ಚೆನ್ನೈನಲ್ಲಿ ಪತ್ರಕರ್ತರ ಬಂಧನ : ಬೆಂಗಳೂರಿನಲ್ಲಿ ಪ್ರತಿಭಟನೆ
ಬೆಂಗಳೂರು : ಸನ್ ಟಿವಿ ವರದಿಗಾರ ಜಿ. ಸುರೇಶ್ ಅವರನ್ನು ತಮಿಳುನಾಡು ಪೊಲೀಸರು ಅಕ್ರಮವಾಗಿ ಬಂಧಿಸಿರುವುದನ್ನು ವಿರೋಧಿಸಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಪದಾಧಿಕಾರಿಗಳು, ಪತ್ರಕರ್ತರು ಶುಕ್ರವಾರ ನಗರದ ಎಂ.ಜಿ.ರಸ್ತೆಯ ಮಹಾತ್ಮ ಗಾಂಧಿ ಪ್ರತಿಮೆ ಮುಂದೆ ಪ್ರತಿಭಟನೆ ನಡೆಸಿದರು.
ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದ ಪತ್ರಕರ್ತರು ತಮಿಳುನಾಡು ಸರ್ಕಾರ ಹಾಗೂ ಪೊಲೀಸರ ವಿರುದ್ಧ ಘೋಷಣೆಗಳನ್ನು ಕೂಗಿದರು. ಬಂಧಿತ ಪತ್ರಕರ್ತನನ್ನು ಕೂಡಲೇ ಬಿಡುಗಡೆ ಮಾಡುವಂತೆ ಒತ್ತಾಯಿಸಿದ ಪತ್ರಕರ್ತರು, ಈ ಸಂಬಂಧ ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವೆ ಸುಷ್ಮಾ ಸ್ವರಾಜ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಚೆನ್ನೈ:
ಪ್ರತಿಭಟಿಸಿದ
150
ಪತ್ರಕರ್ತರ
ಬಂಧನ
ಸನ್ಟಿವಿ
ಪತ್ರಕರ್ತನ
ಬಂಧನವನ್ನು
ವಿರೋಧಿಸಿ
ಶುಕ್ರವಾರ
ಚೆನ್ನೈನಲ್ಲಿ
ಪ್ರತಿಭಟನೆ
ನಡೆಸಿದ
ತಮಿಳುನಾಡಿನ
150
ಪತ್ರಕರ್ತರನ್ನು
ಪೊಲೀಸರು
ಬಂಧಿಸಿದ್ದಾರೆ.
ಸುಷ್ಮಾ
ಪ್ರತಿಕ್ರಿಯೆ
ಇಲ್ಲ
ಚೆನ್ನೈನಲ್ಲಿ
ಪತ್ರಕರ್ತರ
ಬಂಧನದ
ಕುರಿತು
ಯಾವುದೇ
ಪ್ರತಿಕ್ರಿಯೆ
ನೀಡಲು
ಕೇಂದ್ರ
ವಾರ್ತಾ
ಮತ್ತು
ಪ್ರಸಾರ
ಸಚಿವೆ
ಸುಷ್ಮಾ
ಸ್ವರಾಜ್
ನಿರಾಕರಿಸಿದ್ದಾರೆ.
ಅಂತರರಾಷ್ಟ್ರೀಯ
ಚಲನ
ಚಿತ್ರೋತ್ಸವ
ಸಂಬಂಧ
ಬೆಂಗಳೂರಿಗೆ
ಆಗಮಿಸಿದ್ದ
ಅವರನ್ನು
ಪ್ರಕರಣದ
ಬಗ್ಗೆ
ಸುದ್ದಿಗಾರರು
ಪ್ರಶ್ನಿಸಿದಾಗ-
ಯಾವುದೇ
ಪ್ರತಿಕ್ರಿಯೆಗೆ
ಇದು
ಸರಿಯಾದ
ಸಮಯವಲ್ಲ
,
ಆದರೆ
ಪತ್ರಿಕಾ
ಸ್ವಾತಂತ್ರ್ಯ
ರಕ್ಷಣೆಗೆ
ಸರ್ಕಾರ
ಬದ್ಧವಾಗಿದೆ
ಎಂದರು.
(ಇನ್ಫೋ ವಾರ್ತೆ)