'ಭಾರಿ ತಿಮಿಂಗಲ ಬಲೆಗೆ ಕೆಡವಲು ರವಿ ಸ್ಕೆಚ್ ಹಾಕಿದ್ರು'
ಬೆಂಗಳೂರು, ಮಾ.18: ಐಎಎಸ್ ಅಧಿಕಾರಿ ಡಿಕೆ ರವಿ ಅವರು ಸಾಯುವುದಕ್ಕೂ ನಾಲ್ಕು ದಿನಗಳ ಮುಂಚೆ ನಗರದ ಪ್ರಮುಖ ಸಾಮಾಜಿಕ ಕಾರ್ಯಕರ್ತ ಗಣೇಶ್ ಎಸ್ ಕೌಂಡಿನ್ಯ ಅವರಿಗೆ ಫೋನ್ ಕಾಲ್ ಮಾಡಿ ಮಾತನಾಡಿದ್ದರು. ಗಣೇಶ್ ನೆರವಿನಿಂದ ಮುಂದಿನ ವಾರ ಭಾರಿ ತಿಮಿಂಗಲವನ್ನೊಂದನ್ನು ಕೆಡವಲು ರವಿ ಸ್ಕೆಚ್ ಹಾಕಿದ್ದರು ಎಂಬ ವಿಷಯ ಬೆಳಕಿಗೆ ಬಂದಿದೆ.
ಈ ಬಗ್ಗೆ ಸ್ವತಃ ಗಣೇಶ್ ಕೌಂಡಿನ್ಯ ಅವರು ಖಾಸಗಿ ಮಾಧ್ಯಮಗಳಿಗೆ ತಿಳಿಸಿದ್ದಾರೆ. ವಾಣಿಜ್ಯ ತೆರಿಗೆ ಇಲಾಖೆಯಿಂದ ಮುಂದಿನ ವಾರ ದಾಳಿ ನಡೆಸಲು ಯೋಜನೆ ರೂಪಿಸಲಾಗಿತ್ತು. ನನಗೆ ಗುರುವಾರ(ಮಾ.12) ಫೋನ್ ಕರೆ ಮಾಡಿದ್ದರು. [ಸಿಬಿಐ ಬೇಡ ಸಿಐಡಿಯಿಂದಲೇ ತನಿಖೆಯಾಗಲಿ]
ಸುಮಾರು ಏಳೆಂಟು ನಿಮಿಷ ಮಾತುಕತೆ ನಡೆಸಿದೆವು. ವಾರಾಂತ್ಯದಲ್ಲಿ ಇಬ್ಬರು ಭೇಟಿಯಾಗಬೇಕಿತ್ತು. ಮಾಹಿತಿ ವಿನಿಮಯ ಮಾಡಿಕೊಳ್ಳಲು ರವಿ ತುಂಬಾ ಉತ್ಸುಕರಾಗಿದ್ದರು. ಅದರೆ, ನಿಜಕ್ಕೂ ಆಘಾತವಾಗಿದೆ.[ರವಿ ಸೂಪರ್ ಟ್ರ್ಯಾಕ್ ರೆಕಾರ್ಡ್]

ರವಿ ಆತ್ಮಹತ್ಯೆ ಮಾಡಿಕೊಂಡಿಲ್ಲ: ರವಿ ಡೇರ್ ಡೇವಿಲ್ ಅಧಿಕಾರಿಯಾಗಿದ್ದರು. ನಾಲ್ಕು ತಿಂಗಳ ಅವಧಿಯಲ್ಲಿ ದೊಡ್ಡ ದೊಡ್ಡ ಕಂಪನಿಗಳ ಮೇಲೆ ದಾಳಿ ನಡೆಸಿ 129 ಕೋಟಿ ರು ತೆರಿಗೆ ಹಣ ಸರ್ಕಾರದ ಬೊಕ್ಕಸ ಸೇರುವಂತೆ ಮಾಡಿದ್ದರು. ನನ್ನ ಬಳಿ ದೊಡ್ಡ ದೊಡ್ಡ ರಿಯಲ್ ಎಸ್ಟೇಟ್ ಕಂಪನಿಗಳ ಮಾಹಿತಿ ಇದೆ. ಇದನ್ನು ರವಿ ಬಳಿ ಹಂಚಿಕೊಳ್ಳಲು ನಾನು ಸಿದ್ಧವಿದ್ದೆ. ಅದರೆ, ರವಿ ಹತ್ಯೆಯಾಗಿದ್ದು ನಿಜಕ್ಕೂ ಆಘಾತಕಾರಿ ಎಂದು ಗಣೇಶ್ ಹೇಳಿದ್ದಾರೆ. [ರವಿ ಸಾವಿಗೆ ಕಾರಣವೇನು? ಓಟ್ ಹಾಕಿ]
ಮಾಧ್ಯಮ ಮಿತ್ರರೊಬ್ಬರಿಂದ ನನಗೆ ರವಿ ಪರಿಚಯವಾಯಿತು. ಅವರು ಕೋಲಾರದಲ್ಲಿ ಜಿಲ್ಲಾಧಿಕಾರಿಯಾಗಿ ಕೈಗೊಂಡಿದ್ದ ಕ್ರಮಗಳು, ನಡೆಸಿದ್ದ ದಾಳಿಗಳ ಬಗ್ಗೆ ತಿಳಿದಿತ್ತು. ಹೀಗಾಗಿ ರವಿ ಬಗ್ಗೆ ನಂಬಿಕೆ ಬೆಳೆಯಿತು. [ಸಿದ್ದು ಮೇಲೆ ಸಾಕ್ಷಿ ನಾಶದ ಆರೋಪ]
ತೆರಿಗೆಗಳ್ಳರ ಮೇಲೆ ರವಿಗೆ ಸಿಟ್ಟಿತ್ತು: ರವಿ ಇತ್ತೀಚೆಗೆ ದಾಳಿ ನಡೆಸಿದ ಕಂಪನಿಗಳ ಮೇಲೆ ಈಗಾಗಲೇ ಆದಾಯ ತೆರಿಗೆ ಹಾಗೂ ಸೇವಾ ತೆರಿಗೆ ಇಲಾಖೆ ದಾಳಿ ನಡೆಸಿದ್ದವು. ಆದರೆ, ರವಿ ತನ್ನ ಇಲಾಖೆಯಿಂದ ದಾಳಿ ನಡೆಸಿ ನೂರಾರು ಕೋಟಿ ತೆರಿಗೆ ಹಣ ಸಂಗ್ರಹಿಸಿದರು.

ಅದರೆ, ರಾಜಕಾರಣಿಗಳ ಜೊತೆ ಒಡನಾಟವಿದ್ದ ಭಾರಿ ಕಂಪನಿಯೊಂದರ ಮೇಲೆ ದಾಳಿ ನಡೆಸಲು ಸೂಕ್ತ ದಾಖಲೆಗಳ ನೆರವು ಬೇಕಿತ್ತು. ಇದನ್ನು ಒದಗಿಸಲು ನಾನು ಮುಂದಾಗಿದ್ದೆ. ಬೇರುಮಟ್ಟದಿಂದ ತೆರಿಗೆಗಳ್ಳರನ್ನು ಬಯಲಿಗೆಳೆಯಲು ರವಿ ಹೋರಾಟ ನಡೆಸಿದ್ದರು. [ಮರಳು ಮಾಫಿಯಾ ಎಂದರೇನು?]
ಮಾಫಿಯಾ ಕೈವಾಡ ಇರಬಹುದೇ?: ಲ್ಯಾಂಡ್, ಸ್ಯಾಂಡ್ ಮಾಫಿಯಾ ಕೈವಾಡ ಇದೆ ಎಂಬ ವಾದವನ್ನು ಸುಲಭಕ್ಕೆ ತೆಗೆದು ಹಾಕುವಂತಿಲ್ಲ. ದೊಡ್ಡ ದೊಡ್ಡವರ ದ್ವೇಷ ಕಟ್ಟಿಕೊಂಡಿದ್ದ ರವಿ ಅವರ ಸಾವಿನ ನಿಗೂಢತೆ ಬಯಲಾಗಬೇಕಿದೆ. ಸಿಐಡಿ ಬದಲಿಗೆ ಸಿಬಿಐನಂಥ ಉನ್ನತ ಮಟ್ಟದ ಸಂಸ್ಥೆಯಿಂದ ತನಿಖೆಯಾಗಬೇಕಿದೆ ಎಂದು ಗಣೇಶ್ ಹೇಳಿದರು.
-
RCB Vs SRH: ಎಸ್ಆರ್ಎಚ್ ವಿರುದ್ಧದ ಐಪಿಎಲ್ ಉದ್ಘಾಟನಾ ಪಂದ್ಯದ ಟಿಕೆಟ್ ಬುಕಿಂಗ್ ಕುರಿತು ಆರ್ಸಿಬಿ ಬಿಗ್ ಅಪ್ಡೇಟ್ -
ಜೋಶ್ ಹ್ಯಾಜಲ್ವುಡ್ ಔಟ್, 7 ಕೋಟಿಯ ಆಟಗಾರನಿಗಿಲ್ಲ ಸ್ಥಾನ; ಅಶ್ವಿನ್ ಹೇಳಿದ ಆರ್ಸಿಬಿ ಸಂಭಾವ್ಯ ಪ್ಲೇಯಿಂಗ್ 11 ಇಲ್ಲಿದೆ -
Gold Price Today: ಇಂದು ಚಿನ್ನ-ಬೆಳ್ಳಿ ದರದಲ್ಲಿ ದಾಖಲೆಯ ಇಳಿಕೆ, 30000 ರೂ ಕುಸಿದ ಬಿಳಿ ಲೋಹ -
AI ಮೂಲಕ ಬರುವ ಉದ್ಯೋಗ ಅರ್ಜಿಗಳಿಂದ ಬೆಂಗಳೂರು ಉದ್ಯಮಿ ಬೇಸರ: 'ಅರ್ಜಿಗಳು ಜಾಸ್ತಿ, ಅರ್ಹತೆ ಕಡಿಮೆ’ -
ತಿಂಗಳಿಗೆ 50 ಸಾವಿರ ಸಂಬಳ ಇದೆಯಾ? 2026ರಲ್ಲಿ ಬೆಂಗಳೂರಿನಂತಹ ಮಹಾನಗರದಲ್ಲಿ ಜೀವನ ವೆಚ್ಚ ಎಷ್ಟಾಗುತ್ತೆ ಗೊತ್ತಾ? ಇಲ್ಲಿದೆ ಮಾಹಿತಿ -
Rishab Shetty: ಹೊಂಬಾಳೆ ಫಿಲ್ಮ್ಸ್ ಅನ್ಫಾಲೋ ಮಾಡಿದ ರಿಷಬ್ ಶೆಟ್ಟಿ: ಕಾಂತಾರ ಕುಟುಂಬದಲ್ಲಿ ಬಿರುಕು ವದಂತಿ -
Bengaluru Second Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣದ ಸ್ಥಳ: ಸಚಿವ ಎಂ.ಬಿ.ಪಾಟೀಲ್ ಮಹತ್ವದ ಮಾಹಿತಿ -
ಮಳೆ.. ಮಳೆ.. ಮುಂದಿನ 48 ಗಂಟೆಯಲ್ಲಿ ಮಳೆ ಬಗ್ಗೆ ಹವಾಮಾನ ಇಲಾಖೆ ಮಹತ್ವದ ಮಾಹಿತಿ... Karnataka Rain -
March 20 Horoscope: ಆರೋಗ್ಯ ಮತ್ತು ಹಣಕಾಸು ವಿಷಯದಲ್ಲಿ ಈ ರಾಶಿಗೆ ಲಾಭ -
Karnataka Rain: ಬೆಂಗಳೂರು ಸೇರಿ 18 ಜಿಲ್ಲೆಗಳಲ್ಲಿ ನಾಳೆವರೆಗೆ ಗುಡುಗು ಸಹಿತ ಮಳೆ ಸಾಧ್ಯತೆ -
40,000 ಹೋಟೆಲ್ ಮಾಲೀಕರಿಗೆ ಭರ್ಜರಿ ಸುದ್ದಿ, ಎಲ್ಪಿಜಿ ಸಿಲಿಂಡರ್ ನಿಯಮ ಬದಲಾವಣೆ... LPG Cylinder Supply -
ಕೇವಲ 2 ನಿಮಿಷದಲ್ಲಿ ಉದ್ಯೋಗ ಅರ್ಜಿ ರಿಜೆಕ್ಟ್: 'ಎಐ' ನೇಮಕಾತಿ ಬಗ್ಗೆ ಭಾರತೀಯ ಮೂಲದ ವಿದ್ಯಾರ್ಥಿನಿ ಬೇಸರ












Click it and Unblock the Notifications