Get Updates
Get notified of breaking news, exclusive insights, and must-see stories!

ಆಂಧ್ರ ದಂಪತಿಗಳ ವಿವಾಹ ಪೂರ್ವ ಶೂಟಿಂಗ್: ಹಂಪಿಯ ಪಾರಂಪರಿಕ ನಿಯಮ ಉಲ್ಲಂಘನೆ

ಬಳ್ಳಾರಿ, ನವೆಂಬರ್ 24: ಹಂಪಿಯಲ್ಲಿ ನಡೆದ ವಿವಾಹ ಪೂರ್ವ ಫೋಟೋಶೂಟ್‌ಗೆ ಆಂಧ್ರಪ್ರದೇಶದಿಂದ ದಂಪತಿಗಳು ಬಂದಿದ್ದು, ಪಾರಂಪರಿಕ ತಾಣದ ನಿರ್ಬಂಧಿತ ಸ್ಥಳಗಳಲ್ಲಿ ನೂತನ ದಂಪತಿಗಳಿಗೆ ಹೇಗೆ ಚಿತ್ರೀಕರಣಕ್ಕೆ ಅವಕಾಶ ನೀಡಲಾಯಿತು ಎಂದು ಸ್ಥಳೀಯರು ಅಧಿಕಾರಿಗಳನ್ನು ಪ್ರಶ್ನಿಸಿದ್ದಾರೆ.

ಹಂಪಿಯ ಪ್ರಸಿದ್ಧ ವಿಜಯ ವಿಠ್ಠಲ ದೇವಾಲಯ ಸಂಕೀರ್ಣ ಮತ್ತು ಕಮಲ್ ಮಹಲ್ ಸೇರಿದಂತೆ ಹಂಪಿಯ ವಿವಿಧ ಸ್ಥಳಗಳಲ್ಲಿ ಚಿತ್ರೀಕರಿಸಿದ ವಿವಾಹ ಪೂರ್ವ ವಿಡಿಯೋ ಹಾಡು ಭದ್ರತಾ ವೈಫಲ್ಯವನ್ನು ಎತ್ತಿ ತೋರಿಸುತ್ತದೆ.

ಈ ಎರಡೂ ಸ್ಮಾರಕಗಳು ಪ್ರವಾಸಿಗರಿಗೆ ಪ್ರವೇಶವನ್ನು ನಿರ್ಬಂಧಿಸಿವೆ. ಆದರೂ ಈ ದಂಪತಿಗಳು ಸಪ್ತಸ್ವರ ಮಂಟಪದ ಒಳಗೆ ಓಡಾಡುತ್ತಿರುವುದು ಕಂಡುಬಂದಿದೆ. ಅನೇಕರನ್ನು ಇದು ಕೆರಳಿಸಿದ್ದು, ವಿಡಿಯೋ ತಯಾರಕರ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

ಹಂಪಿಯಲ್ಲಿ ಚಿತ್ರೀಕರಣ

ಹಂಪಿಯಲ್ಲಿ ಚಿತ್ರೀಕರಣ

"ವಿಡಿಯೋವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗಿದೆ ಮತ್ತು ನಂತರ ನಾವು ಹಂಪಿಯಲ್ಲಿ ಚಿತ್ರೀಕರಣ ನಡೆಯುತ್ತಿರುವುದರ ಬಗ್ಗೆ ತಿಳಿದುಕೊಂಡಿದ್ದೇವೆ. 2020ರ ಅಕ್ಟೋಬರ್ ಮೊದಲ ವಾರದಲ್ಲಿ ಬೇರೆ ಕಡೆ ಚಿತ್ರೀಕರಣ ಮಾಡಲಾಗಿದೆ.

ಹಂಪಿಯ ಅನೇಕ ತಾಣಗಳು ಪ್ರವಾಸಿಗರಿಗೆ ನಿಷೇಧಿಸಲಾಗಿದ್ದು, ಆದರೆ ಈ ಚಿತ್ರೀಕರಣ ಎಲ್ಲಾ ನಿಯಮಗಳನ್ನು ಉಲ್ಲಂಘಿಸಿದೆ. ಈ ಚಿತ್ರೀಕರಣ ಮಾಡಿದವರ ವಿರುದ್ಧ ಪೊಲೀಸ್ ದೂರು ನೀಡಲು ನಾವು ಯೋಜಿಸುತ್ತಿದ್ದೇವೆ' ಎಂದು ಹಂಪಿಯ ಸಾಮಾಜಿಕ ಕಾರ್ಯಕರ್ತ ಹೇಳಿದ್ದಾರೆ.

ನಿಯಮಗಳನ್ನು ಮುರಿಯದಂತೆ ನೋಡಿಕೊಳ್ಳಬೇಕು

ನಿಯಮಗಳನ್ನು ಮುರಿಯದಂತೆ ನೋಡಿಕೊಳ್ಳಬೇಕು

"ಹಂಪಿ ಸ್ಮಾರಕಗಳ ಸುತ್ತಲೂ ಡ್ರೋನ್ ಕ್ಯಾಮೆರಾವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದ್ದರೂ, ವಿವಾಹ ಪೂರ್ವ ಶೂಟಿಂಗ್ ತಂಡವು ಡ್ರೋನ್ ಅನ್ನು ಬಳಸಿದೆ ಎಂದು ದೂರಿದರು. ಫಿಲ್ಮ್ ಶೂಟ್ ಅಥವಾ ಖಾಸಗಿ ಚಿತ್ರೀಕರಣ ನಡೆಯುವಾಗಲೆಲ್ಲಾ ಆರ್ಕಿಯಲಾಜಿಕಲ್ ಸರ್ವೆ ಆಫ್ ಇಂಡಿಯಾ (ಎಎಸ್ಐ) ಮತ್ತು ಹಂಪಿ ವರ್ಲ್ಡ್ ಹೆರಿಟೇಜ್ ಏರಿಯಾ ಮ್ಯಾನೇಜ್ಮೆಂಟ್ ಅಥಾರಿಟಿ (ಎಚ್‌ಡಬ್ಲ್ಯುಎಚ್‌ಎಎ) ಅಧಿಕಾರಿಗಳು ಚಲನಚಿತ್ರ ತಯಾರಕರು ಯಾವುದೇ ನಿಯಮಗಳನ್ನು ಮುರಿಯದಂತೆ ನೋಡಿಕೊಳ್ಳಬೇಕು. ಆದರೆ ಈ ಚಿತ್ರೀಕರಣದಲ್ಲಿ ಇದನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ' ಎಂದು ಕಾರ್ಯಕರ್ತ ಆರೋಪಿಸಿದರು.

ಭದ್ರತಾ ವೈಫಲ್ಯ

ಭದ್ರತಾ ವೈಫಲ್ಯ

ಈ ಬಗ್ಗೆ ಸ್ಪಷ್ಟೀಕರಣ ನೀಡಿರುವ ಎಚ್‌ಡಬ್ಲ್ಯುಎಚ್‌ಎಎ ಹಿರಿಯ ಅಧಿಕಾರಿಗಳು, ಚಿತ್ರೀಕರಣ ದಿನದಂದು ಹಾಜರಿದ್ದ ಸಿಬ್ಬಂದಿಯನ್ನು ವಿಚಾರಿಸುವುದಾಗಿ ಭರವಸೆ ನೀಡಿದ್ದಾರೆ. ವಿಡಿಯೋ ನಮ್ಮ ಗಮನಕ್ಕೆ ಬಂದಿದೆ ಮತ್ತು ಯಾವುದೇ ಭದ್ರತಾ ವೈಫಲ್ಯ ಕಂಡುಬಂದಲ್ಲಿ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಅಧಿಕಾರಿ ಹೇಳಿದರು.

ಅಧಿಕಾರಿಗಳೇ ಹೊಣೆ

ಅಧಿಕಾರಿಗಳೇ ಹೊಣೆ

ವಿಜಯನಗರ ರಾಜವಂಶದ ಕುಡಿ ಕೃಷ್ಣದೇವರಾಯ ಮಾತನಾಡಿ, ವಿವಾಹ ಪೂರ್ವ ಚಿತ್ರೀಕರಣವನ್ನು ತೀವ್ರವಾಗಿ ಟೀಕಿಸಿದರು. "ಇದನ್ನು ಎಂದಿಗೂ ಅನುಮತಿಸಬಾರದು. ಸಂಬಂಧಪಟ್ಟ ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಬೇಕು' ಎಂದು ಹರಿಹಾಯ್ದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+