ಪಾಲಿಥಿನ್ ಬ್ಯಾಗ್ ನಿಷೇಧ : ಉಡುಪಿ ಮಾದರಿ

ಅಕ್ಷರತೆಯಲ್ಲಿ ರಾಜ್ಯದಲ್ಲಿ ಪ್ರಥಮ ಸ್ಥಾನ ಪಡೆದಿರುವುದು ಪಾಲಿಥಿನ್ ಬ್ಯಾಗುಗಳನ್ನು ನಿಷೇಧಿಸುವಲ್ಲಿ ಮಹತ್ತರ ಪಾತ್ರ ವಹಿಸಿದೆ. ಈ ಬ್ಯಾಗ್ ಗಳ ಬಳಕೆಯಿಂದಾಗುವ ದುಷ್ಪರಿಣಾಮಗಳ ಬಗ್ಗೆ ಜಾಗೃತಿಯನ್ನು ಇಲ್ಲಿನ ಜನತೆಯಲ್ಲಿ ಮೂಡಿಸಿದ್ದರಿಂದ ಪಾಲಿಥಿನ್ ಬ್ಯಾಗ್ ಗಳ ನಿಷೇಧ ಸಾಧ್ಯವಾಗಿದೆ. ಆದರೆ, ಇದು ಸುಲಭವಾಗಿರಲಿಲ್ಲ. ಇವುಗಳ ಬಳಕೆಯಿಂದಾಗುವ ಅನಾಹುತಗಳ ಬಗ್ಗೆ ಅನೇಕ ವಿಚಾರ ಸಂಕಿರಣ, ಕಮ್ಮಟಗಳನ್ನು ನಡೆಸಿದ ನಂತರ ನಗರಾಡಳಿತ ಈ ನಿರ್ಧಾರಕ್ಕೆ ಬಂದಿತು ಎಂದು ನಗರದ ಆಯುಕ್ತ ಗೋಕುಲದಾಸ್ ನಾಯಕ್ ಹೇಳಿದ್ದಾರೆ.
40 ಮೈಕ್ರಾನ್ ವರೆಗಿನ ಪಾಲಿಥಿನ್ ಬ್ಯಾಗುಗಳನ್ನು ನಿಷೇಧಿಸಲಾಗಿದೆ. ಇಲ್ಲಿಯವರೆಗೆ ಉಡುಪಿ ನಗರದಾದ್ಯಂತ ಎಲ್ಲೆಂದರಲ್ಲಿ ಉಚಿತವಾಗಿ ನೀಡಲಾಗುತ್ತಿದ್ದ ಪಾಲಿಥಿನ್ ಬ್ಯಾಗುಗಳು ಮಾಡಿದ ಹಾವಳಿಯನ್ನು ಅಭ್ಯಸಿಸಿ ಈ ನಿರ್ಧಾರಕ್ಕೆ ಉಡುಪಿ ಬಂದಿದೆ. ಇದೇ ಮಾದರಿಯನ್ನು ಹಿಂಬಾಲಿಸಲು ಮಂಗಳೂರು ಮತ್ತು ಕಾರವಾರ ನಗರಾಡಳಿತಗಳು ನಿರ್ಧರಿಸಿವೆ.
ಬೆಂಗಳೂರಿನ ಅಧಿಕಾರಿಗಳಿಗೆ ಈ ಬುದ್ಧಿ ಎಂದು ಬರುವುದೋ ಆ ದೇವನೇ ಬಲ್ಲ. ಮಳೆಗಾಲದಲ್ಲಿ ಒಂದು ಸಣ್ಣ ಮಳೆ ಬಂದರೆ ಸಾಕು ಮೋರಿಗಳು ಕಟ್ಟಿಕೊಂಡು ಬೆಂಗಳೂರಿನ ರಸ್ತೆ ಚರಂಡಿಗಳನ್ನು ಒಂದು ಮಾಡುವ ನೀರು ಸೃಷ್ಟಿಸುವ ಆವಾಂತರವನ್ನು ಗಂಭೀರವಾಗಿ ಪರಿಗಣಿಸಿದರೆ ಈ ಸಮಸ್ಯೆಗೆ ಪರಿಹಾರ ದೊರೆತೀತು. ಬೆಂಗಳೂರಿನಂಥ ಬೃಹತ್ ನಗರಗಳಲ್ಲಿ ಪಾಲಿಥಿನ್ ಬ್ಯಾಗುಗಳನ್ನು ಯಶಸ್ವಿಯಾಗಿ ನಿಷೇಧಿಸಿದರೆ ಶೇ.75ರಷ್ಟು ಚರಂಡಿ ತುಂಬಿ ತುಳುಕುವ ಸಮಸ್ಯೆಗೆ ಪರಿಹಾರ ದೊರೆತಂತೆ.
ಇದು ಅಷ್ಟು ಸುಲಭದ ಮಾತಲ್ಲ. ಪಾಲಿಕೆ ಕಠಿಣ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ ಗ್ರಾಹಕರು ಪಾಲಿಥಿನ್ ಬ್ಯಾಗುಗಳ ಮೇಲಿನ ಮೋಹವನ್ನು ತ್ಯಜಿಸಬೇಕಾಗುತ್ತದೆ. ತರಕಾರಿ ಕೊಳ್ಳುವಾಗ, ಸಣ್ಣಪುಟ್ಟ ಸಾಮಗ್ರಿಗಳನ್ನು ಕೊಳ್ಳುವಾಗ ಪಾಲಿಥಿನ್ ಬ್ಯಾಗುಗಳನ್ನು ಕೈಯಲ್ಲಿ ಹಿಡಿಯದೇ ಬೆಂಗಳೂರಿನ ಜನ ಮನೆಗೆ ಮರಳುವುದಿಲ್ಲ.
ಇನ್ನು ಕಟ್ಟಿಕೊಂಡಿರುವ ಬೆಂಗಳೂರಿನ ಚರಂಡಿಗಳು ಚೆನ್ನೈನ ನದಿಯಂತೆ 'ಸುವಾಸನೆ' ಬೀರುತ್ತಿರುವುದು ಈ ಕಾರಣದಿಂದಾಗಿಯೇ. ತ್ಯಜಿಸಲ್ಪಡುವ ಪಾಲಿಥಿನ್ ಬ್ಯಾಗುಗಳು ನೇರವಾಗಿ ಹೋಗಿ ಸೇರುವುದು ಚರಂಡಿಗಳಿಗೇ. ಜನರಲ್ಲಿ ಇದರ ದುಷ್ಪರಿಣಾಮ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಯಾರೂ ತಲೆ ಕೆಡಿಸಿಕೊಂಡಿಲ್ಲ. ತಿಪ್ಪೆ ಪಾಲಾಗುವ ಬ್ಯಾಗುಗಳು ಬಿಡಾಡಿ ಪ್ರಾಣಿಗಳ ಹೊಟ್ಟೆ ಸೇರಿ ಪ್ರಾಣಕ್ಕೆ ಸಂಚಕಾರ ಒಡ್ಡುತ್ತಿವೆ. ಇನ್ನು ಅವುಗಳನ್ನು ಸುಟ್ಟಾಗ ಬಿಡುಗಡೆಯಾಗುವ ರಾಸಾಯನಿಕ ಕ್ರಿಯೆಯಿಂದ ವಿಷಕಾರಕ ವಾಯು ಬಿಡುಗಡೆಯಾಗುತ್ತಿದೆ.
ಹೀಗೆ ಮಾಡಿದರೆ ಹೇಗೆ?
* ಅಂಗಡಿಗೆ ಹೋಗುವಾಗ ಕೈಚೀಲ ಕೊಂಡೊಯ್ಯಬೇಕು.
* ಬಳಸಲೇಬೇಕಾದಂಥ ಪ್ರಸಂಗ ಬಂದಾಗ, ಬಳಸಿ ಒಂದೆಡೆ ಸೇರಿಸಿ ಹಳೆ ಪೇಪರಿನವರಿಗೆ ನೀಡಬೇಕು.
* ತಿಪ್ಪೆಗೆ ಬೇಕೆಂದ ಹಾಗೆ ಎಸೆಯುವುದನ್ನು ನಿಲ್ಲಿಸುವುದು.
* ಅಂಗಡಿಗಳಲ್ಲಿ ಪಾಲಿಥಿನ್ ಬ್ಯಾಗ್ ಗಳನ್ನು ನಿರಾಕರಿಸಿ.
* ಪಾಲಿಥಿನ್ ಬ್ಯಾಗುಗಳಿಗೆ ಆಗ್ರಹಿಸಲೇಬೇಡಿ.
* ಚರಂಡಿಗೆ ಎಸೆಯುವುದನ್ನು ಬಿಟ್ಟುಬಿಡಿ.
* ಸಾಧ್ಯವಾದಲ್ಲೆಲ್ಲ ನಾವೇ ಇತರರಲ್ಲಿ ಜಾಗೃತಿ ಮೂಡಿಸಬೇಕು.
* ಆಡಳಿತ ನಿಷೇಧಿಸಿದರೆ ಹೃದಯದಿಂದ ಸ್ವಾಗತಿಸಬೇಕು.
* ಪರಿಸರ ಮಾಲಿನ್ಯದ ಬಗ್ಗೆ ಕಾಳಜಿಯಿರಲಿ.
-
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ -
ತಿರುಮಲಕ್ಕೆ ಹೋಗುತ್ತಿದ್ದ ತುಪ್ಪದ ಟ್ಯಾಂಕರ್ ಪಲ್ಟಿ: ತುಪ್ಪಕ್ಕಾಗಿ ಬಕೆಟ್ ಹಿಡಿದು ಬಂದ ಜನ, ವಿಡಿಯೋ Viral












Click it and Unblock the Notifications