ಫೆ.10ರಂದು ಮಹತ್ವದ ಕಾವೇರಿ ಪ್ರಾಧಿಕಾರ ಸಭೆ
ನವದೆಹಲಿ : ಕಾವೇರಿ ನದಿ ನೀರು ಹಂಚಿಕೆ ಸಮಸ್ಯೆ ಕುರಿತು ಪ್ರಧಾನಿ ಎ.ಬಿ.ವಾಜಪೇಯಿ ಜೊತೆ ಕರ್ನಾಟಕದ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಫೆಬ್ರವರಿ 3ನೇ ತಾರೀಕು, ಸೋಮವಾರ ಚರ್ಚಿಸಿದರು.
ಫೆಬ್ರವರಿ 10 ರಂದು ಕಾವೇರಿ ನದಿ ಪ್ರಾಧಿಕಾರದ ಮುಂದಿನ ಸಭೆ ನಡೆಯಲಿದ್ದು, ನದಿ ನೀರಿನ ಹಂಚಿಕೆ ಕುರಿತು ಮತ್ತಷ್ಟು ಚರ್ಚೆ ನಡೆಯಲಿದೆ. ಈ ಸಭೆಯಲ್ಲಿ ಸಂಕಷ್ಟ ಪರಿಸ್ಥಿತಿಯಲ್ಲಿ ನೀರಿನ ಹಂಚಿಕೆ ಕುರಿತ ಸೂತ್ರವನ್ನು ರೂಪಿಸುವ ಪ್ರಯತ್ನಗಳನ್ನು ನಡೆಸಲಾಗುವುದು ಎಂದು ಕೇಂದ್ರ ಜಲ ಸಂಪನ್ಮೂಲ ಸಚಿವ ಅರ್ಜುನ್ ಚರಣ್ ಸೇಥಿ ಸೋಮವಾರ ಸುದ್ದಿಗಾರರಿಗೆ ತಿಳಿಸಿದರು.
ವಾಜಪೇಯಿ ಭೇಟಿ : ಮುಖ್ಯಮಂತ್ರಿ ಎಸ್ಸೆಂ.ಕೃಷ್ಣ ಅವರು ನ್ಯಾಯಾಲಯದಿಂದ ಹೊರಗೆ ಕಾವೇರಿ ವಿವಾದವನ್ನು ಪರಿಹಿರಿಸಿಕೊಳ್ಳುವ ಕುರಿತು ಒಲವು ಹೊಂದಿದ್ದು , ಈ ಸಂಬಂಧ ಕಾವೇರಿ ಪ್ರಾಧಿಕಾರ ಸಭೆಯನ್ನು ತಕ್ಷಣವೇ ಕರೆಯಬೇಕೆಂದು ಪ್ರಧಾನಿ ವಾಜಪೇಯಿ ಅವರನ್ನು ತಮ್ಮ ಸೋಮವಾರದ ಭೇಟಿಯ ಸಂದರ್ಭದಲ್ಲಿ ಒತ್ತಾಯಿಸಿದರು.
ವಾಜಪೇಯಿ ಹಾಗೂ ಕೃಷ್ಣ ಅವರ ಭೇಟಿಯ ಸಂದರ್ಭದಲ್ಲಿ ಕೇಂದ್ರ ನಗರಾಭಿವೃದ್ಧಿ ಸಚಿವ ಅನಂತಕುಮಾರ್ ಹಾಜರಿದ್ದರು.
(ಪಿಟಿಐ)
ಮುಖಪುಟ / ಕಾವೇರಿ ಕನ್ನಡಿ