'ಡಿಕೆಶಿ ಬಗ್ಗೆ ಅಸಮಾಧಾನವಿಲ್ಲ, ಯಾರಿಗಾದ್ರು ಒಬ್ಬರಿಗೆ ಸಚಿವ ಸ್ಥಾನ ಸಿಗಲಿ'

Recommended Video

      ಡಿಕೆಶಿ ಬಗ್ಗೆ ಅಸಮಾಧಾನವಿಲ್ಲ, ಯಾರಿಗಾದ್ರು ಒಬ್ಬರಿಗೆ ಸಚಿವ ಸ್ಥಾನ ಸಿಗಲಿ | Oneindia Kannada

      ಬಳ್ಳಾರಿ, ಸೆಪ್ಟೆಂಬರ್.14: ಮಾಧ್ಯಮಗಳು ವಾಸ್ತವ ಸ್ಥಿತಿಯನ್ನು ತಿಳಿದುಕೊಳ್ಳಬೇಕು. ಬಳ್ಳಾರಿ ಜಿಲ್ಲೆಯ ಆರು ಜನ ಶಾಸಕರ ಬೇಡಿಕೆ ಒಂದೇ. ಜಿಲ್ಲೆಯ ಶಾಸಕರಿಗೆ ಸಚಿವ ಸ್ಥಾನ ಕೊಡಬೇಕೆನ್ನುವುದು...ಎಂದು ಹೊಸಪೇಟೆ ವಿಜಯನಗರ ಶಾಸಕ ಆನಂದ್ ಸಿಂಗ್ ಹೇಳಿದರು.

      ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ ಈ ವಿಷಯ ತಿಳಿಸಿದ ಅವರು, ಡಿಕೆ ಶಿವಕುಮಾರ್ ಅವರನ್ನು ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ನೇಮಕ ಮಾಡಲಾಗಿದೆ. ಇದರಿಂದ ನಮಗೆ ಯಾವುದೇ ರೀತಿಯ ಅಸಮಾಧಾನ ಇಲ್ಲ. ಶಿವಕುಮಾರ್ ನಮ್ಮ ಪಕ್ಷದ ಅನುಭವಿ ಹಿರಿಯ ನಾಯಕರು.

      ಡಿಕೆಶಿ ಅವರನ್ನು ಬದಲಾವಣೆ ಮಾಡುವಂತೆ ನಮ್ಮ ಪಕ್ಷದ ಅಧ್ಯಕ್ಷರಿಗೆ ನಾವು ಯಾರೂ ಒತ್ತಡ ತಂದಿಲ್ಲ. ನಮ್ಮ ಜಿಲ್ಲೆಗೆ ಡಿಕೆಶಿಯವರು ಉಸ್ತುವಾರಿ ಸಚಿವರಾಗಿ ಬಂದಾಗ ಎಲ್ಲಾ ಶಾಸಕರು ಸ್ವಾಗತ ಮಾಡಿದ್ದೇವೆ.

      MLA Anand Singh says Media needs to know the reality

      ಜಿಲ್ಲೆಯ ಆರು ಜನ ಶಾಸಕರು ಡಿಕೆಶಿ ಅವರನ್ನ ಬದಲಾವಣೆ ಮಾಡಬೇಕೆಂದು ಯಾವತ್ತು ಆಲೋಚನೆ ಮಾಡಿಲ್ಲ. ಶಾಸಕರ ಬೇಡಿಕೆ ಒಂದೇ, ಯಾರಿಗಾದ್ರು ಸಚಿವ ಸ್ಥಾನ ಸಿಗಬೇಕು ಎಂದು ಆನಂದ್ ಸಿಂಗ್ ತಿಳಿಸಿದರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+