ಸೂತಕದಲ್ಲಿ ಸಿಎಂ ಸೆಕೆಂಡ್ ಷೋ: ಎಚ್ಡಿಕೆ
ರಾಜ್ಯ ಸರ್ಕಾರ ಉಡಾಫೆ ರೀತಿಯಲ್ಲಿ ವರ್ತಿಸುತ್ತಿದೆ. 23 ಜನರ ಸಾವಿಗೆ ಬೆಲೆ ಇಲ್ಲವೇ. ಮುಖ್ಯಮಂತ್ರಿಗಳೇ ನೇರ ಹೊಣೆ ಹೊತ್ತು ರಾಜೀನಾಮೆ ನೀಡಬೇಕು. ಸಿಎಂಗೆ ಮನುಷ್ಯತ್ವ ಇಲ್ಲ ಮಾನವೀಯ ಮೌಲ್ಯದ ಬಗ್ಗೆ ತಿಳಿಯಲು ಅಡ್ವಾಣಿ, ಸುಷ್ಮಾ ಜೊತೆ ಸೆಕೆಂಡ್ ಷೋ ಸಿನಿಮಾ ನೋಡೋಕೆ ಹೋಗುತ್ತಾರೆ. ಸಾವಿನ ಸಮಾಧಿ ಮೇಲೆ ಸಂಭ್ರಮಾಚರಣೆ ಮಾಡುವ ನಿರ್ಲಜ್ಜರು ಎಂದು ಕುಮಾರಸ್ವಾಮಿ ಲೇವಡಿ ಮಾಡಿದ್ದಾರೆ.
ಎಸ್.ಆರ್.ನಾಯಕ್ ಕಳವಳ: ನಗರದ ಮಾಗಡಿ ರಸ್ತೆಯ ಸುಮನಹಳ್ಳಿ ನಿರಾಶ್ರಿತರ ವಸತಿ ಕೇಂದ್ರದಲ್ಲಿ ಅರಾಜಕತೆ, ಭ್ರಷ್ಟಾಚಾರ, ಲೈಂಗಿಕ ದೌರ್ಜನ್ಯ ತಾಂಡವವಾಡುತ್ತಿದೆ ಎಂದು ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ನ್ಯಾ.ಎಸ್.ಆರ್.ನಾಯಕ್ ಕಳವಳ ವ್ಯಕ್ತಪಡಿಸಿದ್ದಾರೆ.
ಪುನರ್ವಸತಿ ಕೇಂದ್ರದ ಕೊಠಡಿಯಲ್ಲಿ ನಿಕೃಷ್ಟ ಪರಿಸ್ಥಿತಿಯಲ್ಲಿ ನಿರಾಶ್ರಿತರು ಜೀವನ ನಡೆಸುತ್ತಿದ್ದಾರೆ. ಆದರೆ, ಮಂತ್ರಿಗಳು ಹಾರಿಕೆಯ ಉತ್ತರ ನೀಡುವ ಮೂಲಕ ಜಾರಿಕೊಳ್ಳುತ್ತಿದೆ. ಇವರು ಒಂದು ದಿನ ಈ ಜಾಗದಲ್ಲಿ ವಾಸವಿದ್ದು ತೋರಿಸಲಿ ಎಂದು ನಾಯಕ್ ಸವಾಲೆಸೆದರು.
ಪುನರ್ವಸತಿ ಕೇಂದ್ರದಲ್ಲಿ ಸತ್ತವರು ಸ್ವಾಭಾವಿಕ ಅಥವಾ ಸಾಂಕ್ರಾಮಿಕ ರೋಗದಿಂದ ಎಂಬ ಸತ್ಯ ಹೊರಬರಬೇಕಾದರೆ ತನಿಖೆ ನಡೆಯಬೇಕು. ಶವಗಳ ಪರೀಕ್ಷೆ ಅನಿವಾರ್ಯ ಎಂದರು.