ಟಿವಿ ಚಾನಲ್ಲುಗಳಿಗೆ ಸದನ ಸಮಿತಿ ಸಮನ್ಸ್

ಚುನಾವಣೆ ಮುಂದೂಡಲೊಲ್ಲದ ಸರಕಾರದ ವಿರುದ್ಧ ಕಾಂಗ್ರೆಸ್ ಮತ್ತು ಜೆಡಿಎಸ್ ಸದಸ್ಯರು ಅಂದಿನ ಸಭೆಯಲ್ಲಿ ಉದ್ದಕ್ಕೂ ಹರಿಹಾಯ್ದಿದ್ದರು. ವಾಗ್ವಾದಗಳು, ಕೈಕೈ ಮಿಲಾಯಿಸುವುದು, ಮೈಕು ಕಿತ್ತುಕೊಳ್ಳುವುದು, ಏರಿದ ಧ್ವನಿಯಲ್ಲಿ ಅರಚುವುದು, ಹಾಳೆಗಳನ್ನು ಗಾಳಿಗೆ ತೂರುವುದು ಮುಂತಾದ ಚಟುವಟಿಕೆಗಳಲ್ಲಿ ಸದಸ್ಯರು ಚಲನಶೀಲರಾಗಿದ್ದರು. ಟಿವಿ ಚಾನಲ್ಲುಗಳಲ್ಲಿ ಸಭೆಯಲ್ಲಿ ನಡೆದ ಈ ಪಂದ್ಯಾಟಗಳನ್ನು ನೇರವಾಗಿ ಬಿತ್ತರಿಸಿದವು. ಇದನ್ನು ವೀಕ್ಷಿಸಿದ ಜನತೆಗೆ ಇದೇನು ಸಭೆಯೋ ಅಥವಾ ಫಿಶ್ ಮಾರ್ಕೆಟ್ಟೋ ಎಂಬ ಅನುಮಾನ ಮೂಡಿತ್ತು.
ವಿಧಾನಸಭೆಯ ಅಂದಿನ ಕಲಾಪಗಳನ್ನು ಕೆಲವು ಟಿವಿ ಚಾನಲ್ಲುಗಳು ನೇರ ಪ್ರಸಾರ ಮಾಡಿದವಷ್ಟೆ. ಆದರೆ, ಆ ಪ್ರಸಾರಗಳನ್ನು ಚಾನಲ್ಲುಗಳು ನ್ಯಾಯಸಮ್ಮತವಾಗಿ, ಸರಿಯಾಗಿ, ಸಮರ್ಪಕವಾಗಿ, ಪಕ್ಷಬೇಧವಿಲ್ಲದೆ ಮಾಡಿಲ್ಲವೆಂದು ಶಾಸಕಾಂಗ ಸದನ ಸಮಿತಿಯ ಚೇರ್ಮನ್ ಹೇಮಚಂದ್ರ ಸಾಗರ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲ, ಅಂದಿನ ಸುದ್ದಿ ಚಿತ್ರಗಳನ್ನು ಪ್ರಸಾರ ಮಾಡಿದ ಚಾನಲ್ಲುಗಳಿಗೆ ಸಮನ್ಸುಗಳನ್ನು ಕಳಿಸಲು ಅಧಿಕಾರಿಗಳಿಗೆ ಆಜ್ಞಾಪಿಸಿದ್ದಾರೆ. ಸಾಗರ್ ಅವರು ಹೊರಡಿಸಿರುವ ಆದೇಶ ಪತ್ರದಲ್ಲಿ, "etv, kasturi, zee kannada, udaya ಮುಂತಾದ ಚಾನಲ್ಲುಗಳ ಮುಖ್ಯಸ್ಥರು ಬುಧವಾರ ಬೆಳಗ್ಗೆ 11.30 ಗಂಟೆಗೆ ವಿಧಾನಸಭೆಯಲ್ಲಿ ವಿಶೇಷ ಸದನ ಸಮಿತಿಯ ಮುಂದೆ ಹಾಜರಾಗಬೇಕು" ಎಂದು ಹೇಳಲಾಗಿದೆ.
ಮಾಧ್ಯಮಗಳು ತಮಗೆ ಯಾವುದು ಮುಖ್ಯವೆನಿಸುತ್ತದೋ ಆ ಚಿತ್ರಗಳನ್ನು ಸೆರೆಹಿಡಿಯುತ್ತಾರೆ. ಎಲ್ಲಿ ಸುದ್ದಿಚಿತ್ರ ಕಾಣಿಸುತ್ತದೋ ಅಲ್ಲೆಲ್ಲ ಕ್ಯಾಮರಾ ಕಣ್ಣು ಸುಳಿದಾಡುತ್ತದೆ. ಯಾವುದು ಸುದ್ದಿ ಚಿತ್ರ ಯಾವುದು ಸುದ್ದಿ ಚಿತ್ರ ಅಲ್ಲ ಎನ್ನುವುದು ಚಾನಲ್ಲುಗಳ ಸುದ್ದಿ ಸಂಪಾದಕರಿಗೆ ಬಿಟ್ಟ ವಿಚಾರವಾಗಿರುತ್ತದೆ. ಅದನ್ನು ಹೊರಗಿನವರು ಎಡಿಟ್ ಅಥವಾ ಡಿಕ್ಟೇಟ್ ಮಾಡುವುದಕ್ಕೆ ಸಾಧ್ಯವಿಲ್ಲ, ಸಾಧ್ಯವಾಗಕೂಡದು. ಇತ್ತೀಚೆಗೆ ಮಾಜಿ ಮುಖ್ಯಮಂತ್ರಿ ಎಚ್ ಡಿ ದೇವೇಗೌಡರು 'ಯಾವನ್ರೀ ಅವನು ಸಿಎಂ...' ಎಂಬಿತ್ಯಾದಿಯಾಗಿ ಹೇಳಿದುದನ್ನು ಚಿತ್ರೀಕರಿಸಿಕೊಂಡ ಚಾನಲ್ಲುಗಳು 24 ಗಂಟೆ ಲೂಪು ಹಾಕಿ ತೋರಿಸಿದ್ದೇ ತೋರಿಸಿದವು. ಬೇಡ ಅನ್ನಕ್ಕೆ ಆಗತ್ತಾ?
ಸದನದ ಪಾವಿತ್ರ್ಯತೆ, ಗೋಪ್ಯತೆ ಮತ್ತು ಘನತೆಗೆ ಕುಂದು ಬರುವಂತೆ ಮಾಧ್ಯಮ ನಡೆದುಕೊಂಡರೆ ಆಗ ಸಭಾಧ್ಯಕ್ಷರು ಸಂಬಂಧಪಟ್ಟ ಪತ್ರಿಕೆ, ಟಿವಿ ಮಾಧ್ಯಮವನ್ನು ಸದನಕ್ಕೆ ಕರೆಸಿ ಛೀಮಾರಿ ಹಾಕುವುದು ಸದನದ ಸಂಪ್ರದಾಯ ಮತ್ತು ಹಕ್ಕು. ಆದರೆ, ಆಡಳಿತ ಪಕ್ಷ ಮತ್ತು ವಿರೋಧ ಪಕ್ಷದ ನಡುವೆ ನಡೆದ ಹಣಾಹಣಿ ಹೋರಾಟವನ್ನು ನ್ಯಾಯಪೂರ್ವಕವಾಗಿ ಟಿವಿಗಳಲ್ಲಿ ಬಿಂಬಿಸಿಲ್ಲವೆಂದು ಆರೋಪಿಸಿ ಚಾನಲ್ಲುಗಳಿಗೆ ವಿಧಾನಸಭಾ ಬುಲಾವ್ ಆಜ್ಞೆ ಹೊರಡಿಸಿರುವ ಹೇಮಚಂದ್ರ ಸಾಗರ್ ಅವರ ನಡೆಯನ್ನು ಬುಲಾವ್ ಸ್ವೀಕರಿಸಿರುವ ಚಾನಲ್ಲುಗಳು ಹೇಗೆ ಪರಿಗಣಿಸುತ್ತವೆ ಎನ್ನುವುದನ್ನು ಕಾದು ನೋಡಬೇಕಾಗಿದೆ.
-
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ -
ತಿರುಮಲಕ್ಕೆ ಹೋಗುತ್ತಿದ್ದ ತುಪ್ಪದ ಟ್ಯಾಂಕರ್ ಪಲ್ಟಿ: ತುಪ್ಪಕ್ಕಾಗಿ ಬಕೆಟ್ ಹಿಡಿದು ಬಂದ ಜನ, ವಿಡಿಯೋ Viral












Click it and Unblock the Notifications