ಬೆಳಗಾವಿ: ಪ್ರವಾಹ ಪೀಡಿತ ಪ್ರದೇಶಗಳಿಗೆ ಕೇಂದ್ರ ತಂಡ ಭೇಟಿ, ಸಿಕ್ಕಿತೇ ಪರಿಹಾರ?
ಬೆಳಗಾವಿ, ಸೆಪ್ಟೆಂಬರ್ 8: ಕಳೆದ ಆಗಸ್ಟ್ ತಿಂಗಳಿನಲ್ಲಿ ಉತ್ತರ ಕರ್ನಾಟಕದಲ್ಲಾದ ಅತಿವೃಷ್ಠಿ ಹಾಗೂ ಪ್ರವಾಹದ ಹಿನ್ನೆಲೆ ಮಂಗಳವಾರ ಬೆಳಗಾವಿ ಜಿಲ್ಲೆಗೆ ಕೇಂದ್ರ ಅಧ್ಯಯನ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು.
ಕೇಂದ್ರ ಗೃಹ ಸಚಿವಾಲಯದ ಜಂಟಿ ಕಾರ್ಯದರ್ಶಿ ಕೆ.ವಿ.ಪ್ರತಾಪ್ ನೇತೃತ್ವದ ಕೇಂದ್ರ ತಂಡದಿಂದ ಬೆಳಗಾವಿ ಜಿಲ್ಲೆಯ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ, ಪರಿಶೀಲಿಸಿತು.
ಕೊಡಗಿನ ಮಳೆ ಹಾನಿ ವೀಕ್ಷಣೆಗೆ ಕೇಂದ್ರ ತಂಡ ಆಗಮನ
ಹೈದರಾಬಾದ್ ನಲ್ಲಿರುವ ಕೃಷಿ ಇಲಾಖೆಯ ಎಣ್ಣೆಬೀಜಗಳ ಅಭಿವೃದ್ಧಿ ನಿರ್ದೇಶನಾಲಯದ ನಿರ್ದೇಶಕರಾದ ಡಾ.ಮನೋಹರನ್ ಹಾಗೂ ಬೆಂಗಳೂರಿನ ಜಲಶಕ್ತಿ ಸಚಿವಾಲಯದ ಅಧೀಕ್ಷಕ ಎಂಜಿನಿಯರ್ ಗುರುಪ್ರಸಾದ್ ಜೆ. ಅವರು ಅತಿವೃಷ್ಟಿಯಿಂದ ಹಾನಿಗೊಳಗಾದ ಪ್ರದೇಶಗಳಲ್ಲಿ ಸಂಚರಿಸಿ ಮಾಹಿತಿಯನ್ನು ಕಲೆಹಾಕಿದರು. ಬೆಳಗಾವಿ ನಗರಕ್ಕೆ ಆಗಮಿಸಿದ ಇಬ್ಬರು ಸದಸ್ಯರ ತಂಡವನ್ನು ಸ್ವಾಗತಿಸಿದ ಜಿಲ್ಲಾಧಿಕಾರಿ ಎಂ.ಜಿ ಹಿರೇಮಠ ಅವರು, ಅತಿವೃಷ್ಟಿಯಿಂದ ಉಂಟಾಗಿರುವ ಹಾನಿಯ ಬಗ್ಗೆ ವಿವರಿಸಿದರು.
ಬ್ಯಾಂಕಿನಿಂದ ಸಾಲ ಪಡೆಯಲಾಗಿದೆಯೇ ಎಂದು ಕೇಳಿದ ತಂಡ
ಮೊದಲಿಗೆ ಹುಕ್ಕೇರಿ ತಾಲ್ಲೂಕಿನ ಬಡಕುಂದ್ರಿ ಗ್ರಾಮಕ್ಕೆ ಭೇಟಿ ನೀಡಿದ ತಂಡವು, ಅತಿವೃಷ್ಟಿಯಿಂದ ಸೋಯಾಬಿನ್ ಬೆಳೆ ಹಾನಿಯನ್ನು ಪರಿಶೀಲಿಸಿತು. 1.17 ಎಕರೆಯಲ್ಲಿ ಬೆಳೆದ ಸೋಯಾಬಿನ್ ಬೆಳೆ ಕಟಾವಿಗೆ ಬಂದಿತ್ತು. ಆದರೆ ಮಳೆಯಿಂದಾಗಿ ಸಂಪೂರ್ಣ ಹಾನಿಯಾಗಿದೆ. ಎಕರೆಗೆ 15 ಸಾವಿರ ಖರ್ಚು ಮಾಡಿದ್ದು, 15 ಕ್ವಿಂಟಲ್ ಬೆಳೆಯ ನಿರೀಕ್ಷೆಯಿತ್ತು. ಮಳೆಯಿಂದ ಇದೀಗ ಸಂಪೂರ್ಣ ಬೆಳೆ ನಾಶವಾಗಿದೆ ಎಂದು ರೈತ ಅಳಲು ತೋಡಿಕೊಂಡರು.
ಬಡಕುಂದ್ರಿ ಗ್ರಾಮದಲ್ಲಿ 30 ಹೆಕ್ಟೇರ್ ಬೆಳೆ ಸಂಪೂರ್ಣ ನಾಶವಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ವಿವರಿಸಿದರು. ಸೋಯಾಬಿನ್ ಬೆಳೆಯಲು ಬ್ಯಾಂಕಿನಿಂದ ಸಾಲ ಪಡೆಯಲಾಗಿದೆಯೇ ಎಂದು ತಂಡದ ಮುಖ್ಯಸ್ಥ ಮನೋಹರನ್ ರೈತನನ್ನು ಪ್ರಶ್ನಿಸಿದರು. ಇದಲ್ಲದೇ ಬೇರೆ ಬೆಳೆ ನಾಶವಾಗಿರುವ ಬಗ್ಗೆ ಅಧಿಕಾರಿಗಳಿಂದ ಮಾಹಿತಿಯನ್ನು ಪಡೆದುಕೊಂಡರು.
ಪ್ರತಿವರ್ಷವೂ ಇದೇ ರೀತಿ ಬೆಳೆಹಾನಿಯಾಗುತ್ತಿದೆ
ಈ ಸಂದರ್ಭದಲ್ಲಿ ಸರ್ಕಾರದ ಮುಖ್ಯ ಸಚೇತಕರಾದ ಮಹಾಂತೇಶ ಕವಟಗಿಮಠ, ಕಟಾವಿಗೆ ಬಂದಿದ್ದ ಸೋಯಾಬಿನ್ ಬೆಳೆ ಸಂಪೂರ್ಣ ನಾಶವಾಗಿದೆ. ಪ್ರತಿವರ್ಷವೂ ಇದೇ ರೀತಿ ಬೆಳೆಹಾನಿಯಾಗುತ್ತಿದೆ ಎಂದು ಕೇಂದ್ರ ಅಧ್ಯಯನ ತಂಡಕ್ಕೆ ತಿಳಿಸಿದರು.
ಹಿರಣ್ಯಕೇಶಿ
ನದಿ
ದಂಡೆಯಲ್ಲಿರುವ
ಚೌಗಲಾ
ಎಂಬುವವರ
ಜಮೀನನಲ್ಲಿ
ಸೋಯಾಬಿನ್
ಹಾಗೂ
ಪಕ್ಕದಲ್ಲಿದ್ದ
ಕಬ್ಬು
ಬೆಳೆಹಾನಿ
ಬಗ್ಗೆ
ಪರಿಶೀಲಿಸಿದರು.
ಇನ್ನು
ಇದೇ
ಸಮಯದಲ್ಲಿ
ಮಾತನಾಡಿದ
ಸ್ಥಳೀಯ
ರೈತರು,
ಪ್ರತಿವರ್ಷ
ಬೆಳೆಹಾನಿ
ತಪ್ಪಿಸಲು
ನದಿ
ದಂಡೆಯ
ಅಗಲೀಕರಣ
ಮಾಡಬೇಕು
ಎಂದು
ಒತ್ತಾಯಿಸಿದರು.
ಮಾಜಿ
ಸಚಿವ
ಶಶಿಕಾಂತ
ನಾಯಿಕ
ಅವರು,
ಪ್ರತಿವರ್ಷ
ಎದುರಾಗುತ್ತಿರುವ
ಸಮಸ್ಯೆಯನ್ನು
ವಿವರಿಸಿದರು.
ಪರಿಹಾರ ಬಿಡುಗಡೆಗೆ ಒತ್ತಾಯ
ಹೊಸೂರಿನಲ್ಲಿ ಗಜ್ಜರಿ ಬೆಳೆಹಾನಿ ಪರಿಶೀಲಿಸಿದಾಗ, ಎಕರೆಗೆ ಮೂರು ಲಕ್ಷ ರುಪಾಯಿ ಆದಾಯ ಬರುತ್ತಿತ್ತು. ಆದರೆ ಬೆಳೆಹಾನಿಯಿಂದ ದಿಕ್ಕು ತೋಚದಂತಾಗಿದೆ ಎಂದು ರೈತರು ಕೇಂದ್ರ ತಂಡಕ್ಕೆ ತಿಳಿಸಿದರು. ನಂತರ ಪಕ್ಕದ ಇಂಗಳಿ ಗ್ರಾಮದ ಕಲ್ಲಪ್ಪ ಅವರ ಜಮೀನಿನಲ್ಲಿ ಹಿನ್ನೀರಿನಿಂದ ಹಾನಿಗೊಳಗಾದ ಮೆಕ್ಕೆಜೋಳದ ಬೆಳೆಯನ್ನು ಪರಿಶೀಲಿಸಿದರು.
ಅತಿವೃಷ್ಟಿಯಿಂದ ಹಾನಿಗೊಳಗಾಗಿರುವ ಗೋಕಾಕ ತಾಲ್ಲೂಕಿನ ಲೋಳಸೂರ ಸೇತುವೆಯನ್ನು ಕೇಂದ್ರ ಅಧ್ಯಯನ ತಂಡ ಪರಿಶೀಲಿಸಿತು.
ಇದೇ ವೇಳೆ ಸ್ಥಳೀಯ ಜನರು, ಕಳೆದ ಬಾರಿ ಪ್ರವಾಹದಿಂದ ಮನೆಗಳನ್ನು ಕಳೆದುಕೊಂಡಿರುವ ಜನರಿಗೆ ತಕ್ಷಣವೇ ಪರಿಹಾರ ಬಿಡುಗಡೆಗೆ
ಪರಿಹಾರ ಮೊತ್ತ ಪ್ರಮಾಣವನ್ನು ಹೆಚ್ಚಿಸಬೇಕು
ತಕ್ಷಣ ಕ್ರಮ ಕೈಗೊಳ್ಳುವುದಾಗಿ ಭರವಸೆ
ಪರಿಹಾರ
ಮೊತ್ತ
ಪ್ರಮಾಣವನ್ನು
ಹೆಚ್ಚಿಸಬೇಕು.
ರಸ್ತೆ
ಸೇರಿದಂತೆ
ಬಹುತೇಕ
ಮೂಲಸೌಕರ್ಯಗಳಿಗೆ
ಹಾನಿಯಾಗಿದೆ
ಇದನ್ನು
ಪರಿಗಣಿಸಿ
ಹೆಚ್ಚಿನ
ಪರಿಹಾರ
ಒದಗಿಸಬೇಕು
ಎಂದು
ಜಿಲ್ಲಾಧಿಕಾರಿ
ಎಂ.ಜಿ.ಹಿರೇಮಠ
ಅವರಿಗೆ
ಮನವಿ
ಮಾಡಿಕೊಂಡರು.
ಪರಿಶೀಲನೆ
ಬಳಿಕ
ತೆರಳುತ್ತಿದ್ದ
ಕೇಂದ್ರ
ಅಧ್ಯಯನ
ತಂಡದ
ವಾಹನವನ್ನು
ಅಡ್ಡಗಟ್ಟಿದ
ಕೆಲವರು,
ಪರಿಹಾರ
ಬಿಡುಗಡೆಗೆ
ಆಗ್ರಹಿಸಿದರು.
ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಬೆಳೆಹಾನಿ ಮಾಹಿತಿ ನೀಡಿದರು
ಇದಾದ
ಬಳಿಕ
ಕೇಂದ್ರ
ಅಧ್ಯಯನ
ತಂಡವು
ಸವದತ್ತಿ
ಮಾರ್ಗವಾಗಿ
ಧಾರವಾಡ
ಜಿಲ್ಲೆಗೆ
ತೆರಳಿತು.
ಜಿಲ್ಲಾಧಿಕಾರಿ
ಎಂ.ಜಿ.ಹಿರೇಮಠ
ಹಾಗೂ
ಕೃಷಿ
ಇಲಾಖೆಯ
ಜಂಟಿ
ನಿರ್ದೇಶಕರಾದ
ಶಿವನಗೌಡ
ಪಾಟೀಲ
ಅವರು,
ಹುಕ್ಕೇರಿ,
ಗೋಕಾಕ
ಸೇರಿದಂತೆ
ಜಿಲ್ಲೆಯಲ್ಲಿ
ಉಂಟಾಗಿರುವ
ಬೆಳೆಹಾನಿಯ
ಕುರಿತು
ಮಾಹಿತಿಯನ್ನು
ನೀಡಿದರು.
ಜಿಲ್ಲಾ
ಪಂಚಾಯತ
ಮುಖ್ಯ
ಕಾರ್ಯನಿರ್ವಾಹಕ
ಅಧಿಕಾರಿ
ದರ್ಶನ್
ಎಚ್.ವಿ.,
ಉಪ
ವಿಭಾಗಾಧಕಾರಿ
ಅಶೋಕ
ತೇಲಿ,
ಕೃಷಿ
ಇಲಾಖೆಯ
ಉಪ
ನಿರ್ದೇಶಕರಾದ
ಎಚ್.ಡಿ.ಕೋಳೇಕರ್,
ತೋಟಗಾರಿಕೆ
ಇಲಾಖೆಯ
ಉಪನಿರ್ದೇಕ
ರವೀಂದ್ರ
ಹಕಾಟಿ
ಸೇರಿದಂತೆ
ವಿವಿಧ
ಇಲಾಖೆಯ
ಅಧಿಕಾರಿಗಳು
ಉಪಸ್ಥಿತರಿದ್ದರು.