ಭಾಸ್ಕರನ ಬೇಗೆಗೆ ಬೆಂದ ಬದನೆಕಾಯಿಯಾದ ಬೆಂಗಳೂರಿಗ

ಇದೇ ಬಿಸಿಲನ್ನು ಲೆಕ್ಕಿಸದೆ ಸಾವಿರಾರು ಜನ ಡಾ. ರಾಜ್ ಅವರ 84ನೇ ಜನುಮದಿನದಂದು ರಾಜ್ ಸಮಾಧಿಗೆ ಭೇಟಿ ನೀಡಿ ನಮಸ್ಕಾರ ಮಾಡಿ ಬಂದಿದ್ದಾರೆ. ರಸ್ತೆಯಲ್ಲಿ ಓಡಾಡುವ ಹೆಂಗಳೆಯರನೇಕರು ಛತ್ರಿ ಬಿಚ್ಚಿದ್ದಾರೆ, ಕೂಲಿಂಗ್ ಗ್ಲಾಸ್ ಧರಿಸಿದ್ದಾರೆ ಅಥವಾ ತಲೆಯ ಮೇಲೆ ವೇಲ್ ಇಟ್ಟುಕೊಂಡು ಓಡಾಡುತ್ತಿದ್ದಾರೆ. ಮರಗಳನ್ನು ಕಟ್ ಮಾಡಿದ ಸರಕಾರಿ ಅಧಿಕಾರಿಗಳನ್ನು ಶಪಿಸಿಕೊಂಡು ಓಡಾಡುತ್ತಿದ್ದಾರೆ.
ಮೊದಲೇ ಕುಡಿಯಲು ನೀರಿಲ್ಲ, ಆಗಾಗ ಕರೆಂಟ್ ಕೂಡ ಇರುವುದಿಲ್ಲ. ಇನ್ನು ರಸ್ತೆಯ ಮೇಲೆ ಕಾಲಿಟ್ಟರಂತೂ ಕುಕ್ಕರಿನ ಮುಚ್ಚಳ ತೆಗೆದಾಗ ಆವಿ ಮುಖಕ್ಕೆ ರಾಚಿದಂತೆ ಸೂರ್ಯ ತನ್ನ ಕಿರಣಗಳನ್ನು ಬೀರುತ್ತಿದ್ದಾನೆ. ಹತ್ತು ಗಂಟೆ ಸುಮಾರಿಗೆಲ್ಲ ಮೈಯಲ್ಲಿಂದ ಬಳಬಳ ನೀರು ಸುರಿಯಲು ಶುರು ಮಾಡಿರುತ್ತದೆ. ಹನ್ನೆರಡು ಗಂಟೆಯ ಹೊತ್ತಿಗೆ ರಸ್ತೆ ಹೆಚ್ಚೂಕಡಿಮೆ ಭಣಭಣ ಅನ್ನುತ್ತಿರುತ್ತದೆ.
ಒಂದೆರಡು ದಿನಗಳ ಹಿಂದೆ ಮೋಡ ಮುಸುಕಿ ಜನರಲ್ಲಿ ಮಳೆಯಾಗುತ್ತದೆಂಬ ಆಸೆ ಮೂಡಿತ್ತಾದರೂ, ಅದು ಗಾಳಿಗೆ ಮೋಡ ಹಾರಿಹೋದಂತೆ ಆಸೆಯೂ ಬಿಸಿಲಿಗೆ ಆವಿಯಾಗಿ ಹೋಗಿದೆ. ಜನರು ಯಪ್ಪಾ ಏನು ಸೆಕೆ, ತಡೆಯಲಿಕ್ಕೇ ಆಗುತ್ತಿಲ್ಲ ಎಂದು ಅಂಗಿ ಬನಿಯನ್ ತೆಗೆದು ಮನೆಯಲ್ಲಿ ಗಾಳಿ ಬೀಸಿಕೊಳ್ಳುತ್ತ ಕಾಲ ಕಳೆಯುತ್ತಿದ್ದಾರೆ. ಕಲ್ಲಂಗಡಿ ಹಣ್ಣು, ನಿಂಬೆ ಹಣ್ಣು, ಮಾವಿನ ಹಣ್ಣು, ಸಪೋಟಾ, ಮೋಸಂಬಿ ಮಾರಾಟಗಾರರಿಗೆ ಭರ್ಜರಿ ಲಾಭ.
ಎರಡು ವರ್ಷಗಳ ಹಿಂದೆ ಏಪ್ರಿಲ್ನಲ್ಲಿ ಅತ್ಯಧಿಕ ತಾಪಮಾನ 37.6 ಡಿಗ್ರಿ ಸೆಲ್ಶಿಯಸ್ ದಾಖಲಾಗಿತ್ತು. ಈ ಬಾರಿ ಆ ದಾಖಲೆಯನ್ನು ಧೂಳಿಪಟವಾಗುವ ಎಲ್ಲ ಲಕ್ಷಣಗಳು ಕಾಣಿಸುತ್ತಿವೆ. ಮನೆಯಲ್ಲಿನ ಜನ ಹೊರಬರಲು ಹೆದರುತ್ತಿದ್ದಾರೆ, ರಜಾ ಇದ್ದರೂ ಮಕ್ಕಳು ಆಟದ ಮೈದಾನಕ್ಕೆ ಕಾಲಿಡುತ್ತಿಲ್ಲ. ಇನ್ನು ರಸ್ತೆಯಲ್ಲಿ ವಾಹನಗಳಲ್ಲಿ ಅಡ್ಡಾಡುವವರು ಅಳಿದುಳಿದ ಗಿಡಮರಗಳ ಕೆಳಗೆ ಆಸರೆ ಪಡೆಯುತ್ತ ಮುಂದೆ ಸಾಗುತ್ತಿದ್ದಾರೆ.
ಹವಾಮಾನ ಇಲಾಖೆ ನಿರ್ದೇಶಕ ಪುಟ್ಟಣ್ಣ ಬಿ. ಅವರ ಪ್ರಕಾರ, ಏಪ್ರಿಲ್ ತಿಂಗಳಲ್ಲಿ ಕನಿಷ್ಠ 4 ಸೆಂ.ಮೀ. ಮಳೆಯಾಗಬೇಕು. ಮುಂದಿನ ಮೂರ್ನಾಲ್ಕು ದಿನಗಳಲ್ಲಿ ಮಳೆಯಾಗುವ ಸಂಭವನೀಯತೆಯಿದೆ. ಆದರೆ, ಆಕಾಶ ನಿರಭ್ರವಾಗಿದ್ದರಿಂದ ತಾಪಮಾನ ಇದ್ದಕ್ಕಿದ್ದಂತೆ ಹೆಚ್ಚಾಗಿದೆ. ರಾಜ್ಯದಲ್ಲಿ ಅನೇಕ ಕಡೆಗಳಲ್ಲಿ ಮಳೆಯಾಗಿದ್ದರೂ ವರುಣದೇವ ಬೆಂಗಳೂರು ಮತ್ತು ಕೋಲಾರದ ಮೇಲೆ ಕರುಣೆ ತೋರಿಲ್ಲ. ಮಳೆಯಾದರೇ ಸೈ, ಇಲ್ಲದಿದ್ದರೆ ಸೂರ್ಯ ಜನರನ್ನು ಬೇಯಿಸಿ ಬದನೆಕಾಯಿ ಮಾಡುವುದು ಖಚಿತ.
-
Ration card: ರಾಜ್ಯದಲ್ಲಿ ಪಡಿತರಚೀಟಿ ತಿದ್ದುಪಡಿಗೆ ಮತ್ತೆ ಅವಕಾಶ -
Vande Bharat Express: 20 ಬೋಗಿಗಳ 42ನೇ ವಂದೇ ಭಾರತ್ ರೈಲು ಸಂಚಾರ ಆರಂಭ, ಎಲ್ಲಿ? ವೇಳಾಪಟ್ಟಿ -
ಟಿ20 ವಿಶ್ವಕಪ್ 2026 ಫೈನಲ್ ಪಂದ್ಯ ಮಳೆಯಿಂದ ರದ್ದಾದ್ರೆ ಟ್ರೋಫಿ ಯಾರ ಮುಡಿಗೆ?; ಐಸಿಸಿ ನಿಯಮಗಳು ಹೀಗಿವೆ -
Gold Price: ಚಿನ್ನ ಬೆಲೆ ಭಾರಿ ಕುಸಿತ ಸಾಧ್ಯತೆ, ಆದರೆ ಇದೊಂದು ದೇಶದ ನಿರ್ಧಾರ ಮುಖ್ಯ -
Horoscope March 7: ಉದ್ಯೋಗದಲ್ಲಿ ಉತ್ತಮ ಬದಲಾವಣೆ, ದಾಂಪತ್ಯದಲ್ಲಿ ಸಿಹಿ ಅಲೆ, ದಿನ ಭವಿಷ್ಯ -
ಕನ್ನಡ ನಾಡಿನ ಪ್ರತಿಭೆಗಳ ಸಾಧನೆ, ಯುಪಿಎಸ್ಸಿ ಟಾಪರ್ಸ್ ಮಾಹಿತಿ ತಿಳಿಯಿರಿ | UPSC Toppers -
ಕರ್ನಾಟಕಕ್ಕೆ ಬಂದ್ರೆ ಅಮ್ಮನ ಮನೆಗೆ ಬಂದಂತೆ ಭಾಸವಾಗುತ್ತೆ: ಕನ್ನಡದಲ್ಲೇ ಭಾಷಣ ಮಾಡಿದ ನಟ ಜ್ಯೂನಿಯರ್ ಎನ್ಟಿಆರ್ -
Women's Day Wishes: ಹೆಣ್ಣು ಜಗದ ಕಣ್ಣು: ಮಹಿಳಾ ದಿನಕ್ಕೆ ನಿಮ್ಮ ಪ್ರೀತಿಪಾತ್ರರಿಗೆ ಶುಭ ಕೋರಲು ಇಲ್ಲಿವೆ ಸುಂದರ ಸಾಲುಗಳು -
MS Dhoni: ಕುಣಿದು ಕುಪ್ಪಳಿಸುತ್ತಿದ್ದ ಪತ್ನಿ ಸಾಕ್ಷಿ ಸಿಂಗ್ಗೆ ಸುಮ್ನೆ ಕೂತ್ಕೋ ಎಂದ ಎಂಎಸ್ ಧೋನಿ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Gold Rate Today: ಸತತ ಆರನೇ ದಿನವೂ ಚಿನ್ನದ ಬೆಲೆಯಲ್ಲಿ ಇಳಿಕೆ: ಬೆಂಗಳೂರಿನಲ್ಲಿ ಇಂದಿನ ದರಗಳು ಹೀಗಿವೆ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು












Click it and Unblock the Notifications