ಜ. 3:ಪಾವಗಡದಲ್ಲಿ ಮಕ್ಕಳ ನೇತ್ರ ಚಿಕಿತ್ಸೆ ಶಿಬಿರ
ಪಾವಗಡ, ಜ. 02: ಶ್ರೀ ಶಾರದಾದೇವಿ ಕಣ್ಣಿನ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ಹಾಗೂ ಪಾವಗಡದ ಸ್ವಾಮಿ ವಿವೇಕಾನಂದ ಸಂಘಟಿತ ಗ್ರಾಮಾಂತರ ಆರೋಗ್ಯ ಕೇಂದ್ರದ ಸಂಯುಕ್ತ ಆಶ್ರಯದಲ್ಲಿ "ಮಕ್ಕಳ ನೇತ್ರ ಚಿಕಿತ್ಸೆ ಹಾಗೂ ನ್ಯೂನತೆಗಳ ಪರಿಹಾರ ಶಿಬಿರ" ವನ್ನು ಏರ್ಪಡಿಸಲಾಗಿದೆ.
ಬೆಂಗಳೂರು ನಾರಾಯಣ ನೇತ್ರಾಲಯದ ಸುಪ್ರಸಿದ್ಧ ನೇತ್ರ ತಜ್ಞರಾದ ಡಾ. ಭುಜಂಗ ಶೆಟ್ಟಿ ಹಾಗೂ ನಾರಾಯಣ ಆರೋಗ್ಯ ಸಮುಚ್ಚಯದ ಡಾ.ದೇವಿ ಪ್ರಸಾದ ಶೆಟ್ಟಿ ರವರ ಮಾರ್ಗದರ್ಶನದಲ್ಲಿ ಈ ಶಿಬಿರವನ್ನು ವ್ಯವಸ್ಥೆಗೊಳಿಸಲಾಗಿದೆ.
ಶಿಬಿರದ
ವಿವರಗಳು
:ಗುರುವಾರ
(
ಜ.
3)
ಮತ್ತು
ಶುಕ್ರವಾರ
(
ಜ.
4),
ಸ್ಥಳ
:
ಶ್ರೀ
ಶಾರದಾದೇವಿ
ಕಣ್ಣಿನ
ಆಸ್ಪತ್ರೆ,
ಪಾವಗಡ
ಸಮಯ
:
ಬೆ.
9
ರಿಂದ
ಸಂಜೆ
4
ಗಂಟೆಯತನಕ.
ಈ ಶಿಬಿರದಲ್ಲಿ ತಜ್ಞರಾದ ಶ್ರೀಮತಿ ಡಾ. ವಸುಧಾ, ಎಂ.ಎಸ್. (ನೇತ್ರ), ಮಕ್ಕಳ ನೇತ್ರ ತಜ್ಞರು ಹಾಗೂ ಡಾ. ಕಣ್ಣನ್ ನಾರಾಯಣ್, ಎಂ.ಎಸ್. (ನೇತ್ರ) ಭಾಗವಹಿಸಲಿದ್ದಾರೆ.ಚಿಕ್ಕ ಮಕ್ಕಳ ಕಣ್ಣಿನ ನ್ಯೂನತೆಗಳ ತಪಾಸಣೆ ಹಾಗೂ ಚಿಕಿತ್ಸೆಗೆ ಮಾರ್ಗದರ್ಶನ ನೀಡಲಾಗುತ್ತದೆ. ಪಾವಗಡ ಆಸುಪಾಲಿಗ ಕ್ರಾಮಾಂತರ ಜನತೆ, ರೈತ ಬಾಂಧವರು ಈ ಶಿಬಿರದ ಪ್ರಯೋಜನ ಪಡೆಯಬಹುದು ಎಂದು ಸ್ವಾಮಿ ಜಪಾನಂದ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವ್ಯವಸ್ಥೆ : ಡಾ. ಕೆ.ಆರ್. ಗೋವಿಂದ ಡಾ.ಸೈಯದ್ ಆಲಿ ಅಕ್ಬರ್ ಅಧ್ಯಕ್ಷರು, ಡಾ. ಎಂ. ಸತ್ಯಂ, ಡಾ.ಕೆ.ರವಿ ಕೃಷ್ಣ ,ವೈದ್ಯಾಧಿಕಾರಿಗಳು ಡಾ.ಎಸ್.ಪಿ.ಚಂದ್ರಕಾಂತ್ ಹಾಗೂ ಬೆಂಗಳೂರು ವೈದ್ಯಕೀಯ ಕಾಲೇಜಿನ ವೈದ್ಯರುಗಳು. ದೂ.244030/244716
( ದಟ್ಸ್ ಕನ್ನಡ ವಾರ್ತೆ)