Get Updates
Get notified of breaking news, exclusive insights, and must-see stories!

ಮಹಾರಾಷ್ಟ್ರದಲ್ಲಿ ಮಳೆ: ಕೃಷ್ಣಾ ನದಿಗೆ 65,000 ಕ್ಯೂಸೆಕ್ ನೀರು ಬಿಡುಗಡೆ

ಬೆಳಗಾವಿ, ಅಕ್ಟೋಬರ್ 15: ಮಹಾರಾಷ್ಟ್ರದಲ್ಲಿ ಮತ್ತೆ ಮಳೆಯಾಗುತ್ತಿದ್ದು, ಕೃಷ್ಣಾ ನದಿಯ ಒಳಹರಿವಿನಲ್ಲಿ ಏರಿಕೆಯಾಗಿದೆ. ಹೀಗಾಗಿ ಮತ್ತೆ ಪ್ರವಾಹದ ಆತಂಕ ಕಾಣಿಸಿಕೊಂಡಿದೆ. ಮಹಾರಾಷ್ಟ್ರ ಹಾಗೂ ಚಿಕ್ಕೋಡಿ ಉಪ ವಿಭಾಗದಲ್ಲಿ ಮೂರು ದಿನಗಳಿಂದ ಮಳೆಯಾಗುತ್ತಿದೆ. ಇದರಿಂದ ಕೃಷ್ಣಾ, ವೇದಗಂಗಾ ಮತ್ತು ದೂಧ್​ಗಂಗಾ ನದಿಗಳ ಒಳಹರಿವಿನಲ್ಲೂ ಏರಿಕೆಯಾಗಿದೆ. ಕೃಷ್ಣಾ ನದಿಗೆ 65,000ಕ್ಕೂ ಅಧಿಕ ಕ್ಯೂಸೆಕ್ ನೀರು ಹರಿದುಬರುತ್ತಿದೆ.

ಮಹಾರಾಷ್ಟ್ರದ ರಾಜಾಪೂರ ಬ್ಯಾರೇಜ್ ‌ನಿಂದ 53,500 ಕ್ಯೂಸೆಕ್, ದೂಧ್​​ಗಂಗಾದಿಂದ 11,616 ಕ್ಯೂಸೆಕ್ ನೀರು ಹರಿಸಿದ್ದು, ಒಟ್ಟು 65,000 ಕ್ಯೂಸೆಕ್​​ಗೂ ಅಧಿಕ ನೀರು ಕೃಷ್ಣಾ ನದಿಗೆ ಹರಿದು ಬರುತ್ತಿದೆ.

ಚಿಕ್ಕೋಡಿ - 86.4 ಮಿ.ಮೀ., ಅಂಕಲಿ - 68.8 ಮಿ.ಮೀ., ನಾಗರಮುನ್ನೊಳಿ - 48.6 ಮಿ.ಮೀ., ಸದಲಗಾ - 95 ಮಿ.ಮೀ., ಜೋಡಟ್ಟಿ - 50.5 ಮಿ.ಮೀ. ಮಳೆಯಾಗಿದೆ. ಸದ್ಯ ಕೊಯ್ನಾ ಜಲಾಶಯ ಶೇ. 99.39, ವಾರಣಾ ಜಲಾಶಯ ಶೇ. 100, ರಾಧಾನಗರಿ ಜಲಾಶಯ ಶೇ. 98.89, ಕಣೇರ ಜಲಾಶಯ ಶೇ.100, ಧೂಮ ಜಲಾಶಯ ಶೇ. 99.85, ಪಾಟಗಾಂವ ಶೇ. 100, ಧೂದ್​ಗಂಗಾ ಶೇ. 100ರಷ್ಟು ತುಂಬಿದೆ. ಹಿಪ್ಪರಗಿ ಬ್ಯಾರೇಜ್ ‌ನಿಂದ 68,000 ಹಾಗೂ ಆಲಮಟ್ಟಿ ಜಲಾಶಯದಿಂದ 1,17,000 ಕ್ಯೂಸೆಕ್ ನೀರು ಹೊರಗಡೆ ಬಿಡಲಾಗುತ್ತಿದೆ.

Belagavi: More Than 65000 Cusecs Of Water Released To Krishna River

ಚಿಕ್ಕೋಡಿ ಉಪ ವಿಭಾಗದ ಶಿನಾಳ-ಕಾತ್ರಾಳ, ಕೌಲಗುಡ್ಡ-ಮೋಳೆ, ಕೆಂಪವಾಡ - ಮಿರಜ, ಶಿರೂರ -ಖೇಳೆಗಾಂವ, ಕಾತ್ರಾಳ - ತಂಗಡಿ, ಸಂಬರಗಿ-ಆಜೂರ ಬಿಜ್ಜರಗಿ - ತೇಲಸಂಗ, ಕೆಂಪವಾಡ - ಖಟಾವ ರಸ್ತೆಗೆ ನುಗ್ಗಿದ ನೀರಿನಿಂದ ಜನರಿಗೆ ತೊಂದರೆ ಉಂಟಾಗಿದೆ. ಮೂರು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತವಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+