ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡಿವಿಎಸ್ ಸಂಪುಟಕ್ಕೆ ಶೆಟ್ಟರ್ ಬಣ ರಾಜೀನಾಮೆ ಬೆದರಿಕೆ

By Srinath
|
Google Oneindia Kannada News

dvs-cabinet-shettar-group-may-resign
ಬೆಂಗಳೂರು, ಆಗಸ್ಟ್ 11: ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಈಶ್ವರಪ್ಪ ಅವರಲ್ಲದೆ, ಜಗದೀಶ ಶೆಟ್ಟರ್ ಮತ್ತು ಅವರ ಬಣ ರಾಜ್ಯ ಸಂಪುಟ ವಿಸ್ತರಣೆ ಮುಂದೂಡಿಕೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಸಂಪುಟ ವಿಸ್ತರಣೆ ಆಗಲೇ ಬೇಕು ಎಂದು ಪಟ್ಟು ಹಿಡಿದಿದೆ.

ಗುರುವಾರವೇ ಸಂಪುಟ ವಿಸ್ತರಣೆ ಮಾಡದಿದ್ದರೆ ಸಚಿವರ ಸಾಮೂಹಿಕ ರಾಜೀನಾಮೆಗೂ ಹಿಂಜರಿಯುವುದಿಲ್ಲ ಎನ್ನುವ ಎಚ್ಚರಿಕೆ ಶೆಟ್ಟರ್ ಬಣದಿಂದ ಮುಖ್ಯಮಂತ್ರಿಗೆ ಹೋಗಿದೆ.

'ಎಲ್ಲ ವಿಚಾರಗಳಲ್ಲೂ ಸೋತಿದ್ದೇವೆ. ಉಪ ಮುಖ್ಯಮಂತ್ರಿ ಸ್ಥಾನವನ್ನೂ ಕೊಡುವುದಿಲ್ಲ ಎಂದು ಅಪಮಾನ ಮಾಡಿದಿರಿ. ಅದೇ ರೀತಿ ಮತ್ತೆ ಮಾಡಿದರೆ ಹೇಗೆ? ನಮ್ಮನ್ನೇ ನಂಬಿದ ಶಾಸಕರನ್ನು ಹೇಗೆ ಸಂತೈಸುವುದು' ಎನ್ನುವುದು ಶೆಟ್ಟರ್ ಅವರ ಪ್ರಶ್ನೆ.

ದೆಹಲಿಯಿಂದ ಸಂಜೆ ನಗರಕ್ಕೆ ವಾಪಸಾದ ಮುಖ್ಯಮಂತ್ರಿ ಸದ್ಯಕ್ಕೆ ಸಂಪುಟ ವಿಸ್ತರಣೆ ಬೇಡ ಎನ್ನುವ ಇಂಗಿತವನ್ನು ವ್ಯಕ್ತಪಡಿಸಿದ್ದರು. ಪರೋಕ್ಷವಾಗಿ ಯಡಿಯೂರಪ್ಪ ಅವರೂ ಬೆಂಬಲ ಸೂಚಿಸಿದ್ದು, ವಿಳಂಬ ನೀತಿಯೇ ಇದಕ್ಕೆ ಪರಿಹಾರ ಎಂದು ಸಲಹೆ ನೀಡಿದ್ದಾರೆ ಎನ್ನಲಾಗಿದೆ.

ಸೋಮವಾರ ಸಂಪುಟ ರಚನೆ ಸಂದರ್ಭದಲ್ಲಿ ನಡೆದ ಮಾತುಕತೆ ಪ್ರಕಾರ ಗುರುವಾರ ಸಂಪುಟ ವಿಸ್ತರಣೆ ಆಗಲೇಬೇಕು ಎನ್ನುವುದು ಈಶ್ವರಪ್ಪ ಅವರ ಪಟ್ಟು. ಇದಕ್ಕೆ ಅಶೋಕ, ಬಾಲಚಂದ್ರ ಜಾರಕಿಹೊಳಿ, ಗೋವಿಂದ ಕಾರಜೋಳ, ಸಿ.ಟಿ.ರವಿ ಸೇರಿದಂತೆ ಇತರ ಪ್ರಮುಖರು ದನಿಗೂಡಿಸಿದ್ದಾರೆ.

English summary
Karnataka Chief Minister DV Sadananda Gowda who as per the directions of command is unrelenting to include Shettar followers in his cabinet. As such Jagadish Shettar group threatens mass resignation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X