ಇವರು ಅಥಣಿ ವಿಧಾನಸಭಾ ಕ್ಷೇತ್ರದ ಶಾಸಕ ಲಕ್ಷ್ಮಣ ಸವದಿ
ಖಡಕ್ ಜೋಳದ ರೊಟ್ಟಿ, ಗುರೆಳ್ಳು ಚಟ್ನಿ, ಸತ್ತಿ ಗ್ರಾಮದಲ್ಲಿ ಹರಿಯುತ್ತಿರುವ ಕೃಷ್ಣಾ ನದಿ ತೀರದ ಬದನೆಕಾಯಿ ತಿಂದು ತಿಂದೇ ಈಗ ಹೊಲಸು ಕೆಲಸ ಮಾಡಿಕೊಂಡಿದ್ದಾರೆ. ಜನಬೆಂಬಲವನ್ನು ಪಡೆದು ಯಡಿಯೂರಪ್ಪ ಮತ್ತು ಸದಾನಂದ ಗೌಡರ ಸಂಪುಟದಲ್ಲಿ ಸಚಿವರಾಗಿ ಶಾಶ್ವತ ಸ್ಥಾನ ಪಡೆದಿದ್ದಾರೆ. ಯಡಿಯೂರಪ್ಪ ಸಂಪುಟದಲ್ಲಿ ಮೀನುಗಾರಿಕೆ ಸಚಿವರಾಗಿದ್ದ ಸವದಿ, ಈಗ ಸದಾನಂದ ಗೌಡರ ಸಂಪುಟದಲ್ಲಿ ಮಾನ್ಯ ಸಹಕಾರ ಸಚಿವ.
ಸಚಿವರಾಗಿರುವುದರಿಂದ ಸದ್ಯಕ್ಕೆ ತಾತ್ಕಾಲಿಕವಾಗಿ ಬೆಂಗಳೂರಿನಲ್ಲಿ ವಾಸಿಸುತ್ತಾರಾದರೂ ಅವರ ಪರ್ಮನೆಂಟ್ ಅಡ್ರೆಸ್ ಹೀಗಿದೆ : ಶ್ರೀ ಲಕ್ಷ್ಮಣ ಸಂಗಪ್ಪ ಸವದಿ, ಸಂಗಮೇಶ್ವರ ನಿಲಯ, ಎಸ್ಎಮ್ಎಸ್ ಕಾಲೇಜು ರಸ್ತೆ, ಅಥಣಿ ತಾಲೂಕು, ಅಥಣಿ, ಬೆಳಗಾವಿ ಜಿಲ್ಲೆ - 591240.
ವಿಧಾನಸಭೆಯಲ್ಲಿ ಬಿಂದಾಸ್ ಆಗಿ ನೀಲಿ ಚಿತ್ರ ನೋಡಿ ಸಿಕ್ಕಿಬಿದ್ದಿರುವ ಲಕ್ಷ್ಮಣ್ ಸಂಗಪ್ಪ ಸವದಿ ಅವರ ವಿರುದ್ಧ ಅವರ ಕ್ಷೇತ್ರದ ಜನತೆಯೇ ತಿರುಗಿಬಿದ್ದಿದ್ದಾರೆ. ಇಂಥ ಶಾಸಕನನ್ನು ಆರಿಸಿ ಕಳಿಸಿದ್ದಕ್ಕೆ ಛೀಥೂ ಎಂದು ಮತ ಹಾಕಿದವರು ಉಗಿಯುತ್ತಿದ್ದಾರೆ. ಇನ್ನು ಸ್ವಕ್ಷೇತ್ರವನ್ನು ಸದ್ಯಕ್ಕೆ ಸವದಿ ಪ್ರವೇಶಿಸುವುದು ದೂರವೇ. ಇಂಥವರನ್ನು ಕ್ಷೇತ್ರದಲ್ಲಾದರೂ ಯಾಕೆ ಬಿಡಬೇಕು?