ಬ್ಲಾಕ್ಬೆರ್ರಿಗೆ ಉತ್ತರಿಸಲು ಆ.31ರ ಗಡುವು

ಆದರೆ ಗುರುವಾರ ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿ ನಡೆದ ಸಭೆಗೆ ಗೈರುಹಾಜರಾದ ಆರ್ಐಎಂ ಇಕ್ಕಟ್ಟಿನ ಪರಿಸ್ಥಿತಿಯಿಂದ ನುಣುಚಿಕೊಂಡಿತು.
ಈ ಬಗ್ಗೆ ಕೆನಡಾ ಮೂಲದ ಆರ್ಐಎಂ ಮತ್ತು ಅದರ ನಿರ್ವಾಹಕರಿಗೆ ಬ್ಲ್ಯಾಕ್ಬೆರ್ರಿ ಎಂಟರ್ಪ್ರೈಸಸ್ (BES) ಮತ್ತು ಬ್ಲ್ಯಾಕ್ಬೆರ್ರಿ ಮೆಸೇಂಜರ್ ಸರ್ವೀಸಸ್ (BBM)ಗಳಿಗೆ (ಇವೆರಡೂ ಕಾನೂನು ಅನುಷ್ಠಾನ ಸಂಸ್ಥೆ-LEAನ ನಿಯಂತ್ರಣಕ್ಕೆ ಎಟಕುವಂತಿರಬೇಕು) ಸಂಬಂಧಿಸಿ ಕಾನೂನುಬದ್ಧ ತಡೆಗೆ ಅವಕಾಶ ನೀಡುವಂತಹ ತಾಂತ್ರಿಕ ಪರಿಹಾರವೊಂದನ್ನು ಒದಗಿಸುವಂತೆ ಕೇಂದ್ರ ಗೃಹ ಕಾರ್ಯದರ್ಶಿ ಜಿ.ಕೆ.ಪಿಳ್ಳೆ ಅವರು ಟೆಲಿಕಾಂ ಇಲಾಖೆ ಕಾರ್ಯದರ್ಶಿ ಪಿ.ಜೆ.ಥಾಮಸ್ ಅವರಿಗೆ ಪತ್ರ ಬರೆದು ಕೇಳಿದ್ದಾರೆ.
ಆ.31ರೊಳಗೆ ಇಂತಹ ಕ್ರಮ ಆಗದಿದ್ದರೆ ಸೇವೆಗಳನ್ನು ತಡೆಹಿಡಿಯಲಾಗುವುದು ಎಂದಿದ್ದಾರೆ. ಬ್ಲ್ಯಾಕ್ಬೆರ್ರಿ ದೇಶದ ಸುರಕ್ಷಾ ವಿಷಯಕ್ಕೆ ತೀವ್ರ ಬೆದರಿಕೆ ಒಡ್ಡುವ ಭೀತಿ ಇದ್ದು ಈ ವಿಷಯದಲ್ಲಿ ಪಿಳ್ಳೆ ಅವರ ದೃಢ ನಿಲುವಿಗೆ ಕೇಂದ್ರ ಸರಕಾರ ಒತ್ತು ನೀಡುವುದೇ ಅಥವಾ ಬ್ಲ್ಯಾಕ್ಬೆರ್ರಿ ಪ್ರಭಾವಕ್ಕೆ ಮಣಿಯಲಿದೆಯೇ ಎಂಬುದನ್ನು ಕಾದು ನೋಡಬೇಕಾಗಿದೆ.
ಪಿಳ್ಳೆ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ವಿವಿಧ ಭದ್ರತಾ ಏಜೆನ್ಸಿ ಪ್ರತಿನಿಧಿಗಳು, ದೂರವಾಣಿ ಇಲಾಖೆ ಮತ್ತು ಬಿಎಸ್ಸೆನ್ನೆಲ್ ಮತ್ತು ಎಂಟಿಎನ್ನೆಲ್ ಅಧಿಕಾರಿಗಳು ಪಾಲ್ಗೊಂಡಿದ್ದರು. ಆದರೆ, ಈ ಸಭೆಗೆ ಆರ್ಐಎಂ ಮತ್ತು ವೊಡಾಫೋನ್, ಭಾರ್ತಿ ಏರ್ಟೆಲ್ ಸಂಸ್ಥೆಗಳು ಗೈರು ಹಾಜರಾಗಿದ್ದವು.
ಸೌದಿ ಅರೇಬಿಯಾ, ಜರ್ಮನಿ ಸೇರಿದಂತೆ ವಿವಿಧ ದೇಶಗಳು ತಮ್ಮ ಆಂತರಿಕ ಸುರಕ್ಷೆಯನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಬ್ಲ್ಯಾಕ್ಬೆರ್ರಿಯ ಜೊತೆ ಕಠಿಣ ನಿಲುವು ತಳೆದಿರುವುದೂ ಇಲ್ಲಿ ಉಲ್ಲೇಖನೀಯ.
-
Bengaluru: ಬೆಂಗಳೂರಿನ ಹೋಟೆಲ್ಗಳಲ್ಲಿ ಗ್ರಾಹಕರಿಗೆ ಶಾಕ್: ಸಾಂಬಾರ್ ಬದಲು ಬೇರೆ ಆಯ್ಕೆ - ಪೋಸ್ಟ್ ವೈರಲ್, ಡಿಸಿ ಹೇಳಿದ್ದೇನು -
Sulekere: ಮಂಡ್ಯದಲ್ಲಿ ಸೂಳೇಕೆರೆ ಮರುನಾಮಕರಣ ಚರ್ಚೆ: ಇತಿಹಾಸಕ್ಕೆ ಮಸಿ ಬಳಿಯಬೇಡಿ ಎಂದ ಜಗದೀಶ್ ಕೊಪ್ಪ -
B Khata: ಬಿ ಖಾತಾದಿಂದ ಎ ಖಾತಾ ಪರಿವರ್ತನೆ ಸವಾಲುಗಳು: ವೆಚ್ಚ, ಪ್ರಕ್ರಿಯೆ ಸ್ವಂತ ವಿವರ ಹಂಚಿಕೊಂಡ ಆಸ್ತಿದಾರ ಶ್ರೀನಿವಾಸ ಮಠ -
Rain in Karnataka: ಬಿರು ಬಿಸಿಲಿನ ನಡುವೆ ಬೆಂಗಳೂರು ಸೇರಿ ಕರ್ನಾಟಕದ ಈ ಜಿಲ್ಲೆಗಳಲ್ಲಿ ನಾಲ್ಕು ದಿನ ಮಳೆ: ಐಎಂಡಿ ರಿಪೋರ್ಟ್ -
ವಿಶ್ವಕಪ್ ಕಿರೀಟದ ಹಿಂದೆ ದೈವಬಲ: ಕರಾವಳಿಯ ಅಳಿಯ ಸೂರ್ಯಕುಮಾರ್ ಯಾದವ್ ನಡೆಗೆ ಮೆಚ್ಚುಗೆಗಳ ಸುರಿಮಳೆ -
New Airport: 3 ಜಿಲ್ಲೆ ಜನರ ಅನುಕೂಲಕ್ಕಾಗಿ ಸರ್ಕಾರದ ಮಾಸ್ಟರ್ ಪ್ಲ್ಯಾನ್: ಬಳ್ಳಾರಿ ಬಳಿ ಹೊಸ ಏರ್ಪೋರ್ಟ್ -
KSRTC: ಸಾರಿಗೆ ಲೋಕಕ್ಕೆ 'ಪಲ್ಲಕ್ಕಿ' ಮೆರುಗು: ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ 115 ಹೊಸ ಬಸ್ಗಳ ಲೋಕಾರ್ಪಣೆ -
ಬೆಂಗಳೂರಲ್ಲಿ ಗ್ಯಾಸ್ ಏಜೆನ್ಸಿಗಳ ಭರ್ಜರಿ ದಂಧೆ: ಸಿಲಿಂಡರ್ ಸಿಗದೇ ಗ್ರಾಹಕರು ಕಂಗಾಲು; ಕಾಳಸಂತೆಯಲ್ಲಿ ₹3,000ಕ್ಕೆ ಮಾರಾಟ -
LPG Gas: ಎಲ್ಪಿಜಿ ನಿಯಮಗಳಲ್ಲಿ ಭಾರೀ ಬದಲಾವಣೆ; ಗ್ರಾಹಕರು ದೂರು ನೀಡಲು ಸಹಾಯವಾಣಿ ಸಂಖ್ಯೆಗಳ ಬಿಡುಗಡೆ -
Gold Rate March 13: ಸತತ 3ನೇ ದಿನವೂ ಚಿನ್ನ - ಬೆಳ್ಳಿ ಬೆಲೆ ಭರ್ಜರಿ ಕುಸಿತ, ಎಷ್ಟಾಗಿದೆ ಇಂದಿನ ಬಂಗಾರದ ಬೆಲೆ -
Resort: ಕರ್ನಾಟಕದಲ್ಲಿ ಶುರುವಾಯ್ತು ರೆಸಾರ್ಟ್ ರಾಜಕೀಯ: ‘ಅವರು ನಮ್ಮ ಅತಿಥಿಗಳು’ ಎಂದ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ -
Horoscope March 13: ಈ ರಾಶಿಯವರ ಬದುಕಲ್ಲಿ ಸಕಾರಾತ್ಮಕ ಬೆಳವಣಿಗೆ, ಅಧಿಕ ಲಾಭ; ದಿನ ಭವಿಷ್ಯ












Click it and Unblock the Notifications