Get Updates
Get notified of breaking news, exclusive insights, and must-see stories!

‘ಅಂತರಂಗ’ ರಂಗತಂಡದಿಂದ ಮೇಕಪ್‌ ನಾಣಿ ಸ್ಮರಣೆ

‘ಅಂತರಂಗ’ ರಂಗತಂಡದಿಂದ ಮೇಕಪ್‌ ನಾಣಿ ಸ್ಮರಣೆ
‘ಮೇಕಪ್‌ ನಾಣಿ’ ಪ್ರಶಸ್ತಿ ವಿಜೇತ ರಾಮಕೃಷ್ಣ ಅವರಿಗೆ ಅಭಿನಂದನೆ

ಬೆಂಗಳೂರು : ಮೇಕಪ್‌ ನಾಣಿ ಅವರನ್ನು ಸ್ಮರಿಸುವ ಸುಸಂದರ್ಭವನ್ನು ‘ಅಂತರಂಗ’ ರಂಗತಂಡ ನಗರದ ಎಚ್‌.ಎನ್‌.ಕಲಾಕ್ಷೇತ್ರದಲ್ಲಿ ಕಲ್ಪಿಸಿತ್ತು.

ಮೇಕಪ್‌ ರಂಗದಲ್ಲಿ ಅತ್ಯುನ್ನತ ಸಾಧನೆಗೈದಿರುವ ಎನ್‌.ಕೆ. ರಾಮಕೃಷ್ಣ ಅವರಿಗೆ ‘ಮೇಕಪ್‌ ನಾಣಿ’ ಪ್ರಶಸ್ತಿ ನೀಡುವ ಕಾರ್ಯಕ್ರಮದಲ್ಲಿ ನಾಣಿಯ ನೆನಪುಗಳು ಎಲ್ಲರಲ್ಲೂ ಸುಳಿದಾಡಿದವು.

ಪ್ರಶಸ್ತಿ ವಿತರಣೆಯ ನಂತರ ಮಾತನಾಡಿದ ವಿಧಾನ ಪರಿಷತ್‌ ಸದಸ್ಯ ಮತ್ತು ನಟ ಮುಖ್ಯಮಂತ್ರಿ ಚಂದ್ರು, ಮೇಕಪ್‌ ನಾಣಿ ಕಣ್ಮರೆಯಾಗಿದ್ದರೂ ಎಲ್ಲರ ಮನದಲ್ಲಿ ನೆಲೆಸಿದ್ದಾರೆ. ರಾಮಕೃಷ್ಣರಂತಹ ಪ್ರತಿಭಾವಂತರನ್ನು ಸೃಷ್ಟಿಸಿ, ರಂಗಾಸಕ್ತರ ಮನದಲ್ಲಿ ಜೀವಂತವಾಗಿದ್ದಾರೆ ಎಂದರು.

ನಾಣಿ ಅವರನ್ನು ಕುರಿತು ಹಿರಿಯ ರಂಗಕರ್ಮಿ ಸಿ.ಆರ್‌. ಸಿಂಹ ಮತ್ತು ನಟಿ ಉಮಾಶ್ರೀ ಭಾವನಾತ್ಮಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ನಾಣಿ ಅವರ ಪತ್ನಿ ಮತ್ತು ಹಿರಿಯ ರಂಗಕರ್ಮಿ ಭಾರ್ಗವಿ ನಾರಾಯಣ ಅವರ ನಿರ್ದೇಶನದಲ್ಲಿ ಮೂಡಿಬಂದ ಟಿ.ಪಿ. ಕೈಲಾಸಂ ಅವರ ‘ಪಾತು ತೌರ್ಮನೆ’ ನಾಟಕ ಎಲ್ಲರನ್ನು ರಂಜಿಸಿತು.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+