ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲೋಕಾಯುಕ್ತ ಎಸ್ಪಿ ಈಶ್ವರಚಂದ್ರಗೆ ಕೊನೆಗೂ ಗೇಟ್ ಪಾಸ್

By Srinath
|
Google Oneindia Kannada News

lokayukta-sp-eshwar-chandra-shunted-out
ಬೆಂಗಳೂರು, ಆಗಸ್ಟ್ 26: ಕಳೆದ ವಾರವಷ್ಟೇ ಲೋಕಾಯುಕ್ತ ಎಸ್‌ಪಿಯಾಗಿ ನೇಮಕಗೊಂಡಿದ್ದ ಈಶ್ವರಚಂದ್ರ ವಿದ್ಯಾಸಾಗರ್ ಅವರಿಗೆ ಗೇಟ್ ಪಾಸ್ ನೀಡಲಾಗಿದೆ. ಅಕ್ರಮ ಗಣಿಗಾರಿಕೆ ಸಂಬಂಧ ಬಳ್ಳಾರಿಯ ಖಾರದಪುಡಿ ಮಹೇಶ್ ಎಂಬುವವನಿಂದ ಲಂಚ ಪಡೆದವರ ಪಟ್ಟಿಯಲ್ಲಿ ಅವರ ಹೆಸರೂ ದಾಖಲಾಗಿತ್ತು.

ಈ ಹಿನ್ನೆಲೆಯಲ್ಲಿ 'ಕಳಂಕಿತ' ವಿದ್ಯಾಸಾಗರ್ ಅವರನ್ನು ಮಾತೃ ಇಲಾಖೆಗೆ ಕಳಿಸಲಾಗಿದೆ ಎಂದು ಲೋಕಾಯುಕ್ತ ಶಿವರಾಜ್ ವಿ. ಪಾಟೀಲ್ ಶುಕ್ರವಾರ ತಿಳಿಸಿದ್ದಾರೆ.

ಅಕ್ರಮ ಗಣಿಗಾರಿಕೆ ಕುರಿತ ಲೋಕಾಯುಕ್ತ ತನಿಖಾ ತಂಡದ ಮುಖ್ಯಸ್ಥರಾಗಿದ್ದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಡಾ. ಯುವಿ ಸಿಂಗ್ ಸಲ್ಲಿಸಿರುವ ವರದಿ ಪ್ರಕಾರ 2010ರ ಮಾರ್ಚ್ 12ರಂದು 'ಕೊಪ್ಪಳ ಎಸ್‌ಪಿ' ಹೆಸರಿಗೆ ಮಹೇಶ್ 6.87 ಲಕ್ಷ ರೂಪಾಯಿ ಲಂಚ ನೀಡಿದ್ದಾನೆ. ಈ ಅವಧಿಯಲ್ಲಿ ಕೊಪ್ಪಳ ಎಸ್‌ಪಿ ಹುದ್ದೆಯಲ್ಲಿದ್ದವರು ಈಶ್ವರಚಂದ್ರ ವಿದ್ಯಾಸಾಗರ್.

ಗಮನಾರ್ಹವೆಂದರೆ ಡಾ. ಸಿಂಗ್ ವರದಿಯಲ್ಲಿ ಹೆಸರು ಉಲ್ಲೇಖವಾಗಿದ್ದ ಇತರೆ ಅಧಿಕಾರಿಗಳನ್ನು ಲೋಕಾಯುಕ್ತ ನ್ಯಾಯಮೂರ್ತಿ ಶಿವರಾಜ್ ಪಾಟೀಲ್, ಇತ್ತೀಚೆಗಷ್ಟೇ ಪೊಲೀಸ್ ಇಲಾಖೆಗೆ ವಾಪಸ್ ಕಳುಹಿಸಿದ್ದಾರೆ.

ಆದರೆ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಕುಟುಂಬದವರು ಜಿಂದಾಲ್ ಸಮೂಹದ ಗಣಿ ಕಂಪನಿಯಿಂದ ಲಂಚ ಪಡೆದ ಆರೋಪ ಕುರಿತ ಪ್ರಕರಣದ ತನಿಖೆಯನ್ನೂ ವಿದ್ಯಾಸಾಗರ್ ಅವರಿಗೆ ವಹಿಸಲಾಗಿದೆ.

English summary
As the Lokayukta SP Eshwar Chandra Vidyasagar name has surfaced in Lokayukta's report on illegal mining, when he was SP in Koppal, the Lokayukta Shivaraj V Patil has shunted him out to mother department.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X