ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇ-ಮೇಲ್‌ ತಂದ ಕಂಕಣ ಕೊರಳಿಗೆ ಉರುಳಾದ ದುರಂತ ಕಥೆಯಿದು..

By Staff
|
Google Oneindia Kannada News

ಬೆಂಗಳೂರು : ಇ-ಮೇಲ್‌ ಮೂಲಕ ಶ್ರೀಲಂಕಾದ ನಿವಾಸಿಯನ್ನು ಪ್ರೀತಿಸಿ ಮದುವೆಯಾಗಿದ್ದ ನಗರದ ಬಾಣಸವಾಡಿಯ ಅರವಿಂದ ನಗರದ ಕೆಎಸ್‌ಎಫ್‌ಸಿ ಬಡಾವಣೆಯ ಕವಿತಾ (23) ಎನ್ನುವ ಯುವತಿ ವರದಕ್ಷಿಣೆ ಕಿರುಕುಳಕ್ಕೆ ಬಲಿಯಾಗಿದ್ದಾರೆ.

ಕವಿತಾ ಹಾಗೂ ಶ್ರೀಲಂಕಾದ ಗಣೇಶ್‌ ಮುರುಗನ್‌ ಎನ್ನುವವರ ನಡುವಣ ಇ-ಮೇಲ್‌ ಸ್ನೇಹ, ಪ್ರೇಮವಾಗಿ ಬದಲಾಗಿ, ಜೂನ್‌ ತಿಂಗಳಲ್ಲಿ ಇಬ್ಬರೂ ಮದುವೆಯಾಗಿದ್ದರು. ಮದುವೆಯಾದ ನಂತರ ದಂಪತಿಗಳು ಕೆಲಕಾಲ ಶ್ರೀಲಂಕಾ ಹಾಗೂ ಲಂಡನ್‌ನಲ್ಲಿ ವಾಸವಾಗಿದ್ದರು. ಲಂಡನ್‌ನಲ್ಲಿ ಇರುವಾಗಲೇ ವರದಕ್ಷಿಣೆ ತರುವಂತೆ ಗಣೇಶ್‌ ಕವಿತಾಗೆ ಕಿರುಕುಳ ನೀಡಲಾರಂಭಿಸಿದ.

ವರದಕ್ಷಿಣೆ ತರುವಂತೆ ಗಣೇಶ್‌ ಮುರುಗನ್‌ ಒತ್ತಾಯದ ಮೇರೆಗೆ ತಿಂಗಳ ಹಿಂದೆ ತವರಿಗೆ ಬಂದ ಕವಿತಾ ಆನಂತರ ಗಂಡನನ್ನು ಸಂಪರ್ಕಿಸಲು ಪ್ರಯತ್ನ ನಡೆಸಿದ್ದಾರೆ. ಆದರೆ, ಇ-ಮೇಲ್‌ಗಳಿಗೆ ಪ್ರತಿಕ್ರಿಯೆ ಬರದಿದ್ದಾಗ ತೀವ್ರ ನಿರಾಶೆಗೊಂಡಿದ್ದ ಕವಿತಾ, ಕೊನೆಗೆ ವರದಕ್ಷಿಣೆ ಕಿರುಕುಳ- ಜಿಗುಪ್ಸೆಯಿಂದಾಗಿ ನೇಣುಹಾಕಿಕೊಂಡಿದ್ದಾರೆ.

ಪ್ರಕರಣದ ಬಗ್ಗೆ ಕವಿತಾ ಸಂಬಂಧಿಕರು ಬಾಣಸವಾಡಿ ಪೊಲೀಸರಿಗೆ ದೂರು ನೀಡಿದ್ದಾರೆ. ದೂರು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X