ತಿರುಪತಿಯಲ್ಲಿ ಈಗ ಊಟದ ಜತೆ ರೋಟಿ

ಪಂಜಾಬ್ನ ಅಮೃತಸರದಲ್ಲಿ ಭಕ್ತರಿಗೆ ರೋಟಿ ನೀಡುವ ವ್ಯವಸ್ಥೆಯನ್ನು ನೋಡಿಕೊಂಡು ಬಂದಿರುವ ಅಧಿಕಾರಿಗಳು ಇಲ್ಲೂ ಆ ವ್ಯವಸ್ಥೆ ಕಲ್ಪಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ. ಈಗಾಗಲೇ ಗಂಟೆಗೆ 2000 ರೋಟಿ ಸುಡುವ ಯಂತ್ರವೊಂದನ್ನು ಕೊಯಮತ್ತೂರಿನಿಂದ ತರಲಾಗಿದೆ. ಈಗಿರುವ ಭೋಜನಾಲಯದ ಜೊತೆಗೆ ಹೊಸತಾಗಿ ನಿರ್ಮಿಸಲಾಗಿರುವ, ಏಕಕಾಲಕ್ಕೆ 4000 ಮಂದಿ ಊಟ ಮಾಡುವ ಭೋಜನಾಲಯವನ್ನು ಜುಲೈ 7ರಂದು ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಉದ್ಘಾಟಿಸಲಿದ್ದಾರೆ.
ಭಕ್ತರ ದೇಣಿಗೆಯಿಂದ ನಡೆಯುವ ಇಲ್ಲಿನ ಬೃಹತ್ ಅನ್ನದಾನ ವ್ಯವಸ್ಥೆಗೆ ಸಂಗ್ರಹಿಸಲಾದ ನಿಧಿ 200 ಕೋಟಿ ರೂ. ತಲುಪಿದೆ. ಅನಾಮಿಕ ಉದ್ಯಮಿಯೊಬ್ಬರು 20 ಕೋಟಿ ರೂ. ನೀಡಿದ್ದು, ಆ ಹಣದಲ್ಲೇ ನೂತನ ಅನ್ನದಾನ ಮಂದಿರ ನಿರ್ಮಿಸಲಾಗಿದೆ.












Click it and Unblock the Notifications