ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶವ ಪರೀಕ್ಷೆ ಪೂರ್ಣ, ತವರಿಗೆ ನಾಗಪ್ಪನವರ ಶವ

By Staff
|
Google Oneindia Kannada News

ಮೈಸೂರು : ಚಾಮರಾಜನಗರ ಜಿಲ್ಲೆಯ ರಾಂಪುರದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸೋಮವಾರ ನಾಗಪ್ಪನವರ ಶವ ಪರೀಕ್ಷೆ ಮುಗಿದಿದ್ದು, ನಾಗಪ್ಪನವರ ಕುಟುಂಬದವರು ಕಳೇಬರವನ್ನು ಕಾಮಗೆರೆಗೆ ಕೊಂಡೊಯ್ದರು.

ಸುಮಾರು ಒಂದೂವರೆ ತಾಸು ಕಾಲ ವಿಧಿ ವಿಜ್ಞಾನ ವಿಭಾಗದ 6 ವೈದ್ಯರು ಶವಪರೀಕ್ಷೆ ನಡೆಸಿದರು. ನಾಗಪ್ಪನವರ ಕೊಳೆತ ದೇಹದ ಹೃದಯಕ್ಕೆ ಹತ್ತಿರದಲ್ಲಿ ಒಂದು ಗುಂಡಿನ ಗಾಯ ಇರುವುದು ಶವ ಪರೀಕ್ಷೆಯಿಂದ ದೃಢಪಟ್ಟಿದೆ. ಪರೀಕ್ಷೆಯ ನಂತರ ಪತ್ತೆಯಾಗಿರುವ ಪ್ರಮುಖ ಮಾಹಿತಿಗಳ ವಿವರಗಳನ್ನು ತಕ್ಷಣವೇ ಒದಗಿಸಲು ವೈದ್ಯರು ನಿರಾಕರಿಸಿದರು.

ಶವ ಪರೀಕ್ಷೆ ನಂತರ ನಾಗಪ್ಪನವರ ಕಳೇಬರವನ್ನು ಕಾಮಗೆರೆಗೆ ಕೊಂಡೊಯ್ಯಲಾಯಿತು. ಹಾದಿಯಲ್ಲಿ ಪದೇ ಪದೇ ಜನ ವಾಹನವನ್ನು ನಿಲ್ಲಿಸಿ, ನಾಗಪ್ಪನವರ ಅಂತಿಮ ದರ್ಶನ ಪಡೆಯಲು ನೂಕುನುಗ್ಗಲಲ್ಲಿ ಬರುತ್ತಿದ್ದುದು ಸಾಮಾನ್ಯವಾಗಿತ್ತು.

(ಪಿಟಿಐ)

ಮುಖಪುಟ / ವೀರಪ್ಪನ್‌ ಶಿಕಾರಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X