ಗುಲ್ಬರ್ಗಾ : ಉದ್ಯಾನವನ ಅಭಿವೃದ್ಧಿಗೆ 1.3 ಕೋ ರು
ಗುಲಬರ್ಗಾ ಜಿಲ್ಲೆಯ ಚಿತ್ತಾಪೂರ ತಾಲೂಕಿನ ಮರತೂರಿನಲ್ಲಿ ವಿಜ್ಞಾನೇಶ್ವರ ಉದ್ಯಾನವನದ ಕಾಮಗಾರಿಗಳಿಗೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು. ವಿಜ್ಞಾನೇಶ್ವರರ ಸಾಹಿತ್ಯವು 11 ನೇ ಶತಮಾನದ ಇತಿಹಾಸದ ಮೇಲೆ ಬೆಳಕು ಚೆಲ್ಲುತ್ತದೆ. ಅವರು ರಚಿಸಿದ ಮಿತಾಕ್ಷರ ಕೃತಿಯಲ್ಲಿ ಆ ಕಾಲದಲ್ಲಿಯೇ ಕಾನೂನು ಮತ್ತು ಮಾನವ ಹಕ್ಕುಗಳ ಸಂರಕ್ಷಣೆಗಳ ಬಗ್ಗೆ ಚರ್ಚಿಸಿದ್ದಾರೆ.
ಭಾರತೀಯ ಕಾನೂನು ವ್ಯವಸ್ಥೆಯನ್ನು ನಿಯಂತ್ರಿಸುವ ಅಂಶಗಳು ಸಹ ಈ ಕೃತಿಯಲ್ಲಿವೆ. ವಿಜ್ಞಾನೇಶ್ವರರ ಸ್ಮರಣಾರ್ಥ ಮರತೂರಿನಲ್ಲಿ ಸರ್ಕಾರಿ ಕಾನೂನು ಮಹಾವಿದ್ಯಾಲಯ ಸ್ಥಾಪಿಸಲು ಅನುಮೋದನೆ ನೀಡಲಾಗಿದೆ ಎಂದು ಹೇಳಿದರು. ಮರತೂರನ್ನು ಸುವರ್ಣ ಗ್ರಾಮ ಯೋಜನೆಯಡಿಯಲ್ಲಿ ಸೇರಿಸಿದ್ದೇವೆ. ಜನರು ನಾಡಿನ ಮೂಲೆ ಮೂಲೆಯಿಂದ ಬಂದು ಈ ಗ್ರಾಮವನ್ನು ವಿಜ್ಞಾನೇಶ್ವರ ಉದ್ಯಾನವನವನ್ನು ನೋಡುವಂತಾಗಬೇಕು ಎಂದು ಹೇಳಿದರು.
ಇದಕ್ಕೂ ಮುನ್ನ ಮರತೂರಿನ ಕಾಶಿ ವಿಶ್ವನಾಥ ದೇವಾಲಯಕ್ಕೆ ಭೇಟಿ ನೀಡಿದ್ದ ಅವರು, ಈ ದೇವಸ್ಥಾನದ ಅಭಿವೃದ್ಧಿಗೆ 50 ಲಕ್ಷ ರೂ. ಮಂಜೂರು ಮಾಡಲಾಗುವುದು. ಮೊದಲ ಕಂತಿನ 25 ಲಕ್ಷ ರೂ. ಶೀಘ್ರವೇ ಬಿಡುಗಡೆ ಮಾಡಲಾಗುವುದು ಎಂದು ಹೇಳಿದರು.
(ದಟ್ಸ್ ಕನ್ನಡ ವಾರ್ತೆ)