ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ನಕ್ಸಲೈಟರಿಂದ ಆಂಧ್ರ ಅರಣ್ಯಾಭಿವೃದ್ಧಿ ನಿಗಮಾಧ್ಯಕ್ಷರ ಮನೆ ಚಿಂದಿ
ಹೈದರಾಬಾದ್ : ಪೀಪಲ್ಸ್ ವಾರ್ ಗ್ರೂಪ್ನವರೆನ್ನಲಾದ ನಕ್ಸಲೈಟ್ಗಳು ಆಂಧ್ರಪ್ರದೇಶ ಅರಣ್ಯಾಭಿವೃದ್ಧಿ ನಿಗಮದ ಅಧ್ಯಕ್ಷ ಎ.ನಾಗೇಶ್ವರ ರಾವ್ ಅವರ ಪೂರ್ವಿಕರ ಮನೆಯನ್ನು ಸ್ಫೋಟಿಸಿದ್ದಾರೆ.
ಸೋಮವಾರ ನಡೆದಿರುವ ಈ ಘಟನೆಯನ್ನು ಪೊಲೀಸರು ಮಂಗಳವಾರ ಬಹಿರಂಗ ಪಡಿಸಿದ್ದಾರೆ. ಅಸಿಫ್ಬಾದ್ ಮಂಡಲ ಪಂಚಾಯ್ತಿ ವ್ಯಾಪ್ತಿಯ ಚಿಕ್ಕಕುಂಟ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಐವರು ನಕ್ಸಲೈಟ್ಗಳು ಟಿಡಿಪಿ ಪಕ್ಷದ ನಾಗೇಶ್ವರ ರಾವ್ ಅವರ ಮನೆಗೆ ನುಗ್ಗಿ, ಮನೆಯವರನ್ನೆಲ್ಲಾ ಹೊರಗೆ ಓಡಿಸಿದ್ದಾರೆ. ನಂತರ ಜಿ-ಲೆಟಿನ್ ಕಡ್ಡಿಗಳನ್ನು ಉಪಯೋಗಿಸಿ ಮನೆಯನ್ನು ಸ್ಫೋಟಿಸಿದ್ದಾರೆ. ಏಳು ಕೋಣೆಗಳು ಸಾಕಷ್ಟು ಹಾಳಾಗಿದ್ದು, ಮನೆಯ ಸಾಕಷ್ಟು ವಸ್ತುಗಳು ಸುಟ್ಟುಹೋಗಿವೆ.
(ಪಿಟಿಐ)
ಮುಖಪುಟ / ಇವತ್ತು... ಈ ಹೊತ್ತು...
Comments
Story first published: Tuesday, March 26, 2002, 5:30 [IST]