Get Updates
Get notified of breaking news, exclusive insights, and must-see stories!

ಶರಣಾದ ನಕ್ಸಲಿಗೆ ಮಾಸಿಕ ರು.2,000 ಸಹಾಯಧನ

Naxalites
ಬೆಂಗಳೂರು, ಸೆ.4: ಕರ್ನಾಟಕ ರಾಜ್ಯದ ಮಲೆನಾಡು ಜಿಲ್ಲೆಯ ಕೆಲವು ಭಾಗಗಳಲ್ಲಿ ಎಡಪಂಥೀಯ ಉಗ್ರಗಾಮಿಗಳ ಚಟುವಟಿಕೆಗಳು ಗಮನಕ್ಕೆ ಬಂದಿವೆ. ಕರ್ನಾಟಕ ಸರ್ಕಾರ ಈ ಸಮಸ್ಯೆಯನ್ನು ಎರಡು ರೀತಿಯಿಂದ ಬಗೆಹರಿಸಲು ಯತ್ನಿಸಿದೆ.

ಈವರೆಗಿನ ನಮ್ಮ ಅನುಭವದಲ್ಲಿ ಯುವಕರನ್ನು ಉಗ್ರಗಾಮಿ ಮಾರ್ಗ ಸೇರಲು ಹಾದಿ ತಪ್ಪಿಸಲಾಗುತ್ತಿದೆ. ಈ ರೀತಿ ದಾರಿ ತಪ್ಪಿ ಹಿಂಸಾತ್ಮಕ ಮಾರ್ಗಗಳಿಗೆ ಹೋಗದಂತೆ ಸದವಕಾಶ ನೀಡಲು ಸರ್ಕಾರವು ಶರಣಾಗತಿ ಮತ್ತು ಪುನರ್ವಸತಿ ಕಾರ್ಯನೀತಿಗೆ ಸರ್ಕಾರ ಆದೇಶ ಹೊರಡಿಸಿದೆ.

ಶರಣಾಗತರಾದವರು ವೃತ್ತಿಪರ ತರಬೇತಿ ಹೊಂದಲು ಅರ್ಹರಾಗಿದ್ದು ಅವರಿಗೆ ಒಂದು ವರ್ಷಕಾಲ ಮಾಸಿಕ ರೂ. 2000 ನಿಯತಕಾಲಿಕ ಸಹಾಯಧನ ನೀಡಲಾಗುವುದು. ಶರಣಾಗತರು ಅನುದಾನ ರೀತಿಯ ಸಾಲವಾಗಿ ರೂ.2,00,000ಗಳನ್ನು ಪಡೆಯಬಹುದು.

ಶರಣಾಗತರು ಆಯುಧಗಳು, ಸ್ಫೋಟಕ ವಸ್ತುಗಳು ಮತ್ತು ಸಂಪರ್ಕ ಸಾಧನಗಳನ್ನು ಒಪ್ಪಿಸಿದರೆ ರೂ. 500 ರಿಂದ 25,000 ವರೆಗೆ ನಗದು ಬಹುಮಾನ ನೀಡಲಾಗುವುದು. ಇತರೆ ಉಗ್ರಗಾಮಿಗಳನ್ನು ಹಿಡಿಯಲು ಶರಣಾಗರು ಮಾಹಿತಿ ನೀಡಿದರೆ, ಅವರಿಗೆ ಹೆಚ್ಚುವರಿ ಪ್ರೋತ್ಸಾಹ ಧನ ನೀಡಲಾಗುವುದು.

ಶರಣಾಗತರಾದವರ ವಿರುದ್ದ ದಾಖಲಾಗಿರುವ ಪ್ರಕರಣಗಳನ್ನು ಹಿಂಪಡೆಯಲು ಸಹಾನುಭೂತಿಯಿಂದ ಪರಿಶೀಲಿಸಲಾಗುವುದು. ಈ ಶರಣಾಗತಿಯ ಕಾರ್ಯನೀತಿಯ ಕರ್ನಾಟಕ ರಾಜ್ಯಕ್ಕೆ ಸೇರಿದ ವ್ಯಕ್ತಿಗಳಿಗೆ ಮಾತ್ರ ಅನ್ವಯವಾಗುತ್ತದೆ. ಈ ಕಾರ್ಯನೀತಿಯು ಮೇ 2011 ರವರೆಗೆ ಲಭ್ಯವಿರುತ್ತದೆಂದು ಮಹಾ ನಿರ್ದೇಶಕರು ಮತ್ತು ಆರಕ್ಷಕ ಮಹಾನಿರೀಕ್ಷಕರವರ ಕಛೇರಿ ಪ್ರಕಟಣೆ ತಿಳಿಸಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+