ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಬಳ್ಳಾರಿ ಜಿಲ್ಲೆಯ ಒಣೆನೂರಿನಲ್ಲಿ ದಲಿತ ಮಹಿಳೆಯ ಬೆತ್ತಲೆ ಮೆರವಣಿಗೆ
ಬಳ್ಳಾರಿ: ಜಿಲ್ಲೆಯ ಒಣೆನೂರು ಗ್ರಾಮದಲ್ಲಿ ಗುಡ್ಡಗಾಡು ಜನಾಂಗಕ್ಕೆ ಸೇರಿದ ಸದಸ್ಯರು ಭಾನುವಾರ ರಾತ್ರಿ ದಲಿತ ಮಹಿಳೆಯ ಬೆತ್ತಲೆ ಮೆರವಣಿಗೆ ನಡೆಸಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶರತ್ಚಂದ್ರ ತಿಳಿಸಿದ್ದಾರೆ.
ವಾಲ್ಮೀಕಿ ಜನಾಂಗಕ್ಕೆ ಸೇರಿದ ಕೆಲವು ಪುರುಷರು ಅಮಾನವೀಯ ನಡವಳಿಕೆಗೆ ತುತ್ತಾದ ಯುವತಿಯ ಮನೆಗೆ ನುಗ್ಗಿ, ಆಕೆಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ಥಳಿಸಿ, ಬೆತ್ತಲೆ ಮೆರವಣಿಗೆ ನಡೆಸಿದ್ದಾರೆ. ಕಳೆದ ತಿಂಗಳು ಹರಿಜನ ಯುವಕನೊಂದಿಗೆ ಯುವತಿಯಾಬ್ಬಳು ಪರಾರಿಯಾದ ಘಟನೆಗೆ ಪ್ರೋತ್ಸಾಹ ನೀಡಿದ್ದಾಳೆ ಎನ್ನುವ ಆರೋಪದ ಮೇಲೆ ಈಕೆಯ ಮೇಲೆ ಈ ದೌರ್ಜನ್ಯ ಎಸಗಲಾಗಿದೆ.
ದಲಿತ ಮಹಿಳೆಯ ಬೆತ್ತಲೆ ಮೆರವಣಿಗೆ ಪ್ರಕರಣದಲ್ಲಿ ಮೂವರು ಮಹಿಳೆಯರು ಸೇರಿದಂತೆ ಎಂಟು ಮಂದಿಯನ್ನು ಬಂಧಿಸಲಾಗಿದೆ. ಘಟನೆ ನಡೆದಿರುವ ಹಳ್ಳಿಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದ್ದು, ಅವಮಾನಕ್ಕೊಳಗಾದ ಮಹಿಳೆಗೆ ರಕ್ಷಣೆ ನೀಡಲಾಗಿದೆ ಎಂದು ಶರತ್ಚಂದ್ರ ತಿಳಿಸಿದ್ದಾರೆ.
(ಪಿಟಿಐ)
Comments
Story first published: Monday, August 27, 2001, 0:00 [IST]