ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಅಡಿಕೆ ಕ್ರಿಯಾ ಸಮತಿ ಅಧ್ಯಕ್ಷರಾಗಿ ಶಾಂತರಾಮ್ ಹೆಗಡೆ ಆಯ್ಕೆ
ಮಂಗಳೂರು : ಉತ್ತರ ಕನ್ನಡ ಜಿಲ್ಲಾ ಕಾಂಗ್ರೆಸ್ ಮತ್ತು ಜಿಲ್ಲಾ ಬ್ಯಾಂಕ್ ಅಧ್ಯಕ್ಷ ಶಾಂತರಾಮ್ ಹೆಗಡೆ ಅವರನ್ನು ಅಡಿಕೆ ಬೆಳೆಗಾರರ ಕ್ರಿಯಾ ಸಮಿತಿ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ.
ಗುರುವಾರ ಕ್ಯಾಂಪ್ಕೋ ಆಶ್ರಯದಲ್ಲಿ ನಡೆದ ಸಭೆಯಲ್ಲಿ , ಅಡಿಕೆಬೆಳೆಗಾರರು ಮತ್ತು ಸಹಕಾರಿ ಧುರೀಣರು ಶಾಂತರಾಮ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಿದರು. ಬಲಿಷ್ಟವಾದ ಅಡಿಕೆ ಲಾಬಿಯನ್ನು ಸಂಘಟಿಸಿ ಹೋರಾಟ ನಡೆಸಲು ರಚಿಸಿರುವ ಅಡಿಕೆ ಬೆಳೆಗಾರರ ಕ್ರಿಯಾ ಸಮಿತಿಯ ನೇತೃತ್ವ ಈಗ ಶಾಂತರಾಮ್ ಕೈಯಲ್ಲಿದೆ.
ಸಮಿತಿಯ ಸಂಚಾಲಕರಾಗಿ ಕ್ಯಾಂಪ್ಕೋದ ಅಧ್ಯಕ್ಷ ನಾಗರಾಜ ಶೆಟ್ಟಿ, ಉಪಾಧ್ಯಕ್ಷರಾಗಿ ಪತ್ತಡ್ಕ ಗಣಪತಿ ಭಟ್ ನೇಮಕಗೊಂಡಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ಕೃಷ್ಣಗಾರುಡಿಯ ಕನ್ನಡಿ
Story first published: Friday, August 31, 2001, 0:00 [IST]