ಭಾಸ್ಕರನ ಬೇಗೆಗೆ ಬೆಂದ ಬದನೆಕಾಯಿಯಾದ ಬೆಂಗಳೂರಿಗ

ಇದೇ ಬಿಸಿಲನ್ನು ಲೆಕ್ಕಿಸದೆ ಸಾವಿರಾರು ಜನ ಡಾ. ರಾಜ್ ಅವರ 84ನೇ ಜನುಮದಿನದಂದು ರಾಜ್ ಸಮಾಧಿಗೆ ಭೇಟಿ ನೀಡಿ ನಮಸ್ಕಾರ ಮಾಡಿ ಬಂದಿದ್ದಾರೆ. ರಸ್ತೆಯಲ್ಲಿ ಓಡಾಡುವ ಹೆಂಗಳೆಯರನೇಕರು ಛತ್ರಿ ಬಿಚ್ಚಿದ್ದಾರೆ, ಕೂಲಿಂಗ್ ಗ್ಲಾಸ್ ಧರಿಸಿದ್ದಾರೆ ಅಥವಾ ತಲೆಯ ಮೇಲೆ ವೇಲ್ ಇಟ್ಟುಕೊಂಡು ಓಡಾಡುತ್ತಿದ್ದಾರೆ. ಮರಗಳನ್ನು ಕಟ್ ಮಾಡಿದ ಸರಕಾರಿ ಅಧಿಕಾರಿಗಳನ್ನು ಶಪಿಸಿಕೊಂಡು ಓಡಾಡುತ್ತಿದ್ದಾರೆ.
ಮೊದಲೇ ಕುಡಿಯಲು ನೀರಿಲ್ಲ, ಆಗಾಗ ಕರೆಂಟ್ ಕೂಡ ಇರುವುದಿಲ್ಲ. ಇನ್ನು ರಸ್ತೆಯ ಮೇಲೆ ಕಾಲಿಟ್ಟರಂತೂ ಕುಕ್ಕರಿನ ಮುಚ್ಚಳ ತೆಗೆದಾಗ ಆವಿ ಮುಖಕ್ಕೆ ರಾಚಿದಂತೆ ಸೂರ್ಯ ತನ್ನ ಕಿರಣಗಳನ್ನು ಬೀರುತ್ತಿದ್ದಾನೆ. ಹತ್ತು ಗಂಟೆ ಸುಮಾರಿಗೆಲ್ಲ ಮೈಯಲ್ಲಿಂದ ಬಳಬಳ ನೀರು ಸುರಿಯಲು ಶುರು ಮಾಡಿರುತ್ತದೆ. ಹನ್ನೆರಡು ಗಂಟೆಯ ಹೊತ್ತಿಗೆ ರಸ್ತೆ ಹೆಚ್ಚೂಕಡಿಮೆ ಭಣಭಣ ಅನ್ನುತ್ತಿರುತ್ತದೆ.
ಒಂದೆರಡು ದಿನಗಳ ಹಿಂದೆ ಮೋಡ ಮುಸುಕಿ ಜನರಲ್ಲಿ ಮಳೆಯಾಗುತ್ತದೆಂಬ ಆಸೆ ಮೂಡಿತ್ತಾದರೂ, ಅದು ಗಾಳಿಗೆ ಮೋಡ ಹಾರಿಹೋದಂತೆ ಆಸೆಯೂ ಬಿಸಿಲಿಗೆ ಆವಿಯಾಗಿ ಹೋಗಿದೆ. ಜನರು ಯಪ್ಪಾ ಏನು ಸೆಕೆ, ತಡೆಯಲಿಕ್ಕೇ ಆಗುತ್ತಿಲ್ಲ ಎಂದು ಅಂಗಿ ಬನಿಯನ್ ತೆಗೆದು ಮನೆಯಲ್ಲಿ ಗಾಳಿ ಬೀಸಿಕೊಳ್ಳುತ್ತ ಕಾಲ ಕಳೆಯುತ್ತಿದ್ದಾರೆ. ಕಲ್ಲಂಗಡಿ ಹಣ್ಣು, ನಿಂಬೆ ಹಣ್ಣು, ಮಾವಿನ ಹಣ್ಣು, ಸಪೋಟಾ, ಮೋಸಂಬಿ ಮಾರಾಟಗಾರರಿಗೆ ಭರ್ಜರಿ ಲಾಭ.
ಎರಡು ವರ್ಷಗಳ ಹಿಂದೆ ಏಪ್ರಿಲ್ನಲ್ಲಿ ಅತ್ಯಧಿಕ ತಾಪಮಾನ 37.6 ಡಿಗ್ರಿ ಸೆಲ್ಶಿಯಸ್ ದಾಖಲಾಗಿತ್ತು. ಈ ಬಾರಿ ಆ ದಾಖಲೆಯನ್ನು ಧೂಳಿಪಟವಾಗುವ ಎಲ್ಲ ಲಕ್ಷಣಗಳು ಕಾಣಿಸುತ್ತಿವೆ. ಮನೆಯಲ್ಲಿನ ಜನ ಹೊರಬರಲು ಹೆದರುತ್ತಿದ್ದಾರೆ, ರಜಾ ಇದ್ದರೂ ಮಕ್ಕಳು ಆಟದ ಮೈದಾನಕ್ಕೆ ಕಾಲಿಡುತ್ತಿಲ್ಲ. ಇನ್ನು ರಸ್ತೆಯಲ್ಲಿ ವಾಹನಗಳಲ್ಲಿ ಅಡ್ಡಾಡುವವರು ಅಳಿದುಳಿದ ಗಿಡಮರಗಳ ಕೆಳಗೆ ಆಸರೆ ಪಡೆಯುತ್ತ ಮುಂದೆ ಸಾಗುತ್ತಿದ್ದಾರೆ.
ಹವಾಮಾನ ಇಲಾಖೆ ನಿರ್ದೇಶಕ ಪುಟ್ಟಣ್ಣ ಬಿ. ಅವರ ಪ್ರಕಾರ, ಏಪ್ರಿಲ್ ತಿಂಗಳಲ್ಲಿ ಕನಿಷ್ಠ 4 ಸೆಂ.ಮೀ. ಮಳೆಯಾಗಬೇಕು. ಮುಂದಿನ ಮೂರ್ನಾಲ್ಕು ದಿನಗಳಲ್ಲಿ ಮಳೆಯಾಗುವ ಸಂಭವನೀಯತೆಯಿದೆ. ಆದರೆ, ಆಕಾಶ ನಿರಭ್ರವಾಗಿದ್ದರಿಂದ ತಾಪಮಾನ ಇದ್ದಕ್ಕಿದ್ದಂತೆ ಹೆಚ್ಚಾಗಿದೆ. ರಾಜ್ಯದಲ್ಲಿ ಅನೇಕ ಕಡೆಗಳಲ್ಲಿ ಮಳೆಯಾಗಿದ್ದರೂ ವರುಣದೇವ ಬೆಂಗಳೂರು ಮತ್ತು ಕೋಲಾರದ ಮೇಲೆ ಕರುಣೆ ತೋರಿಲ್ಲ. ಮಳೆಯಾದರೇ ಸೈ, ಇಲ್ಲದಿದ್ದರೆ ಸೂರ್ಯ ಜನರನ್ನು ಬೇಯಿಸಿ ಬದನೆಕಾಯಿ ಮಾಡುವುದು ಖಚಿತ.
-
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
SSLC Maths Exam: ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳ ಆರೋಪ, ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ -
ಪರಮಾತ್ಮ ಹೇಳಿದ್ರೂ ಹಿಂದೆ ಸರಿಯಲ್ಲ ಎಂದಿದ್ದ ಕಾಂಗ್ರೆಸ್ನ ಸಾದಿಕ್ ಪೈಲ್ವಾನ್ ನಾಮಪತ್ರ ಹಿಂಪಡೆಯಲು ಇದೆ ಹಲವು ಕಾರಣ -
Tamil Nadu Election: ತನ್ನ ಡ್ರೈವರ್ ಮಗನಿಗೆ MLA ಟಿಕೆಟ್ ಘೋಷಿಸಿದ ನಟ ದಳಪತಿ ವಿಜಯ್, ಭಾವುಕ ಕ್ಷಣದ ವಿಡಿಯೋ ವೈರಲ್ -
ವಿರಾಟ್ ಅಸಲಿ ಆಟ ಇನ್ನೂ ಬಾಕಿಯಿದೆ; ಕಿಂಗ್ ಕೊಹ್ಲಿಗೆ ವಿಶೇಷ ಮನವಿ ಮಾಡಿಕೊಂಡ ಅಂಬಟಿ ರಾಯುಡು, ಭಾರೀ ವೈರಲ್ -
Bengaluru Weather: ನಗರಕ್ಕೆ ಇಂದು ಸೋಮವಾರವು ಗುಡುಗು ಸಹಿತ ಮಳೆ ಎಚ್ಚರಿಕೆ, ಸವಾರರೇ ಗಮನಿಸಿ -
Prakash Raj Mother passed Away: ನಟ ಪ್ರಕಾಶ್ ರಾಜ್ ತಾಯಿ ಸ್ವರ್ಣಲತಾ ನಿಧನ, ಚಿತ್ರರಂಗದ ಗಣ್ಯರಿಂದ ಸಂತಾಪ












Click it and Unblock the Notifications