ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಶಿಡ್ಲಘಟ್ಟದ ಬಸೆಟ್ಟಿಹಳ್ಳಿಯ ಕಂಗೆಡಿಸಿದ ಕರುಳುಬೇನೆ,ಮೂವರ ಸಾವು
ಶಿಡ್ಲಘಟ್ಟ : ಕಲುಷಿತ ನೀರು ಸೇವನೆಯಿಂದ ಉಂಟಾದ ತೀವ್ರ ಸ್ವರೂಪದ ವಾಂತಿ ಭೇದಿಯಿಂದಾಗಿ ತಾಲ್ಲೂಕಿನ ಬಸೆಟ್ಟಿಹಳ್ಳಿಯ ಮೂವರು ಸಾವಿಗೀಡಾಗಿದ್ದು, 70 ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿದ್ದಾರೆ.
ರಾಮಯ್ಯ (80) ಹಾಗೂ ನಾರಾಯಣ ಸ್ವಾಮಿ (70) ಎನ್ನುವವರು ವಾಂತಿ ಭೇದಿಯಿಂದ ಶಿಡ್ಲಘಟ್ಟ ಸರ್ಕಾರಿ ಆಸ್ಪತ್ರೆಯಲ್ಲಿ ಸತ್ತಿದ್ದು , ಆನಂದ (8) ಎನ್ನುವ ಹುಡುಗ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯದಲ್ಲಿಯೇ ಸಾವಿಗೀಡಾಗಿದ್ದಾನೆ. ಇತರ ಮೂವರ ಸ್ಥಿತಿ ಗಂಭೀರವಾಗಿದೆ ಎಂದು ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿ ವೀರ ಬ್ರಹ್ಮಚಾರಿ ತಿಳಿಸಿದ್ದಾರೆ.
ಭಾರೀ ಮಳೆಯಿಂದಾಗಿ ಗ್ರಾಮದ ಜನರು ಬಳಸುವ ಕೊಳವೆ ಬಾವಿಗೆ ಚರಂಡಿ ನೀರು ಬೆರೆತು, ಕುಡಿಯುವ ನೀರು ಕಲುಷಿತಗೊಂಡಿದೆ ಎನ್ನಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ವಿ. ಮುನಿಯಪ್ಪ ಸ್ಥಳಕ್ಕೆ ಭೇಟಿ ನೀಡಿ, ನೊಂದವರಿಗೆ ಸಾಂತ್ವನ ಹೇಳಿದರು.
(ಇನ್ಫೋ ವಾರ್ತೆ)
Comments
Story first published: Wednesday, October 24, 2001, 5:30 [IST]