ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಂಗಳೂರು ವಿಮಾನ ದುರಂತಕ್ಕೆ ಕಾರಣವೇನು?

By Prasad
|
Google Oneindia Kannada News

Mangalore air crash, the resons behind
ಮಂಗಳೂರು, ಮೇ 22 : ಬಜ್ಪೆ ವಿಮಾನ ನಿಲ್ದಾಣದಲ್ಲಿ ಅಪಘಾತ ಹೇಗೆ ಸಂಭವಿಸಿತು ಎಂಬುದರ ಬಗ್ಗೆ ಇನ್ನೂ ಸ್ಪಷ್ಟವಾದ ಮಾಹಿತಿ ಬರಬೇಕಾಗಿದೆ. ಸದ್ಯಕ್ಕೆ ವಿಮಾನದಲ್ಲಿ ಸಿಲುಕಿದ ದೇಹಗಳನ್ನು ಹೊರತೆಗೆಯುವ ಕೆಲಸ ಭರದಿಂದ ಸಾಗಿದ್ದು ಬ್ಲಾಕ್ ಬಾಕ್ಸ್ ದೊರೆತ ನಂತರ ನಿಖರವಾದ ಮಾಹಿತಿ ಹೊರೆಯಲಿದೆ.

ಈವರೆಗೆ ತಿಳಿದಿರುವ ಮಾಹಿತಿಯ ಪ್ರಕಾರ, ಅತೀ ವೇಗದಲ್ಲಿ ರನ್ ವೇ ಸ್ಪರ್ಷಿಸಿದ ವಿಮಾನ ಪುಟ್ಟ ರನ್ ವೇ ದಾಟಿ ಮುಂದೆ ಜಿಗಿದಿದೆ. ಇದಕ್ಕೆ ಬ್ರೇಕ್ ಫೇಲ್ ಆಗಿರಬಹುದು ಎಂದೂ ಹೇಳಲಾಗುತ್ತಿದೆ. ಈ ರನ್ ವೇಯಲ್ಲಿ ಅತಿ ಕಡಿಮೆ ವೇಗದಲ್ಲಿ ಲ್ಯಾಂಡ್ ಆಗಬೇಕು ಎಂಬುದು ವಿಮಾನ ನಿಲ್ದಾಣದ ಅಧಿಕಾರಿಯೊಬ್ಬರ ಅನಿಸಿಕೆ. ರನ್ ವೇ ಉದ್ದವನ್ನು ಅಳೆಯಲು ಪೈಲಟ್ ವಿಫಲವಾಗಿ ನಿಯಂತ್ರಣ ಮಾಡಲಾಗದಿದ್ದರಿಂದ ದುರಂತ ಸಂಭವಿಸಿದೆ ಎನ್ನಲಾಗುತ್ತಿದೆ.

ದುರಂತ ಸಂಭವಿಸಿದ್ದು ಬೆಳಗಿನ ಜಾವದಲ್ಲಿ. ಮೋಡ ಮುಸುಕಿದ ವಾತಾವರಣವಿದ್ದುದೂ ದುರಂತಕ್ಕೆ ಕಾರಣವಿರಬಹುದು ಎನ್ನಲಾಗುತ್ತಿದೆ. ಕೆಲ ಪ್ರತ್ಯಕ್ಷ ದರ್ಶಿಗಳ ಪ್ರಕಾರ ವಿಮಾನದ ಟೈರ್ ಒಡೆದದ್ದರಿಂದ ನಿಯಂತ್ರಿಸಲು ಪೈಲಟ್ ಗೆ ಆಗಿಲ್ಲ. ಪೈಲಟ್ ಮತ್ತೆ ಟೈಕಾಫ್ ಮಾಡಲು ಪ್ರಯತ್ನಿದ್ದಾರಾದರೂ ಅದು ಸಾಧ್ಯವಾಗದೆ ರನ್ ವೇ ಮುಂದಿನ ಗಿಡಗಳಿದ್ದ ನೆಲಕ್ಕೆ ಬಿದ್ದು ಅಪಘಾತಕ್ಕೀಡಾಗಿದೆ. ದುರಂತದ ಬಗ್ಗೆ ಸ್ಪಷ್ಟ ಮಾಹಿತಿ ದೊರೆಯಬೇಕಿದ್ದರೆ ಬ್ಲಾಕ್ ಬಾಕ್ಸ್ ದೊರೆಯುವವರೆಗೆ ಕಾಯಬೇಕು.

ತನಿಖೆಗೆ ಆದೇಶ : ಕೇಂದ್ರ ವಿಮಾನಯಾನ ಸಚಿವ ಪ್ರಫುಲ್ ಪಟೇಲ್ ಅವರು ಮಂಗಳೂರು ವಿಮಾನ ದುರಂತದ ಬಗ್ಗೆ ತನಿಖೆ ನಡೆಸಲು ಆದೇಶಿಸಿದ್ದಾರೆ.

ಸಹಾಯವಾಣಿ ಸಂಖ್ಯೆ: 0824-2220 422, 011-25603101

* ಮಂಗಳೂರಿನಲ್ಲಿ ಭೀಕರ ವಿಮಾನ ಅಪಘಾತ
* ಬಜ್ಪೆಯಲ್ಲಿ ನಕರಸದೃಶ ವಾತಾವರಣ
* ವಿಮಾನ ಅಪಘಾತ; ಮಳೆಯ ನಡುವೆ ರಕ್ಷಣಾ ಕಾರ್ಯ
* ಅಪಘಾತಕ್ಕೀಡಾದ ವಿಮಾನ ಪೈಲಟ್ ಝೆಡ್ ಗ್ಲೂಸಿಯಾ

ವಿಡಿಯೋ
* ವಿಡಿಯೋ : ಬೆಂಕಿ ಉಂಡೆಯಂತಾದ ವಿಮಾನ
* ವಿಡಿಯೋ : ಪುಟ್ಟ ರನ್ ವೇ ಜಿಗಿದ ಏರ್ ಇಂಡಿಯಾ ವಿಮಾನ
* ವಿಡಿಯೋ : ದುರಂತಕ್ಕೆ ಪೈಲಟ್ ತಪ್ಪು ಕಾರಣ?
* ವಿಡಿಯೋ : ಮಂಗಳೂರು ವಿಮಾನ ದುರಂತದಲ್ಲಿ 160 ಸಾವು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X