ಲೋಕಾಯುಕ್ತ ಭೇಟಿ ನಿಜ, ಆದರೆ..ಅದು ಬೇರೆ ವಿಷ್ಯ

ಈ ಬಗ್ಗೆ ಯಾವುದೇ ತನಿಖೆಗೂ ಸಿದ್ಧ. ತಪ್ಪು ಮಾಡಿದ್ದರೆ ಯಾವುದೇ ಶಿಕ್ಷೆಗೆ ಅನುಭವಿಸಲು ತಯಾರಿದ್ದೇನೆ. ಲೋಕಾಯುಕ್ತರೇ ಬೇಕಾದರೆ ಶಿಕ್ಷೆ ವಿಧಿಸಲಿ. ವಿಪಕ್ಷಗಳು ಹೇಳುವಂತೆ ಗಣಿಗಾರಿಕೆ ವರದಿಯಿಂದ ಯಡಿಯೂರಪ್ಪ ಅವರ ಹೆಸರು ತೆಗೆದುಹಾಕುವಂತೆ ನಾನು ಕೇಳಿಲ್ಲ. ಎಂದು ಧನಂಜಯ್ ಹೇಳಿದ್ದಾರೆ.
ನನ್ನ civic amenity(CA) ನಿವೇಶನಕ್ಕೆ ಸಂಬಂಧಪಟ್ಟಂತೆ ಚರ್ಚಿಸಲು ಉನ್ನತ ಶಿಕ್ಷಣ ಸಚಿವ ಡಾ.ವಿಎಸ್ ಆಚಾರ್ಯ ಹಾಗೂ ನಾನು ಲೋಕಾಯುಕ್ತ ನ್ಯಾ.ಸಂತೋಷ್ ಹೆಗ್ಡೆ ಭೇಟಿ ಮಾಡಿದ್ದೆವು. ವಿಜಯನಗರ ಬಳಿ ಇರುವ ನಿವೇಶನವನ್ನು ದುರ್ಬಳಕೆ ಮಾಡಿಕೊಂಡಿರುವ ಆರೋಪವನ್ನು ವಿಪಕ್ಷಗಳು ಹೊರೆಸಿದ್ದವು. ಆದರೆ, ನಾನು ಪ್ರಾಧಿಕಾರದ ಅನುಮತಿ ಪಡೆದು ಖಾಲಿ ಜಾಗವನ್ನು ಪಾರ್ಕಿಂಗ್ ಗೆ ಬಳಸುತ್ತಿದ್ದೆ. ಇದನ್ನು ಲೋಕಾಯುಕ್ತರಿಗೆ ಮನವರಿಕೆ ಮಾಡಿಕೊಟ್ಟಿದ್ದೇನೆ.












Click it and Unblock the Notifications