Belagavi: ಮಗಳಿಗೆ ಬಾಲ್ಯವಿವಾಹ ಬೇಡ ಎಂದ ಪತ್ನಿಯ ಕೈ-ಕಾಲು ಮುರಿದ ಪತಿ
ಬೆಳಗಾವಿ, ಮಾರ್ಚ್ 12: ಮಗಳಿಗೆ ಬಾಲ್ಯವಿವಾಹ ಬೇಡ ಎಂದಿರುವುದಕ್ಕೆ ಪತಿಯೇ ಪತ್ನಿಯ ಕೈ ಕಾಲು ಮುರಿದ ಘಟನೆ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಹಾರುಗೊಪ್ಪ ಗ್ರಾಮದಲ್ಲಿ ನಡೆದದಿದೆ. ಭೀರಪ್ಪ ಕರೆನ್ನವರ ಪತ್ನಿಯ ಮೇಲೆ ಹಲ್ಲೆ ನಡೆಸಿದ ವ್ಯಕ್ತಿ ಎಂದು ಗುರುತಿಸಲಾಗಿದೆ.
ಹಾರುಗೊಪ್ಪ ಗ್ರಾಮದ ಭೀರಪ್ಪ ಕರೆನ್ನವರ ಹಾಗೂ ಮಾಯವ್ವಾ ದಂಪತಿಗೆ 13 ವರ್ಷದ ಓರ್ವ ಮಗಳಿದ್ದಾಳೆ. ಆಕೆಯನ್ನು ಭೀರಪ್ಪ ಕರೆನ್ನವರನ ಅಣ್ಣನ ಹೆಂಡತಿ ಮನೆಯ ಹುಡುಗನಿಗೆ ಮದುವೆ ಮಾಡಿಸುವ ವಿಚಾರಕ್ಕೆ ಈ ಮಾರಾಮಾರಿ ನಡೆದಿದ್ದು, ಘಟನೆಯಲ್ಲಿ ಮಾಯವ್ವಾ ಕೈ ಕಾಲು ಮುರಿದಿದೆ.

ಭೀರಪ್ಪನ ಅಣ್ಣನ ಪತ್ನಿ ಹಾಗೂ ಮನೆಯವರು 13 ವರ್ಷದ ಬಾಲಕಿಯನ್ನು ಮದುವೆ ಮಾಡಿಸಿಕೊಡುವಂತೆ ಒತ್ತಾಯಿಸಿದ್ದಾರೆ. ಹುಡುಗನ ಮನೆಯಲ್ಲಿ 40 ಎಕರೆ ಜಮೀನು ಇದೆ. ನಿಮ್ಮ ಮಗಳು ಚೆನ್ನಾಗಿರುತ್ತಾಳೆ. ಹುಡುಗ ಸ್ವಲ್ಪ ಹುಚ್ಚನ ತರ ಇದ್ದಾನೆ. ಅವನಿಗೆ ಕೊಟ್ಟರೆ ಆಸ್ತಿ ಸಿಗುತ್ತದೆ ಎಂದು ಭೀರಪ್ಪನಿಗೆ ಆಮೀಷವೊಡ್ಡಿದ್ದಾರೆ.
40 ಎಕರೆ ಜಮೀನು ಹಾಗೂ ಆಸ್ತಿ ಆಸೆಗೆ ಬಿದ್ದ ಭೀರಪ್ಪ ಮಗಳನ್ನು ಆ ಯುವಕನಿಗೆ ಮದುವೆ ಮಾಡಿಕೊಡಲು ಒಪ್ಪಿದ್ದಾನೆ. ಈ ವಿಚಾರ ತಿಳಿದ ಮಾಯವ್ವಾ ಪತಿಯ ನಿರ್ಧಾರವನ್ನು ವಿರೋಧಿಸಿದ್ದಾಳೆ. ಆಸ್ತಿ ತೆಗೆದುಕೊಂಡು ಏನು ಮಾಡೋದು, ನಮ್ಮ ಮಗಳು ಮದುವೆ ವಯಸ್ಸಿಗೆ ಬಂದ ಮೇಲೆ ಮುಂದೆ ನೋಡೋಣ. ಇದು ಬಾಲ್ಯ ವಿವಾಹ ಆಗುತ್ತದೆ. ಮಗಳಿಗೆ ಇನ್ನೂ 13 ವರ್ಷ, ಒಳ್ಳೆಯ ಶಿಕ್ಷಣ ಕೊಡಿಸೋಣ ಮದುವೆ ಬೇಡ ಎಂದಿದ್ದಾರೆ.
ಆದರೆ ಭೀರಪ್ಪ, ಹುಡುಗನ ಮನೆಯವರು ಒಳ್ಳೆಯ ಆಸ್ತಿವಂತರು. ಮಗಳನ್ನು ಕೊಟ್ಟು ಬಿಡೋಣ ಎಂದು ಹಠ ಹಿಡಿದಿದ್ದಾನೆ. ಇದಕ್ಕೆ ಮಾಯವ್ವಾ ಸುತರಾಮ್ ಒಪ್ಪದೇ ಇದ್ದಾಗ, ಕೋಪಗೊಂಡು ಪತ್ನಿಗೆ ಹಿಗ್ಗಾಮುಗ್ಗಾ ಥಳಿಸಿ ಕೈ ಕಾಲು ಮುರಿದಿದ್ದಾನೆ. ಪತಿಯಿಂದಲೇ ಹಲ್ಲೆಗೊಳಗಾದ ಮಾಯವ್ವ ಸದ್ಯ ಬೈಲಹೊಂಗಲ ತಾಲೂಕು ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ.
ಈ ಅವಾಂತರಕ್ಕೆ ಸೂತ್ರಧಾರಿ ಭೀರಪ್ಪನ ಅಣ್ಣ ಹಾಗೂ ಅವನ ಪತ್ನಿಯ ಮನೆಯವರು ಎನ್ನುವುದು ಮಾಯವ್ವನ ಆರೋಪವಾಗಿದ್ದು, ಪ್ರಕರಣ ದಾಖಲಾಗಿದೆ. ಆದರೂ ಪೋಲಿಸರು ಅವರನ್ನು ಬಂಧಿಸಿಲ್ಲ ಎಂದು ದೂರಿದಿದ್ದಾರೆ. ಮುರಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
-
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
IPL ಐಪಿಎಲ್ ಫ್ರೀ ಟಿಕೆಟ್ ವಿವಾದ: ವೆಂಕಟೇಶ್ ಪ್ರಸಾದ್ – ಸಿದ್ದರಾಮಯ್ಯ ಭೇಟಿ ಫೋಟೋಗೆ ತೇಜಸ್ವಿ ಸೂರ್ಯ ಕೆಂಡ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು -
1ನೇ ತರಗತಿ ದಾಖಲಾತಿ: 6 ವರ್ಷ ತುಂಬಿರಬೇಕು ಎಂಬ ನಿಯಮವನ್ನು ಕೊಂಚ ಸಡಿಲಿಕೆ ಮಾಡಿದ ಸರ್ಕಾರ -
ಮಾ.30ರಂದು ನಡೆಯಬೇಕಿದ್ದ SSLC ಹಿಂದಿ ಪರೀಕ್ಷೆ ದಿಢೀರ್ ಮುಂದೂಡಿಕೆ: ಕಾರಣವೇನು? -
ಬೆಂಗಳೂರು-ಅರಸೀಕೆರೆ ನಡುವೆ ನೂತನ ಮೆಮು ರೈಲು ಸೇವೆ: ಈಡೇರಿತು ಪ್ರಯಾಣಿಕರ ಬಹುದಿನದ ಬೇಡಿಕೆ -
Viral Videlo: 2 ಗಂಟೆ ಸ್ಟ್ಯಾಚ್ಯೂ ರೀತಿ ನಿಂತ ಯುವಕ ವಿಡಿಯೋ ವೈರಲ್, ಭಾರತಕ್ಕೂ ಬಂತಾ ಅಮೆರಿಕದ ಜಾಂಬಿ ಡ್ರಗ್ಸ್ -
ಉದ್ಯೋಗ ಸಂದರ್ಶನ ಮಾಡಲು ಹೋದ CEOಗೆ ಬೆವರಿಳಿಸಿದ ಅಭ್ಯರ್ಥಿ, Viral ಆಯ್ತು ವಿಚಿತ್ರ ಕಥೆ -
Summer Camp: ನಟನ ಮೈಸೂರು ಸಂಸ್ಥೆಯಿಂದ ಮಕ್ಕಳಿಗೆ ಬೇಸಿಗೆ ಶಿಬಿರ 'ರಜಾಮಜಾ' ಆಯೋಜನೆ -
115 ರೂಪಾಯಿಯ ಪೊಂಗಲ್ಗೆ 273 ರೂ. ಬಿಲ್: ಸ್ವಿಗ್ಗಿ ವಿರುದ್ಧ ಸುಮಲತಾ ಅಂಬರೀಷ್ ಆಕ್ರೋಶ -
Sri Rama Navami 2026: ಶ್ರೀ ರಾಮನವಮಿ; ಧರ್ಮದ ಜಯದ ದಿವ್ಯ ಸಂದೇಶ












Click it and Unblock the Notifications