ಇ-ತ್ಯಾಜ್ಯ ವಿಲೇವಾರಿ ನೀತಿ ಜಾರಿ: ರಮೇಶ್
ಸೋಮವಾರ
ರಾಜ್ಯಸಭೆಯಲ್ಲಿ
ಪ್ರಶ್ನೋತ್ತರ
ವೇಳೆಯಲ್ಲಿ
ಮಾತನಾಡಿದ
ಪರಿಸರ
ಮತ್ತು
ಅರಣ್ಯ
ಸಚಿವ
ಜೈರಾಮ್
ರಮೇಶ್
ಅವರು,
ಇ-ತ್ಯಾಜ್ಯವು
ಪರಿಸರ
ಮತ್ತು
ಮಾನವ
ಆರೋಗ್ಯಕ್ಕೆ
ಅಪಾಯವನ್ನುಂಟು
ಮಾಡುತ್ತಿರುವುದರಿಂದ
ದೇಣಿಗೆಯ
ಹೆಸರಿನಲ್ಲಿ
ಸೆಕೆಂಡ್
ಹ್ಯಾಂಡ್
ಕಂಪ್ಯೂಟರ್ಗಳ
ಆಮದಿಗೆ
ವೈಯಕ್ತಿಕವಾಗಿ
ತಾನು
ವಿರುದ್ಧವಾಗಿದ್ದೇನೆ
ಎಂದರು.
ಆದರೆ
ಕಂಪ್ಯೂಟರ್ನಂತಹ
ಬಳಕೆಯಾದ
ವಿದ್ಯುನ್ಮಾನ
ಉಪಕರಣಗಳ
ಆಮದಿನ
ಮೇಲೆ
ನಿಷೇಧ
ಈ
ನಿಯಮಾವಳಿಗಳಲ್ಲಿ
ಸೇರಿದೆಯೇ
ಎನ್ನುವುದನ್ನು
ಅವರು
ತಿಳಿಸಲಿಲ್ಲ.
ಇದೇ ಮೊದಲ ಬಾರಿಗೆ ಸರಕಾರವು ಇ-ತ್ಯಾಜ್ಯ ನಿರ್ವಹಣೆಗಾಗಿ ನಿಯಮಾವಳಿಗಳನ್ನು ತರುತ್ತಿದೆ. ಮೇ 15ರೊಳಗೆ ಅವುಗಳನ್ನು ಪ್ರಕಟಿಸಲಾಗುತ್ತದೆ ಎಂದರು. ಪ್ರಸಕ್ತ ಉತ್ತರ ಪ್ರದೇಶದ ಮೊರಾದಾಬಾದ್ ಮತ್ತು ದಿಲ್ಲಿಯ ಸೀಲಂಪುರದಂತಹ ನಗರಗಳಲ್ಲಿನ ಅನೌಪಚಾರಿಕ ಅಥವಾ ಅಸಂಘಟಿತ ಕ್ಷೇತ್ರದಲ್ಲಿ ಮೊಬೈಲ್ ಫೋನ್ಗಳಂತಹ ವಿದ್ಯುನ್ಮಾನ ಉಪಕರಣಗಳ, ಶೇ. 85-90ರಷ್ಟು ಮರುಸಂಸ್ಕರಣೆ ನಡೆಯುತ್ತಿದೆ ಎಂದರು.
ಸಿಪಿಎಸ್ಬಿ ನಡೆಸಿರುವ ಸಮೀಕ್ಷೆಯಂತೆ, 2005ರಲ್ಲಿ ದೇಶದಲ್ಲಿ ಅಂದಾಜು 1.47 ಲಕ್ಷ ಟನ್ಗಳಷ್ಟು ಇ-ತ್ಯಾಜ್ಯ ಉತ್ಪಾದನೆಯಾಗಿದ್ದು, 2012 ರ ವೇಳೆಗೆ ಇದು ೮ ಲಕ್ಷ ಟನ್ಗೆ ಏರುವ ನಿರೀಕ್ಷೆಯಿದೆ. ಅಲ್ಲದೆ, ಸುಮಾರು 50,000 ಟನ್ಗಳಷ್ಟು ಇ-ತ್ಯಾಜ್ಯವನ್ನು ದೇಶದೊಳಕ್ಕೆ ಅಕ್ರಮವಾಗಿ ಆಮದು ಮಾಡಿಕೊಳ್ಳಲಾಗುತ್ತಿದೆ ಅಥವಾ ಅವನ್ನು ಡಂಪ್ ಮಾಡಲಾಗುತ್ತಿದೆ ಎಂದರು.