಿರ್ವಹಣೆಗಾಗಿ ವಾರ್ಷಿಕ 1 ಸಾವಿರ ಕೋಟಿ ರೂ. ವ್ಯಯಿಸಲಾಗುತ್ತಿದೆ.
ನೀತಿಯಲ್ಲಿ ಮೊದಲನೆಯದಾಗಿ ಸಾರ್ವಜನಿಕರ ಜಾಗೃತಿ ಬಗ್ಗೆ ತಿಳಿಸಲಾಗಿದೆ. ಹಸಿ, ಒಣ, ಮೆಡಿಕಲ್ ಸೇರಿ ಎಲ್ಲ ಬಗೆಯ ತ್ಯಾಜ್ಯವನ್ನು ಸಂಸ್ಕರಿಸುವ ಮತ್ತು ಬಿಬಿಎಂಪಿಗೆ ನೀಡುವ ವಿಧಾನವನ್ನು ತಿಳಿಸಲಾಗಿದೆ.

ಅಂತೆಯೇ ತ್ಯಾಜ್ಯ ವಿಲೇವಾರಿಗೆ ಬಿಬಿಎಂಪಿ ವಾರ್ಷಿಕ 1 ಸಾವಿರ ಕೋಟಿ ರೂ. ವ್ಯಯಿಸುತ್ತಿದೆ. ಸಾರ್ವಜನಿಕರಿಂದ ಕೇವಲ 40ರಿಂದ 42 ಕೋಟಿ ರೂ. ಉಪಕರ ಸಂಗ್ರಹವಾಗುತ್ತಿದೆ. ಹೀಗಾಗಿ ಪ್ರತಿ ವರ್ಷ ಆಸ್ತಿ ಮಾಲೀಕರ ತೆರಿಗೆ ಮೊತ್ತದ ಶೇ. 5 ಉಪಕರ ಹೆಚ್ಚಿಸುವ ಕುರಿತು ಪ್ರಸ್ತಾಪಿಸಲಾಗಿದೆ. ಅದಕ್ಕೆ ಬಿಬಿಎಂಪಿ ಕೌನ್ಸಿಲ್ನಲ್ಲೂ ಅನುಮೋದನೆ ಪಡೆಯುವ ಅವಶ್ಯಕತೆಯಿಲ್ಲ ಎಂದು ತಿಳಿಸಲಾಗಿದೆ.
ಕರಡು ನೀತಿಯಲ್ಲಿ ಪ್ರಮುಖವಾಗಿ 1 ಸಾವಿರ ಚ. ಅಡಿವರೆಗಿನ ವಿಸ್ತೀರ್ಣದ ವಸತಿ ಕಟ್ಟಡಕ್ಕೆ ಪ್ರತಿ ತಿಂಗಳು 30 ರೂ. ಮತ್ತು ಗರಿಷ್ಠ 5 ಸಾವಿರ ಚ. ಅಡಿವರೆಗಿನ ವಸತಿ ಕಟ್ಟಡಗಳಿಗೆ ಆಯಾ ಕಟ್ಟಡಗಳ ವಿಸ್ತೀರ್ಣಕ್ಕನುಗುಣವಾಗಿ 200 ರೂ.ವರೆಗೆ ಮಾಸಿಕ ಉಪ ಕರ ನಿಗದಿ ಮಾಡಲಾಗಿದೆ.
ಅದೇ ರೀತಿ ಕೈಗಾರಿಕಾ ಕಟ್ಟಡಗಳಿಗೆ 1 ಸಾವಿರ ಚ.ಅಡಿವರೆಗೆ 100 ರೂ. ಮತ್ತು ಅದಕ್ಕಿಂತ ಮೇಲ್ಪಟ್ಟ ಕಟ್ಟಡಗಳಿಗೆ ಗರಿಷ್ಠ 300 ರೂ.ವರೆಗೆ ಮಾಸಿಕ ಉಪ ಕರ ವಸೂಲಿ ಮಾಡಲಾಗುತ್ತದೆ.
ಹೋಟೆಲ್, ಕಲ್ಯಾಣಮಂಟಪ, ಶಾಪಿಂಗ್ ಮಾಲ್ ಸೇರಿ ಬೃಹತ್ ತ್ಯಾಜ್ಯ ಉತ್ಪಾದಕ ಸಂಸ್ಥೆಗಳಲ್ಲಿ 10 ಸಾವಿರ ಚ. ಅಡಿವರೆಗೆ 300 ರೂ. ಮತ್ತು 50 ಸಾವಿರ ಚ.ಅಡಿವರೆಗಿನ ಕಟ್ಟಡಗಳಿಗೆ 600 ರೂ.ವರೆಗೆ ಉಪಕರ ನಿಗದಿಪಡಿಸಲಾಗಿದೆ.
ಸಾರ್ವಜನಿಕ ಸ್ಥಳಗಳಲ್ಲಿ ಕಸ ಎಸೆಯುವುದು, ಉಗುಳುವುದು, ಮಲ- ಮೂತ್ರ ವಿಸರ್ಜನೆ ಮೊದಲ ಬಾರಿ 500 ರೂ., ನಂತರ 1 ಸಾವಿರ ರೂ. ತ್ಯಾಜ್ಯ ವಿಂಗಡಿಸದೆ
ತ್ಯಾಜ್ಯ ವಿಂಗಡಿಸದೆ ವಿಲೇವಾರಿಗೆ ನೀಡುವ ಸಣ್ಣ ವಾಣಿಜ್ಯ ಮಳಿಗೆಗಳಿಗೆ: ಮೊದಲ ಬಾರಿ 1 ಸಾವಿರ ರೂ., ನಂತರ 2,500 ರೂ.; ಬೃಹತ್ ವಾಣಿಜ್ಯ ಮಳಿಗೆಗಳಿಗೆ: ಮೊದಲ ಬಾರಿ 2 ಸಾವಿರ ರೂ., ನಂತರ 5 ಸಾವಿರ ರೂ.
ಬೀದಿ ಬದಿ ವ್ಯಾಪಾರಿಗಳಿಗೂ ಮಾಸಿಕ ಗರಿಷ್ಠ 50 ರೂ.ವರೆಗೆ ಕರ ವಿಧಿಸುವ ಪ್ರಸ್ತಾಪ ಮಾಡಲಾಗಿದೆ. ಮೊದಲ ಸಲ 5 ಸಾವಿರ ರೂ., ನಂತರ 10 ಸಾವಿರ ರೂ. ತ್ಯಾಜ್ಯ ಸುಡುವುದು, ಎಲ್ಲೆಂದರಲ್ಲಿ ಎಸೆಯುವ ಸಾರ್ವಜನಿಕರಿಗೆ 5 ಸಾವಿರ ರೂ.; ವಾಣಿಜ್ಯ ಉದ್ದಿಮೆದಾರರಿಗೆ 25 ಸಾವಿರ ರೂ. ಮಾಂಸ ಮಾರಾಟ ಮಳಿಗೆ, ಕಸಾಯಿಖಾನೆಗಳಲ್ಲಿ ತ್ಯಾಜ್ಯ ವಿಂಗಡಿಸದಿದ್ದರೆ ಮೊದಲ ಬಾರಿ 1 ಸಾವಿರ ರೂ., ನಂತರ 2 ಸಾವಿರ ರೂ.
ನಿವೇಶನಗಳಿಗೆ ಪ್ರತಿ ಚದರ ಅಡಿಗೆ ಮಾಸಿಕ 20 ಪೈಸೆಯಂತೆ ಉಪಕರ ವಸೂಲಿ ಮಾಡಲು ನಿರ್ಧರಿಸಲಾಗಿದೆ. ಜತೆಗೆ ಬಿಬಿಎಂಪಿ ವ್ಯಾಪ್ತಿಯ ಹೋಟೆಲ್, ಸಮುದಾಯ ಭವನ ಸೇರಿದಂತೆ ಸಾರ್ವಜನಿಕ ಮತ್ತು ಖಾಸಗಿ ಕಟ್ಟಡ, ಖಾಲಿ ನಿವೇಶನಗಳಲ್ಲಿ ಕನಿಷ್ಠ 1 ವಾರ ಅಥವಾ ಅದಕ್ಕೂ ಹೆಚ್ಚು ದಿನ ನಡೆಯುವ ವಸ್ತುಪ್ರದರ್ಶನ, ಮನರಂಜನಾ ಕಾರ್ಯಕ್ರಮ, ವಿವಾಹ ಸಮಾರಂಭಗಳಲ್ಲಿ ಉತ್ಪತ್ತಿ ಯಾಗುವ ತ್ಯಾಜ್ಯಕ್ಕೂ ಉಪಕರ ನೀಡಬೇಕಿದೆ.
-
Sachin Tendulkar: ಅಭಿಷೇಕ್ ಶರ್ಮಾಗೆ ಕ್ರಿಕೆಟ್ ದೇವರು ಸಚಿನ್ ತೆಂಡ್ಯೂಲ್ಕರ್ ವಿಶೇಷ ಸಂದೇಶ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು -
ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ ಎಂಬ ಮಾತಿನಂತೆ ನಡೆದುಕೊಂಡ ಯುವರಾಜ್ ಸಿಂಗ್ ಶಿಶ್ಯ ಅಭಿಷೇಕ್ ಶರ್ಮಾ -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
"ಬೆಂಗಳೂರು ಮಲಯಾಳಿಗರ ಹಬ್" ಎಂದ ಕೇರಳಿಗರು, ವೈರಲ್ ವಿಡಿಯೋ ನೋಡಿ ಕಣ್ಣು ಕೆಂಪಾಗಿಸಿದ ಕನ್ನಡಿಗರು -
Bengaluru Property: ಬೆಂಗಳೂರಿನ 510 ಕೋಟಿ ಮೌಲ್ಯದ 14 ಎಕರೆ ಭೂಮಿ ವಶಕ್ಕೆ ಪಡೆದ ಜಿಬಿಎ, ಕಾರಣವೇನು -
Jaggery: ಬೆಲ್ಲದಲ್ಲಿ ಕಲಬೆರಕೆಯ ಕೆಮಿಕಲ್, ಬಣ್ಣ, ಸಕ್ಕರೆ ಮಿಶ್ರಣ: ಪರಿಶೀಲನೆ ಮಾಡುವ ಸರಳ ವಿಧಾನಗಳು -
ಟಿ20 ವಿಶ್ವಕಪ್ 2026 ಭಾರತದ ಮುಡಿಗೆ: ಬಾಲ ಮುದುರಿಕೊಂಡ 'ಸೈಲೆಂಟ್' ಸ್ಯಾಂಟ್ನರ್












Click it and Unblock the Notifications