ಬೆಳಗಾವಿ ಚುನಾವಣೆ: ಬಿಜೆಪಿಗೆ ಏದುಸಿರು ತಂದ ಎಂಇಎಸ್ ಅಭ್ಯರ್ಥಿ
ಲಕ್ಷಾಂತರ ಮತಗಳ ಅಂತರದಿಂದ ಕ್ಷೇತ್ರವನ್ನು ಗೆಲ್ಲುತ್ತಿದ್ದ ಬಿಜೆಪಿಗೆ ಒಂದು ಹಂತದಲ್ಲಿ ಸೋಲಾಗುತ್ತದೆ ಎನ್ನುವ ಲೆಕ್ಕಾಚಾರದಲ್ಲಿ ಮತಎಣಿಕೆ ಸಾಗುತ್ತಿತ್ತು. 89 ರೌಂಡ್ ಗಳ ಮತಎಣಿಕೆಯಲ್ಲಿ 35ಕ್ಕೂ ಹೆಚ್ಚು ರೌಂಡ್ ಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ಲೀಡ್ ನಲ್ಲಿದ್ದರು.
ವಿಜಯಲಕ್ಷ್ಮೀ ಚಂಚಲೆಯಾಗಿ, ಸೂಪರ್ ಓವರ್ ನಂತೆ ಸಾಗುತ್ತಿದ್ದ ಮತಎಣಿಕೆಯಲ್ಲಿ ಬಿಜೆಪಿ ಅಭ್ಯರ್ಥಿ ಮಂಗಳ ಅಂಗಡಿ ಗೆದ್ದರು ಎನ್ನುವುದಕ್ಕಿಂತ ಹೆಚ್ಚಾಗಿ ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಜಾರಕಿಹೊಳಿಗೆ ವೀರೋಜಿತ ಸೋಲಾಯಿತು.
ಕೆಲವೊಮ್ಮೆ ಮೂರಂಕಿ, ಕೆಲವೊಮ್ಮೆ ನಾಲ್ಕಂಕಿ ಲೀಡ್ ನಲ್ಲಿ ಮಾತ್ರ ಇಬ್ಬರು ಅಭ್ಯರ್ಥಿಗಳು ಸಾಗುತ್ತಿದ್ದರು. ಬೆಳಗಾವಿ ವ್ಯಾಪ್ತಿಯ ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿ, ಆರರಲ್ಲಿ ಬಿಜೆಪಿ ಶಾಸಕರಿದ್ದಾರೆ.
ಇಷ್ಟಾದರೂ, ಬಿಜೆಪಿ ಗೆಲುವು ಸಾಧಿಸಲು ಹರಸಾಹಸ ಪಡಬೇಕಾಗಿ ಬಂದಿದ್ದು ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಅಭ್ಯರ್ಥಿ, ಊಹಿಸಲೂ ಅಸಾಧ್ಯವಾದ ರೀತಿಯಲ್ಲಿ ಬಿಜೆಪಿ ಮತಗಳ ಬುಟ್ಟಿಗೆ ಲಗ್ಗೆ ಇಟ್ಟಿದ್ದು.

ಮತ ಎಣಿಕೆ ಅಂತಿಮ ಹಂತದವರೆಗೂ ರೋಚಕ ತಿರುವನ್ನು ಪಡೆಯುತ್ತಲೇ ಸಾಗಿತು
ಪ್ರತಿ ಸುತ್ತಿನಲ್ಲೂ ಹಾವು-ಏಣಿ ಆಟದಂತಿದ್ದ ಬೆಳಗಾವಿ ಕ್ಷೇತ್ರದ ಮತ ಎಣಿಕೆ ಅಂತಿಮ ಹಂತದವರೆಗೂ ರೋಚಕ ತಿರುವನ್ನು ಪಡೆಯುತ್ತಲೇ ಸಾಗಿತು. ಮಂಗಳ ಅಂಗಡಿಗೆ 4,40,327, ಸತೀಶ್ ಜಾರಕಿಹೊಳಿಗೆ 4,35,087 ಮತಗಳು ಚಲಾವಣೆಯಾದವು. ನೋಟಾಗೆ 10,631 ಮತಗಳು ಬಿದ್ದವು. ಕೊನೆಗೂ, ಜಿದ್ದಾಜಿದ್ದಿನ ಹಣಾಹಣಿಯಲ್ಲಿ ಬಿಜೆಪಿ ಅಭ್ಯರ್ಥಿ 5,240 ಮತಗಳ ಅಂತರದಿಂದ ಗೆಲುವು ಸಾಧಿಸಿದರು.

ಎಂಇಎಸ್ ಅಭ್ಯರ್ಥಿ ಶುಭಂ ವಿಕ್ರಾಂತ್ ಶಿಲ್ಕೆ ಬಿಜೆಪಿಗೆ ತಲೆನೋವಾಗಿ ಪರಿಣಮಿಸಿದರು
ಆದರೆ, ಬಿಜೆಪಿ ಅಭ್ಯರ್ಥಿಗೆ ಒಂದು ಹಂತದಲ್ಲಿ ಅಕ್ಷರಸಃ ತೊಡಕಾಗುತ್ತಾ ಸಾಗಿದ್ದು ಎಂಇಎಸ್ ಅಭ್ಯರ್ಥಿ ಶುಭಂ ವಿಕ್ರಾಂತ್ ಶಿಲ್ಕೆ. ಊಹಿಸಲೂ ಅಸಾಧ್ಯವಾದ ರೀತಿಯಲ್ಲಿ ಬಿಜೆಪಿಗೆ ತಲೆನೋವಾಗಿ ಪರಿಣಮಿಸಿದ ಈ ಅಭ್ಯರ್ಥಿ 1,17,174 ಮತಗಳನ್ನು ಪಡೆದರು. ಎಂಇಎಸ್ ಗೆ ಬೀಳುವ ಮತಗಳು ಸಾಂಪ್ರದಾಯಿಕವಾಗಿ ಬಿಜೆಪಿಯದ್ದೇ ಎಂದು ಹೇಳಲಾಗುತ್ತದೆ.

ಎಂಇಎಸ್ ಗೆ ಗ್ರಾಮೀಣದಲ್ಲಿ 45,536 ಮತ್ತು ದಕ್ಷಿಣದಲ್ಲಿ 44,950 ಮತಗಳು
ಪ್ರಮುಖವಾಗಿ ಬೆಳಗಾವಿ ಗ್ರಾಮೀಣ, ಬೆಳಗಾವಿ ದಕ್ಷಿಣದಲ್ಲಿ ಈ ಅಭ್ಯರ್ಥಿ ಪಡೆದ ಮತಗಳು ಹೆಚ್ಚುಕಮ್ಮಿ ಎರಡು ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿ ಪಡೆದ ಮತಗಳಿಗೆ ಹತ್ತಿರವಾಗಿತ್ತು. ಗ್ರಾಮೀಣದಲ್ಲಿ 45,536 ಮತ್ತು ದಕ್ಷಿಣದಲ್ಲಿ 44,950 ಮತಗಳನ್ನು ಎಂಇಎಸ್ ಅಭ್ಯರ್ಥಿ ಪಡೆದರು.
Recommended Video

ಬೆಳಗಾವಿಯಲ್ಲಿ ಬಿಜೆಪಿ ಪ್ರಯಾಸದಿಂದ ಗೆಲುವನ್ನು ಸಾಧಿಸಿತು
ಇನ್ನು, ಬೆಳಗಾವಿ ಉತ್ತರದಲ್ಲಿ 24,594 ಮತಗಳನ್ನು ಪಡೆಯುವ ಮೂಲಕ, ಕ್ಷೇತ್ರದ ಚಿತ್ರಣವನ್ನೇ ಎಂಇಎಸ್ ಅಭ್ಯರ್ಥಿ ಬದಲಿಸಿದರು. ಆದರೆ, ಬೆಳಗಾವಿ ನಗರ ಮತ್ತು ಗ್ರಾಮಾಂತರ ಹೊರತಾಗಿ ವಿಕ್ರಾಂತ್ ಶಿಲ್ಕೆ ಹೆಚ್ಚಿನ ಮತ ಪಡೆಯುವಲ್ಲಿ ಸಫಲರಾಗಲಿಲ್ಲ. ಒಟ್ಟಿನಲ್ಲಿ, ಬಿಜೆಪಿಗೆ ಸುಲಭ ತುತ್ತಾಗಬಹುದು ಎಂದು ಗ್ರಹಿಸಲಾಗಿದ್ದ ಬೆಳಗಾವಿಯಲ್ಲಿ ಬಿಜೆಪಿ ಪ್ರಯಾಸದಿಂದ ಗೆಲುವನ್ನು ಸಾಧಿಸಿತು.
-
March 26 Horoscope: ಇಂದು ಈ 3 ರಾಶಿಗಳ ಜೀವನದಲ್ಲಿ ದೊಡ್ಡ ಬದಲಾವಣೆ -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಬಿಸಿಸಿಐ ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ -
RCB ಮಾರಾಟದ ಬಗ್ಗೆ ವಿಜಯ್ ಮಲ್ಯ ಭಾವುಕ ಪೋಸ್ಟ್ ; ವಿರಾಟ್ ಕೊಹ್ಲಿ ಬಗ್ಗೆ ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ -
Bengaluru Startup: ಬೆಂಗಳೂರು ಸ್ಟಾರ್ಟ್ಅಪ್ ರಾಜಧಾನಿ ಅಲ್ಲ ಎಂದ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ -
Viral Video: ತರಗತಿಯಲ್ಲೇ ವಿದ್ಯಾರ್ಥಿನಿಗೆ ಚಾಕೊಲೇಟ್ ಕೊಟ್ಟು ಪ್ರಪೋಸ್; ಚಪ್ಪಲಿ ಏಟು ತಿಂದ ಪ್ರೊಫೆಸರ್ -
Rain: ಕರ್ನಾಟಕದ ಕಾಶ್ಮೀರವಾದ ಮಾಚಾಪುರ: ಜೆಸಿಬಿ ಮೂಲಕ ಆಲಿಕಲ್ಲು ತೆರವು, ಕಂಗಾಲಾದ ಅನ್ನದಾತ -
Tamarind Price: ಹುಣಸೆ ಬೆಲೆಯಲ್ಲಿ ಭರ್ಜರಿ ಹೆಚ್ಚಳ: ಇಂದಿನ ಬೆಲೆ ಎಷ್ಟಿದೆ, ಹುಣಸೆ ಹಣ್ಣು ಬೆಲೆ ಏರಿಕೆಗೆ ಕಾರಣವೇನು -
ಲಕ್ಷಾಂತರ ರೂಪಾಯಿ ಸಂಬಳದ ಕೆಲಸಕ್ಕೆ ಗುಡ್ಬೈ: ಸಿಂಗಾಪುರದಿಂದ ಮುಂಬೈಗೆ ಬಂದು ಕವಿಯಾದ ಭಾರತೀಯ ಮೂಲದ ಯುವತಿ -
Bengaluru School: ರಾಜಾಜಿನಗರದಲ್ಲಿ ಶಾಲೆ ವಿರುದ್ಧ ನಿವಾಸಿಗಳ ಬೇಸರ: ಹೈಕೋರ್ಟ್ ನೋಟಿಸ್ ಜಾರಿ -
Vande Bharat Express: ತಂಬಾಕು ಉಗಿಯಲು ಹೋಗಿ ಹೈಸ್ಪೀಡ್ ರೈಲಿಗೆ ಡಿಕ್ಕಿ, ವ್ಯಕ್ತಿ ಸಾವು Video -
ಮತಾಂತರವಾದರೆ SC ಸ್ಥಾನಮಾನ ರದ್ದು ಬಗ್ಗೆ ಸುಪ್ರೀಂ ಕೋರ್ಟ್ ತೀರ್ಪು; ಕೇಂದ್ರದ ವಿರುದ್ಧ ಕಾಂಗ್ರೆಸ್ ಕೆಂಡ












Click it and Unblock the Notifications