Get Updates
Get notified of breaking news, exclusive insights, and must-see stories!

ಮುಖ್ಯಮಂತ್ರಿಗಳ ಚೀನಾ ಪ್ರವಾಸ ಫಲಪ್ರದ

CM BSY visit to china
ಬೀಜಿಂಗ್ , ಸೆ.13: ಟಿಯಾನ್‌ಜಿನ್ ವಿಶೇಷ ಆರ್ಥಿಕ ವಲಯಕ್ಕೆ ಸೋಮವಾರ ಬಿ.ಎಸ್. ಯಡಿಯೂರಪ್ಪ ನೇತೃತ್ವದ ನಿಯೋಗದ ಭೇಟಿ ನೀಡಿ, ವಿಶ್ವ ಆರ್ಥಿಕ ವೇದಿಕೆ (ವರ್ಲ್ಡ್ ಎಕಾನಾಮಿಕ್ ಫೋರಮ್) ವತಿಯಿಂದ ಚೀನಾದಲ್ಲಿ ಆಯೋಜಿಸಲಾಗಿರುವ ವಾರ್ಷಿಕ ಆಯ್ದ ಉದ್ದಿಮೆದಾರರ ಸಮಾವೇಶದಲ್ಲಿ ಭಾಗವಹಿಸಿದರು

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಕರ್ನಾಟಕ ನಿಯೋಗವು ಇಂದು ಚೀನಾದ ಟಿಯಾನ್‌ಜಿನ್ ವಿಶೇಷ ವಿತ್ತ ವಲಯಕ್ಕೆ ಭೇಟಿ ನೀಡಿ ವಿವಿಧ ಕ್ಷೇತ್ರಗಳ ಬಗ್ಗೆ ದ್ವಿಪಕ್ಷೀಯ ಮಾತುಕತೆ ಕೈಗೊಂಡಿತು.

ಟಿ.ಎನ್.ಬಿ.ಎ. ಎಂದೇ ಪ್ರಖ್ಯಾತವಾಗಿರುವ ಟಿಯಾನ್‌ಜಿನ್ ಬಿನ್‌ಹಾಯ್ ನ್ಯೂ ಏರಿಯಾವು 2400 ಚದರ ಕಿಲೋ ಮೀಟರ್‌ಗಳಿಗೂ ಅಧಿಕ ವಿಸ್ತಾರದ ಬೃಹತ್ ವಿಶೇಷ ವಿತ್ತ ವಲಯವಾಗಿದ್ದು, ಈ ಪ್ರದೇಶದಲ್ಲಿ ಸುಮಾರು 25 ಲಕ್ಷ ಮಂದಿ ಕಾರ್ಯನಿರ್ವಹಿಸುತ್ತಿದ್ದಾರೆ.

ಬೀಜಿಂಗ್‌ನಿಂದ ಸುಮಾರು 200 ಕಿ.ಮೀಗಳಷ್ಟು ದೂರದಲ್ಲಿರುವ ಈ ಕರಾವಳಿ ಪ್ರದೇಶದ ವಿಶೇಷ ವಿತ್ತ ವಲಯವು ಸೂಪರ್‌ಫಾಸ್ಟ್ ರೈಲು ಸಂಪರ್ಕದ ಜೊತೆಗೆ ವಿಮಾನ ನಿಲ್ದಾಣ ಹಾಗೂ ಬಂದರನ್ನು ಹೊಂದಿದೆ. ಈ ವಿಶೇಷ ವಿತ್ತ ವಲಯದಲ್ಲಿ ಐಟಿ, ಆಟೋಮೊಬೈಲ್, ತೈಲ, ಹಸಿರು ಆಹಾರ, ಬಯೋಫಾರ್ಮ, ಮೆಟಲರ್ಜಿ, ನವೀನ ಇಂಧನ, ಹೊರಗುತ್ತಿಗೆ ಮುಂತಾದ ಕ್ಷೇತ್ರಗಳ ಬೃಹತ್ ಉದ್ಯಮಗಳಿದ್ದು, ಕರ್ನಾಟಕದ ನಿಯೋಗವು ಈ ಎಲ್ಲಾ ಉದ್ಯಮಗಳ ಜೊತೆ ದ್ವಿಪಕ್ಷೀಯ ಉಪಕ್ರಮಗಳ ಬಗ್ಗೆ ವಿಸ್ತೃತ ಚರ್ಚೆ ಕೈಗೊಂಡಿತು.

ಮುಖ್ಯಮಂತ್ರಿಗಳ ನೇತೃತ್ವದ ನಿಯೋಗವು ಹಲವಾರು ಜಾಗತಿಕ ಉದ್ಯಮಿಗಳೊಂದಿಗೂ ಕರ್ನಾಟಕದಲ್ಲಿ ಬಂಡವಾಳ ಹೂಡಿಕೆ ಬಗ್ಗೆ ಪೂರ್ವಭಾವಿ ಮಾತುಕತೆ ನಡೆಸಿದೆ.

ನೆಸ್ಲೆ ಅಧ್ಯಕ್ಷರ ಜೊತೆ ಚರ್ಚೆ:ನೆಸ್ಲೆ ಕಂಪನಿಯ ಅಧ್ಯಕ್ಷಪೀಟರ್ ಬ್ರಬೆಕ್ ಲೆಟ್‌ಮಾತೆ ಇವರೊಂದಿಗೆ ಈಗಾಗಲೇ ನಂಜನಗೂಡಿನಲ್ಲಿ ನಿರ್ಮಾಣವಾಗುತ್ತಿರುವ ನೆಸ್ಲೆ ಘಟಕದ ವಿಸ್ತರಣೆಯ ಬಗ್ಗೆ ಚರ್ಚಿಸಲಾಯಿತು. ಬೆಂಗಳೂರಿನಲ್ಲಿ ಅಕ್ಟೋಬರ್ 2010 ರಲ್ಲಿ ವಿಶ್ವ ಆರ್ಥಿಕ ಒಕ್ಕೂಟ ಹಾಗೂ ಎ.ಡಿ.ಬಿ. ಸಹಯೋಗದೊಂದಿಗೆ ಜಲಕ್ಷೇತ್ರದ ಸಭೆಯನ್ನು ಹಾಗೂ ಜನವರಿ 2011 ರಲ್ಲಿ ಕೃಷಿ ಬಂಡವಾಳ ಹೂಡಿಕೆ ಸಮಾವೇಶವನ್ನು ಹಮ್ಮಿಕೊಳ್ಳುವ ಬಗ್ಗೆಯೂ ಚರ್ಚಿಸಲಾಯಿತು.

ದುಬೈ ಮತ್ತು ಮಧ್ಯಪೂರ್ವ ರಾಷ್ಟ್ರಗಳ ಪ್ರಮುಖ ರಿಯಲ್ ಎಸ್ಟೇಟ್ ಮತ್ತು ಹೊಟೇಲ್ ಉದ್ಯಮವಾದ ಜುಮೇರಾ ಸಮೂಹದ ಅಧ್ಯಕ್ಷ ಜರಾಲ್ಡ್ ಲಾಲೆಸ್‌ರವರು ಕರ್ನಾಟಕದ ನಿಯೋಗದೊಂದಿಗೆ ಚರ್ಚಿಸಿ ತಮ್ಮ ಉದ್ಯಮವನ್ನು ಕರ್ನಾಟಕ ರಾಜ್ಯದಲ್ಲಿ ವಿಸ್ತರಿಸುವ ಬಗ್ಗೆ ಆಸಕ್ತಿ ತೋರಿದರು.

ಜಿಂಬಾಬ್ವೆ ಉಪ ಪ್ರಧಾನಿ ಭೇಟಿ :ಜಿಂಬಾಬ್ವೆ ದೇಶದ ಉಪ ಪ್ರಧಾನಿಆರ್ಥರ್ ಮುಟಂಬರ ಅವರನ್ನು ಯಡಿಯೂರಪ್ಪನವರ ನೇತೃತ್ವದ ನಿಯೋಗವು ಭೇಟಿ ಮಾಡಿತು. ಜಿಂಬಾಬ್ವೆ ದೇಶದ ಯುವಕರಿಗೆ ಕೌಶಲ್ಯ ತರಬೇತಿ ನೀಡುವಂತೆ ಕರ್ನಾಟಕದ ನಿಯೋಗದ ಸಹಕಾರವನ್ನು ಬಯಸಿದ ಉಪ ಪ್ರಧಾನಿಗಳು, ಬೆಂಗಳೂರಿನ ಉದ್ದೇಶಿತ 2011ರ ಜನವರಿಯ ಕೃಷಿ ಬಂಡವಾಳ ಹೂಡಿಕೆ ಸಭೆಯಲ್ಲಿ ಜಿಂಬಾಬ್ವೆಯು ಭಾಗವಹಿಸುವುದಾಗಿ ಭರವಸೆ ನೀಡಿದರು.

ದ್ವಿಪಕ್ಷೀಯ ಚರ್ಚೆ: ಕೌಲಾಲಂಪುರ ಹಾಗೂ ಇತರೆ ಹಲವಾರು ರಾಷ್ಟ್ರಗಳಲ್ಲಿ ಬ್ರಾಡ್‌ಬ್ಯಾಂಡ್ ನೆಟ್‌ವರ್ಕ್ ಸಂಪರ್ಕಕ್ಕೆ ಪ್ರಖ್ಯಾತಿ ಪಡೆದಿರುವ ಕ್ಯೂ1 ಸಂಸ್ಥೆಯ ನಿರ್ವಾಹಕ ಅಧ್ಯಕ್ಷ ವಿಜಯ್ ಈಶ್ವರನ್ ರವರೊಂದಿಗೆ ಮುಖ್ಯಮಂತ್ರಿಗಳ ನಿಯೋಗ ದ್ವಿಪಕ್ಷೀಯ ಚರ್ಚೆ ಕೈಗೊಂಡಿತು. ಕರ್ನಾಟಕದಲ್ಲಿಯೂ ತಮ್ಮ ಟೆಲಿಕಾಮ್ ಕ್ಷೇತ್ರದ ಉಪಕ್ರಮಗಳನ್ನು ವಿಸ್ತರಿಸಲು ಆಸಕ್ತಿ ತೋರಿಸಿದ ವಿಜಯ್ ಈಶ್ವರನ್ ರವರು ಕೌಲಾಲಂಪುರನಲ್ಲಿ 2010ರ ನ.22 ಮತ್ತು 23ರಂದು ಹಮ್ಮಿಕೊಂಡಿರುವ ಕಾಮನ್‌ವೆಲ್ತ್ ಬಿಸಿನೆಸ್ ಫೋರಂನಲ್ಲಿ ಭಾಗವಹಿಸುವಂತೆ ಕರ್ನಾಟಕದ ನಿಯೋಗವನ್ನು ಆಹ್ವಾನಿಸಿದರು.

ಬಂಡವಾಳ ಹೂಡಲು ಆಸಕ್ತಿ:
ವೆಲ್‌ಸ್ಪನ್ ಸಮೂಹದ ವಿನಿತ್ ಮಿಟ್ಟಲ್‌ರವರೊಂದಿಗೂ ಕರ್ನಾಟಕದ ನಿಯೋಗ ಮಾತುಕತೆ ನಡೆಸಿತು. ವೆಲ್‌ಸಮ್ ಸಮೂಹದವರು ಕರ್ನಾಟಕ ರಾಜ್ಯದಲ್ಲಿ ಉಕ್ಕು, ವಸ್ತ್ರ, ಬೃಹತ್ ನೀರು ಸರಬರಾಜು, ಸೌರ ಇಂಧನ, ಉಷ್ಣ ಇಂಧನ, ರಸ್ತೆ ಅಭಿವೃದ್ಧಿ ಮುಂತಾದ ಕ್ಷೇತ್ರಗಳಲ್ಲಿ ಬಂಡವಾಳ ಹೂಡಲು ಆಸಕ್ತಿ ವ್ಯಕ್ತಪಡಿಸಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+