ಆಯಮ್ ಮಿನಿಸ್ಟರ್, ಮಿನಿಸ್ಟರ್ ಬಚ್ಚೇಗೌಡ!

ಇದು ಸುಳ್ಳಲ್ಲ ನೆಲಮಂಗಲ ಬಳಿ ಭರತ್ ಎಂಬ ಇಂಜಿನಿಯರೊಬ್ಬ ಬಚ್ಚೇಗೌಡ್ರ ಕಾರನ್ನು ಓವರ್ ಟೇಕ್ ಮಾಡಿದ್ದಾನೆ. ಇದರಿಂದ ಕುಪಿತಗೊಂಡ ಸಚಿವರ ಹಿಂಬಾಲಕರು ಓವರ್ ಟೇಕ್ ಮಾಡಿದ ಕಾರನ್ನು ತಡೆದು ಚಾಲಕನನ್ನು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ನಾನ್ಯಾರು ಗೊತ್ತಾ ಕಾರ್ಮಿಕ ಮಂತ್ರಿ ಬಚ್ಚೇಗೌಡ, ನಿನಗೆ ಗೊತ್ತಿಲ್ವ. ಕಾರಿನ ಮೇಲೆ ಕೆಂಪು ದೀಪ ಇದೆ. ಕರ್ನಾಟಕ ಸರಕಾರ ಅಂತ ಬೋರ್ಡ್ ಬೇರೆ ಇದೆ. ಇಷ್ಟಿದ್ರೂ ನಾನ್ಯಾರು ಅಂತ ಪ್ರಶ್ನಿಸುತ್ತಿಯಾ. ಎಷ್ಟು ಧೈರ್ಯ ನಿನಗೆ ಎಂದು ಅಬ್ಬರಿಸಿದ್ದಾರೆ.
ಅಷ್ಟೊತ್ತಿಗಾಗಲೇ ಸಚಿವರ ಗನ್ ಮ್ಯಾನ್ ಗಳು ಭರತ್ ನನ್ನು ಮನಸ್ಸಿಗೆ ಬಂದಂತೆ ಥಳಿಸಿದ್ದಾರೆ. ಅಲ್ಲದೇ, ಆತನ ವಿರುದ್ಧ ಪ್ರಕರಣ ದಾಖಲಿಸುವುದರ ಜೊತೆಗೆ 300 ದಂಡವನ್ನು ಸಹ ತೆಗೆದುಕೊಳ್ಳಲಾಗಿದೆ. ಸಚಿವರ ಈ ಕ್ರಮ ವ್ಯಾಪಕ ಟೀಕಿಗೆ ಒಳಗಾಗಿದ್ದರಿಂದ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿ ಯಡಿಯೂರಪ್ಪ, ಈ ಬಗ್ಗೆ ಸಚಿವರ ವಿವರಣೆ ಕೇಳುವುದರ ಜೊತೆಗೆ ಕ್ಷಮೆಯನ್ನೂ ಯಾಚಿಸಿದ್ದಾರೆ. ಭರತ್ ಮೇಲೆ ದಾಖಲಾಗಿರುವ ಪ್ರಕರಣವನ್ನು ಹಿಂದಕ್ಕೆ ಪಡೆಯುವುದಾಗಿ ಹೇಳಿದ್ದಾರೆ.
ಅವನಿಗೆ ನಾನ್ಯಾಕೆ ಕ್ಷಮೆ ಕೇಳಲಿ. ವೇಗದ ಮಿತಿ ಮೀರಿ ಕಾರು ಚಾಲನೆ ಮಾಡುತ್ತಿದ್ದ ಅವನಿಗೆ ನಾನ್ಯಾಕೆ ಕ್ಷಮೆ ಕೇಳಲಿ ಎಂದು ಬಚ್ಚೇಗೌಡ ಸಿಡಿಮಿಡಿಗೊಂಡಿದ್ದಾರೆ. ಮಿನಿಸ್ಟರ್ ಕಾರು ಎನ್ನುವ ಗ್ಯಾನ ಇಲ್ದೆ ಕಾರು ಚಲಾಯಿಸಿದ, ಜೊತೆಗೆ ದುರಹಂಕಾರದ ಮಾತುಗಳು ಬೇರೆ. ಮಿನಿಸ್ಟರ್ ಆದ್ರೆ ನಾನೇನು ಮಾಡ್ಲಿ. ನೀವ್ಯಾರಾದ್ರೆ ನನಗೇನು. ಇಂತಹ ಉದ್ಧಟತನ ಮಾತುಗಳಿಂದ ಕೋಪಗೊಂಡ ನಾನು ಪ್ರಕರಣ ದಾಖಲಿಸಿಕೊಳ್ಳಲು ಹೇಳಿದೆ. ಸಹನೆ ಕಳೆದುಕೊಂಡ ನಮ್ಮ ಗನ್ ಮ್ಯಾನ್ ಗಳು ಭರತ್ ನಿಗೆ ಏಟು ನೀಡಿದ್ದಾರೆ ಎಂದಿದ್ದಾರೆ. ಕ್ಷಮೆ ಕೇಳಲು ಅವನ್ಯಾರು ಎಂದು ಅವರು ಪ್ರಶ್ನಿಸಿದ್ದಾರೆ.
ದಾಬಾವೊಂದರಲ್ಲಿ ಊಟ ಮುಗಿಸಿಕೊಂಡು ಭರತ್ ಮತ್ತು ಆತನ ಕುಟುಂಬ ಬೆಂಗಳೂರಿಗ ಕಡೆಗೆ ತೆರಳುತ್ತಿತ್ತು. ನೆಲಮಂಗಲದ ಬಳಿದ ಮಿನಿಸ್ಟರ್ ಕಾರನ್ನು ಭರತ್ ಓವರ್ ಟೇಕ್ ಮಾಡಿದ್ದು, ಬಚ್ಚೇಗೌಡ್ರ ಪಿತ್ತ ನೆತ್ತಿಗೇರುವಂತೆ ಮಾಡಿದೆ. ಭರತ್ ಸದಾಶಿವನಗರದ ನಿವಾಸಿಯಾಗಿದ್ದು, ಇಂಜಿನಿಯರ್, ಅಡ್ವೋಕೇಟ್ ಎಂದು ಹೇಳಿದ್ದಾನೆ. ಭರತ್ ಚಲಾಯಿಸುತ್ತಿದ್ದ ಕಾರು ಟಾಟಾ ಸಪಾರಿ.
-
Sachin Tendulkar: ಅಭಿಷೇಕ್ ಶರ್ಮಾಗೆ ಕ್ರಿಕೆಟ್ ದೇವರು ಸಚಿನ್ ತೆಂಡ್ಯೂಲ್ಕರ್ ವಿಶೇಷ ಸಂದೇಶ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು -
ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ ಎಂಬ ಮಾತಿನಂತೆ ನಡೆದುಕೊಂಡ ಯುವರಾಜ್ ಸಿಂಗ್ ಶಿಶ್ಯ ಅಭಿಷೇಕ್ ಶರ್ಮಾ -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
"ಬೆಂಗಳೂರು ಮಲಯಾಳಿಗರ ಹಬ್" ಎಂದ ಕೇರಳಿಗರು, ವೈರಲ್ ವಿಡಿಯೋ ನೋಡಿ ಕಣ್ಣು ಕೆಂಪಾಗಿಸಿದ ಕನ್ನಡಿಗರು -
Bengaluru Property: ಬೆಂಗಳೂರಿನ 510 ಕೋಟಿ ಮೌಲ್ಯದ 14 ಎಕರೆ ಭೂಮಿ ವಶಕ್ಕೆ ಪಡೆದ ಜಿಬಿಎ, ಕಾರಣವೇನು -
Jaggery: ಬೆಲ್ಲದಲ್ಲಿ ಕಲಬೆರಕೆಯ ಕೆಮಿಕಲ್, ಬಣ್ಣ, ಸಕ್ಕರೆ ಮಿಶ್ರಣ: ಪರಿಶೀಲನೆ ಮಾಡುವ ಸರಳ ವಿಧಾನಗಳು -
ಟಿ20 ವಿಶ್ವಕಪ್ 2026 ಭಾರತದ ಮುಡಿಗೆ: ಬಾಲ ಮುದುರಿಕೊಂಡ 'ಸೈಲೆಂಟ್' ಸ್ಯಾಂಟ್ನರ್












Click it and Unblock the Notifications