NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ
NR Narayana Murthy: ಇನ್ಫೋಸಿಸ್ ಸಹ-ಸಂಸ್ಥಾಪಕ ಎನ್ ಆರ್ ನಾರಾಯಣ ಮೂರ್ತಿ ಹಾಗೂ ಸಂಸದೆ ಸುಧಾ ಮೂರ್ತಿ ಅವರು ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಬೆಂಗಳೂರಿನ ಹೃದಯ ಭಾಗದಲ್ಲಿ ಬರೋಬ್ಬರಿ 50 ಕೋಟಿ ರೂಪಾಯಿ ಮೊತ್ತದ ಐಷಾರಾಮಿ ಮನೆಯನ್ನು ಖರೀದಿ ಮಾಡಿದ್ದು, ದಂಪತಿ ಸುದ್ದಿಯಲ್ಲಿದ್ದಾರೆ. ನಾರಾಯಣ ಮೂರ್ತಿ ಮತ್ತು ಸುಧಾ ಮೂರ್ತಿ ಅವರ ಮನೆಯು ಐಷಾರಾಮಿ ಸೌಕರ್ಯಗಳನ್ನು ಹೊಂದಿದೆ. ಈಗ ಖರೀದಿ ಮಾಡಿರುವ ಮನೆಯು ಬೆಂಗಳೂರಿನ ಪ್ರೀಮಿಯಂ ಸ್ಥಳಗಳಲ್ಲಿ ಒಂದಾಗಿದ್ದು ಐಷಾರಾಮಿಗಳ ಪ್ರತಿಬಿಂಬವಾಗಿದೆ ಎಂದೇ ವ್ಯಾಖ್ಯಾಸಿಲಾಗಿದೆ.
ಯುಬಿ ಸಿಟಿ: ಬೆಂಗಳೂರಿನ ಪ್ರೀಮಿಯಂ ಸ್ಥಳ
ಬೆಂಗಳೂರಿನ ಹೃದಯಭಾಗ ಹಾಗೂ ಐಷಾರಾಮಿ ಸ್ಥಳಗಳಲ್ಲಿ ಒಂದು ಎಂದೇ ಖ್ಯಾತಿ ಗಳಿಸಿರುವ ಯುಬಿ ಸಿಟಿ: ಬೆಂಗಳೂರಿನ ಪ್ರೀಮಿಯಂ ಸ್ಥಳದಲ್ಲಿ ನಾರಾಯಣ ಮೂರ್ತಿ ಹಾಗೂ ಸುಧಾ ಮೂರ್ತಿ ಅವರ ಹೊಸ ಮನೆ ಇದೆ. ಬೆಂಗಳೂರಿನ ಕೇಂದ್ರ ವ್ಯಾಪಾರ ಪ್ರದೇಶವಾದ ಯುಬಿ ಸಿಟಿಯ ಕಿಂಗ್ಫಿಷರ್ ಟವರ್ಸ್ನಲ್ಲಿದೆ. ಇದು ನಗರದ ಅತ್ಯಂತ ಪ್ರಸಿದ್ಧ ಪ್ರದೇಶಗಳಲ್ಲಿ ಒಂದಾಗಿದೆ. ಅಲ್ಲದೆ ಎಂಜಿ ರಸ್ತೆ, ಬ್ರಿಗೇಡ್ ರಸ್ತೆ ಮತ್ತು ಕಬ್ಬನ್ ರಸ್ತೆಯಂತಹ ಅನೇಕ ಪ್ರಸಿದ್ಧ ಪ್ರದೇಶಗಳಿಗೆ ಕೂಗಳತೆಯ ದೂರದಲ್ಲಿದೆ.

ಹೇಗಿದೆ ಇನ್ಫೋ ದಂಪತಿಯ ಐಷಾರಾಮಿ ಮನೆ
ಇನ್ನು ಬೆಂಗಳೂರಿನಲ್ಲಿರುವ ದಂಪತಿಯ ಹೊಸ ಮನೆಯ / ಅಪಾರ್ಟ್ಮೆಂಟ್ ಸುಮಾರು 8,400 ಚದರ ಅಡಿ ವಿಸ್ತೀರ್ಣವನ್ನು ಒಳಗೊಂಡಿದ್ದು, ವಿಶಾಲವಾದ ನಾಲ್ಕು ಮಲಗುವ ಕೋಣೆಗಳನ್ನು ವಿನ್ಯಾಸ ಮಾಡಲಾಗಿದೆ. ಅಪಾರ್ಟ್ಮೆಂಟ್ ಸೌಕರ್ಯ ಮತ್ತು ಐಷಾರಾಮಿ ಸೇವೆ ನೀಡುವಂತೆ ವಿನ್ಯಾಸಗೊಳಿಸಲಾಗಿದೆ. ಇದು ಐದು ಪಾರ್ಕಿಂಗ್ ಸ್ಲಾಟ್ಗಳ ಹೆಚ್ಚುವರಿ ಪ್ರಯೋಜನವನ್ನೂ ಒಳಗೊಂಡಿದೆ. ದೊಡ್ಡ ಒಳಾಂಗಣ ಸ್ಥಳವು ಐಷಾರಾಮಿ ವ್ಯವಸ್ಥೆ ಸೇರಿದೆ. ವಿವಿಧ ಮಾಧ್ಯಮ ವರದಿಗಳ ಪ್ರಕಾರ ಈ ಹೊಸ ಅಪಾರ್ಟ್ಮೆಂಟ್ ಮೌಲ್ಯವು ಅಂದಾಜು ಸುಮಾರು 50 ಕೋಟಿ ರೂಪಾಯಿ ಎಂದು ಹೇಳಲಾಗಿದೆ. ದಂಪತಿ ಇದೇ ಕಟ್ಟಡದಲ್ಲಿ ಮತ್ತೊಂದು ಅಪಾರ್ಟ್ಮೆಂಟ್ ಅನ್ನು ಸಹ ಹೊಂದಿದ್ದಾರೆ, ಅದನ್ನು ಅವರು ಮೊದಲು 29 ಕೋಟಿ ರೂ. ಖರೀದಿ ಮಾಡಿದ್ದರು.
ವಿಶೇಷ ಸೌಲಭ್ಯಗಳು
ಇನ್ನು ಈ ಅಪಾರ್ಟ್ಮೆಂಟ್ನಲ್ಲಿ ಕಿಂಗ್ಫಿಷರ್ ಟವರ್ಸ್ ತನ್ನ ನಿವಾಸಿಗಳಿಗೆ ಈಜುಕೊಳ, ಕ್ಲಬ್ಹೌಸ್, ಟೆನಿಸ್ ಕೋರ್ಟ್ ಮತ್ತು ಹೆಲಿಪ್ಯಾಡ್ನಂತಹ ವಿಶ್ವ ದರ್ಜೆಯ ಸೌಲಭ್ಯಗಳನ್ನು ಒದಗಿಸುತ್ತದೆ. ಸುಂದರವಾಗಿ ನಿರ್ವಹಿಸಲ್ಪಟ್ಟ ಸುತ್ತಮುತ್ತಲಿನ ಪ್ರದೇಶಗಳು ಮತ್ತು ಐಷಾರಾಮಿ ಸೌಲಭ್ಯಗಳು ನಿವಾಸಿಗಳು ಉತ್ತಮ ಗುಣಮಟ್ಟದ ಜೀವನಶೈಲಿಯನ್ನು ಖಚಿತಪಡಿಸುತ್ತದೆ. ಕಿಂಗ್ಫಿಷರ್ ಟವರ್ಸ್ ಅನ್ನು 4.5 ಎಕರೆ ಜಾಗದಲ್ಲಿ ನಿರ್ಮಿಸಲಾಗಿದೆ. ಈ ರೀತಿ ಕೇವಲ 81 ವಿಶೇಷ ಅಪಾರ್ಟ್ಮೆಂಟ್ಗಳು ಇವೆ. ವಸತಿ ಸಂಕೀರ್ಣವನ್ನು ಸಾಮಾನ್ಯವಾಗಿ ಬಿಲಿಯನೇರ್ಸ್ ಟವರ್ ಎಂದು ಕರೆಯಲಾಗುತ್ತದೆ. ಈ ಪ್ರದೇಶದಲ್ಲಿ ಬೆಂಗಳೂರಿನ ಕೆಲವು ಅತ್ಯಂತ ಪ್ರಭಾವಶಾಲಿ ವ್ಯಕ್ತಿಗಳು ನೆಲೆಸಿದ್ದಾರೆ.
-
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ -
Bengaluru: ಪಬ್ನಲ್ಲಿ 150 ರೂ. ಕೊಟ್ಟು ಆರ್ಡರ್ ಮಾಡಿದ್ರೆ ಬಂದಿದ್ದು ಬರೀ ಹಪ್ಪಳ-ಸಂಡಿಗೆ: ದಂಗಾದ ಗ್ರಾಹಕ -
ಇಂಡೋನೇಷ್ಯಾದಲ್ಲಿ 7.4 ತೀವ್ರತೆಯ ಪ್ರಬಲ ಭೂಕಂಪ: ಏಷ್ಯಾ ರಾಷ್ಟ್ರಗಳಲ್ಲಿ ಸುನಾಮಿ ಆತಂಕ, ಭಾರತದ ಮೇಲಾಗುವ ಪರಿಣಾಮವೇನು? -
Bengaluru House Rent: ಬೆಂಗಳೂರಿನ ಪ್ರೈಮ್ ಏರಿಯಾದಲ್ಲೂ ನಾನ್ವೆಜ್ ಪ್ರಿಯರಿಗೆ ಮನೆ ಸಿಗ್ತಿಲ್ಲ, ಸೋಷಿಯಲ್ ಮೀಡಿಯಾ ಚರ್ಚೆ -
Prakash Raj: ನಾಸ್ತಿಕನಾದರೂ ತಾಯಿಯ ನಂಬಿಕೆಗೆ ಗೌರವ ಕೊಟ್ಟು; ಕ್ರೈಸ್ತ ಧರ್ಮದ ಸಂಪ್ರದಾಯ ಪಾಲನೆ: ನಟ ಪ್ರಕಾಶ್ ರಾಜ್ -
Education: CBSE 9 ಮತ್ತು 10ನೇ ತರಗತಿಯ ಹೊಸ ಪಠ್ಯಕ್ರಮ ಇಂದು ಬಿಡುಗಡೆ -
ಮುಂದಿನ 2 ರಿಂದ 3 ವಾರಗಳಲ್ಲಿ ಇರಾನ್ ಮೇಲೆ ಅತ್ಯಂತ ಭೀಕರ ದಾಳಿ: ಟ್ರಂಪ್ ಎಚ್ಚರಿಕೆ -
ವಿದ್ಯಾರ್ಥಿಗಳ ಮೊಬೈಲ್ ಗೀಳಿಗೆ ಬ್ರೇಕ್: ಹೊಸ 'ಡಿಜಿಟಲ್ ನೀತಿ' ಪ್ರಕಟಿಸಿದ ಆರೋಗ್ಯ ಇಲಾಖೆ -
Raghav Chadha: ಸಂಸದ ರಾಘವ್ ಚಡ್ಡಾಗೆ ಶಾಕ್ ಕೊಟ್ಟ ಎಎಪಿ, ಬಿಜೆಪಿ ಸೇರಲಿದ್ದಾರೆಯೇ ಸ್ಟಾರ್ ರಾಜಕಾರಣಿ -
Nuwan Thushara: ಆರ್ಸಿಬಿಗಾಗಿ ಶ್ರೀಲಂಕಾ ಕ್ರಿಕೆಟ್ ಮಂಡಳಿಯ ವಿರುದ್ಧವೇ ತಿರುಗಿ ಬಿದ್ದ ಸ್ಟಾರ್ ಆಟಗಾರ ನುವಾನ್ ತುಷಾರ












Click it and Unblock the Notifications