ಹೆಸರಘಟ್ಟ ಹುಲ್ಲುಗಾವಲನ್ನು ಉಳಿಸಲು ಸಹಿಹಾಕಿರಿ
ಬೆಂಗಳೂರು ನಗರದ ಸುತ್ತಲಿರುವ ಏಕೈಕ ನೈಸರ್ಗಿಕವಾದ ಹುಲ್ಲುಗಾವಲನ್ನು ಸರ್ವನಾಶ ಮಾಡಲು ಸರಕಾರ ತುದಿಗಾಲಲ್ಲಿ ನಿಂತಿದೆ. ದೊಡ್ಡಬಳ್ಳಾಪುರ ತಾಲೂಕಿನ ಕೋಡಿಹಳ್ಳಿ ಗ್ರಾಮದಲ್ಲಿ ಬರುವ, ಹೆಸರಘಟ್ಟದಲ್ಲಿರುವ 305 ಎಕರೆಯಷ್ಟಿರುವ ಹುಲ್ಲುಗಾವಲಿನಲ್ಲಿ ಥೀಮ್ ಪಾರ್ಕ್, ಫಿಲ್ಮ್ಂ ಸಿಟಿ ಮತ್ತು ಗೋಲ್ಫ್ ಕೋರ್ಸ್ ನಿರ್ಮಿಸಲು ಸರಕಾರ ಅನುಮತಿ ನೀಡಿದೆ. ಈ 'ಅಭಿವೃದ್ಧಿ' ಕಾರ್ಯ ಕೈಗೊಂಡರೆ ಪರಿಸರದ ಗತಿ ಏನಾಗಲಿದೆ ಎಂಬ ಬಗ್ಗೆ ಸರಕಾರ ಎಳ್ಳಷ್ಟೂ ಚಿಂತನೆ ನಡೆಸಿಲ್ಲ.
ಹೆಸರಘಟ್ಟ ಕೆರೆಗೆ ಹೊಂದಿಕೊಂಡಿರುವ ಹಚ್ಚಹಸುರಾಗಿರುವ ಈ ಹುಲ್ಲುಗಾವಲನ್ನು ಅನೇಕ ಕಾರಣಗಳಿಂದಾಗಿ ನಾವು ಇಂದು ಉಳಿಸಿಕೊಳ್ಳಬೇಕಾಗಿದೆ. ಮೊದಲನೇಯದು, ಇದು ಬೆಂಗಳೂರಿನ ಸುತ್ತಲಿರುವ ಕಟ್ಟಕಡೆಯ ನೈಸರ್ಗಿಕ ಹುಲ್ಲುಗಾವಲು, ಎರಡನೆಯದಾಗಿ, ಇಲ್ಲಿ ಬೆಳೆಯುವ ವಿಶಿಷ್ಟ ಹೂವುಗಳು ಮತ್ತು ಚಳಿಗಾಲದಲ್ಲಿ ಇಲ್ಲಿಗೆ ಯುರೋಪ್ ಮತ್ತು ಏಷ್ಯಾ ಖಂಡದ ಅನೇಕಕಡೆಗಳಿಂದ ಹಾರಿಬರುವ ವಿಶಿಷ್ಟ ಹಕ್ಕಿಗಳು. ಇಲ್ಲಿ ಅಭಿವೃದ್ಧಿ ಕಾರ್ಯ ಕೈಗೊಂಡರೆ ಈ ವಿಶಿಷ್ಟ ಹಕ್ಕಿಗಳು ಇನ್ನು ಇಲ್ಲಿ ಬರಲಾರವು.
ಮತ್ತೊಂದು ಪ್ರಮುಖ ಕಾರಣವೆಂದರೆ, ಸತ್ತುಹೋಗಿರುವ ಅರ್ಕಾವತಿ ನದಿಯ ಪುನರುಜ್ಜೀವನಕ್ಕಾಗಿ ಈ ಹುಲ್ಲುಗಾವಲನ್ನು ನಾವು ಉಳಿಸಿಕೊಳ್ಳಲೇಬೇಕಾಗಿದೆ. ಅರ್ಕಾವತಿ ನದಿ ಪುನರುಜ್ಜೀವನಗೊಳಿಸಲು ಟೆಂಡರ್ ಕೂಡ ಇತ್ತೀಚೆಗೆ ಕರೆಯಲಾಗಿತ್ತು. ಆದರೆ, ಅಷ್ಟರಲ್ಲಿಯೇ ಥೀಮ್ ಪಾರ್ಕ್, ಫಿಲ್ಮಂ ಸಿಟಿ ಮತ್ತು ಗೋಲ್ಫ್ ಕೋರ್ಸ್ ನಿರ್ಮಿಸಲು ಸರಕಾರ ಮುಂದಡಿ ಇಟ್ಟಿದೆ. ಇದೆಂಥ ದ್ವಂದ್ವ? ಕಳೆದ ಬಜೆಟ್ನಲ್ಲಿಯೇ ಥೀಮ್ ಪಾರ್ಕ್ ನಿರ್ಮಿಸಲು ಸರಕಾರ ಅನುಮೋದನೆ ನೀಡಿದೆ.
ಈ 'ಮಹತ್ವಾಕಾಂಕ್ಷಿ' ಯೋಜನೆಯನ್ನು ಶುರುಮಾಡುವ ಮೊದಲೇ ನಿಲ್ಲಿಸಲು ಆನ್ಲೈನ್ ಅಭಿಯಾನವನ್ನು ಆರಂಭಿಸಲಾಗಿದೆ. change.org ಆರಂಭಿಸಿರುವ 'ಹುಲ್ಲುಗಾವಲು ಉಳಿಸಿ' ಅಭಿಯಾನಕ್ಕೆ ಅಭೂತಪೂರ್ವ ಪ್ರತಿಸ್ಪಂದನೆ ವ್ಯಕ್ತವಾಗಿದೆ. ಈಗಾಗಲೆ ನಾಲ್ಕೂವರೆ ಸಾವಿರಕ್ಕೂ ಹೆಚ್ಚು ಜನರು ಇದಕ್ಕೆ ಸಹಿ ಹಾಕಿದ್ದಾರೆ. ಜನಸ್ಪಂದನೆಯನ್ನು ಗಮನಿಸಿ, ಗೌರವಿಸಿ ಈ ಯೋಜನೆಯನ್ನು ಸರಕಾರ ನಿಲ್ಲಿಸುವುದೆ? ಪರಿಸರವನ್ನು ಉಳಿಸಲು ಕಾಳಜಿ ತೋರುವುದೆ? ಎಂಬುದು ಕಾದುನೋಡಬೇಕಾಗಿದೆ. ಕೊನೆಯುಸಿರು ಹಿಡಿದು ಕೂತಿರುವ ಹುಲ್ಲುಗಾವಲು ಉಳಿಯಬೇಕು ಅಂತ ನಿಮಗೆ ಅನಿಸಿದರೆ ಇಲ್ಲಿ ಸಹಿ ಹಾಕಿರಿ.
-
Bengaluru: ಬೆಂಗಳೂರಿನ ಹೋಟೆಲ್ಗಳಲ್ಲಿ ಗ್ರಾಹಕರಿಗೆ ಶಾಕ್: ಸಾಂಬಾರ್ ಬದಲು ಬೇರೆ ಆಯ್ಕೆ - ಪೋಸ್ಟ್ ವೈರಲ್, ಡಿಸಿ ಹೇಳಿದ್ದೇನು -
Sulekere: ಮಂಡ್ಯದಲ್ಲಿ ಸೂಳೇಕೆರೆ ಮರುನಾಮಕರಣ ಚರ್ಚೆ: ಇತಿಹಾಸಕ್ಕೆ ಮಸಿ ಬಳಿಯಬೇಡಿ ಎಂದ ಜಗದೀಶ್ ಕೊಪ್ಪ -
B Khata: ಬಿ ಖಾತಾದಿಂದ ಎ ಖಾತಾ ಪರಿವರ್ತನೆ ಸವಾಲುಗಳು: ವೆಚ್ಚ, ಪ್ರಕ್ರಿಯೆ ಸ್ವಂತ ವಿವರ ಹಂಚಿಕೊಂಡ ಆಸ್ತಿದಾರ ಶ್ರೀನಿವಾಸ ಮಠ -
Rain in Karnataka: ಬಿರು ಬಿಸಿಲಿನ ನಡುವೆ ಬೆಂಗಳೂರು ಸೇರಿ ಕರ್ನಾಟಕದ ಈ ಜಿಲ್ಲೆಗಳಲ್ಲಿ ನಾಲ್ಕು ದಿನ ಮಳೆ: ಐಎಂಡಿ ರಿಪೋರ್ಟ್ -
ವಿಶ್ವಕಪ್ ಕಿರೀಟದ ಹಿಂದೆ ದೈವಬಲ: ಕರಾವಳಿಯ ಅಳಿಯ ಸೂರ್ಯಕುಮಾರ್ ಯಾದವ್ ನಡೆಗೆ ಮೆಚ್ಚುಗೆಗಳ ಸುರಿಮಳೆ -
New Airport: 3 ಜಿಲ್ಲೆ ಜನರ ಅನುಕೂಲಕ್ಕಾಗಿ ಸರ್ಕಾರದ ಮಾಸ್ಟರ್ ಪ್ಲ್ಯಾನ್: ಬಳ್ಳಾರಿ ಬಳಿ ಹೊಸ ಏರ್ಪೋರ್ಟ್ -
KSRTC: ಸಾರಿಗೆ ಲೋಕಕ್ಕೆ 'ಪಲ್ಲಕ್ಕಿ' ಮೆರುಗು: ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ 115 ಹೊಸ ಬಸ್ಗಳ ಲೋಕಾರ್ಪಣೆ -
ಬೆಂಗಳೂರಲ್ಲಿ ಗ್ಯಾಸ್ ಏಜೆನ್ಸಿಗಳ ಭರ್ಜರಿ ದಂಧೆ: ಸಿಲಿಂಡರ್ ಸಿಗದೇ ಗ್ರಾಹಕರು ಕಂಗಾಲು; ಕಾಳಸಂತೆಯಲ್ಲಿ ₹3,000ಕ್ಕೆ ಮಾರಾಟ -
LPG Gas: ಎಲ್ಪಿಜಿ ನಿಯಮಗಳಲ್ಲಿ ಭಾರೀ ಬದಲಾವಣೆ; ಗ್ರಾಹಕರು ದೂರು ನೀಡಲು ಸಹಾಯವಾಣಿ ಸಂಖ್ಯೆಗಳ ಬಿಡುಗಡೆ -
Gold Rate March 13: ಸತತ 3ನೇ ದಿನವೂ ಚಿನ್ನ - ಬೆಳ್ಳಿ ಬೆಲೆ ಭರ್ಜರಿ ಕುಸಿತ, ಎಷ್ಟಾಗಿದೆ ಇಂದಿನ ಬಂಗಾರದ ಬೆಲೆ -
Resort: ಕರ್ನಾಟಕದಲ್ಲಿ ಶುರುವಾಯ್ತು ರೆಸಾರ್ಟ್ ರಾಜಕೀಯ: ‘ಅವರು ನಮ್ಮ ಅತಿಥಿಗಳು’ ಎಂದ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ -
Horoscope March 13: ಈ ರಾಶಿಯವರ ಬದುಕಲ್ಲಿ ಸಕಾರಾತ್ಮಕ ಬೆಳವಣಿಗೆ, ಅಧಿಕ ಲಾಭ; ದಿನ ಭವಿಷ್ಯ













Click it and Unblock the Notifications