ಆರ್ಟಿಓ ಕಚೇರಿಯಲ್ಲಿ ದಲ್ಲಾಳಿಗಳ ಪ್ರವೇಶ ನಿಷಿದ್ಧ : ಸಚಿವ
ಬೆಂಗಳೂರು : ಬೆಂಗಳೂರಿನ ಆರ್.ಟಿ.ಓ. ಕಚೇರಿಗಳಲ್ಲಿ ವಾಹನ ಚಾಲನೆ ಪರವಾನಗಿ ಪಡೆಯುವಲ್ಲಿ ಆಗುತ್ತಿರುವ ವಿಳಂಬ ತಪ್ಪಿಸಲು ಎರಡೂವರೆ ಕೋಟಿ ರುಪಾಯಿ ವೆಚ್ಚದಲ್ಲಿ ಸಂಪೂರ್ಣ ಕಂಪ್ಯೂಟರೀಕರಣ ಕಾರ್ಯ ಕೈಗೊಳ್ಳಲು ಹಾಗೂ ದಲ್ಲಾಳಿಗಳ ಹಾವಳಿ ತಪ್ಪಿಸಲು ರಾಜ್ಯ ಸರಕಾರ ನಿರ್ಧರಿಸಿದೆ.
ಸಂಪೂರ್ಣ ಗಣಕೀಕೃತಗೊಂಡಿರುವ ಯಶವಂತಪುರ ಕಚೇರಿಗೆ ಭೇಟಿ ನೀಡಿದ್ದ ಸಾರಿಗೆ ಸಚಿವ ಸಿ.ಆರ್. ಸಗೀರ್ ಅಹ್ಮದ್ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ ಈ ವಿಷಯ ತಿಳಿಸಿದರು. ವಾಹನ ಚಾಲನೆ ಪರವಾನಗಿ ನೀಡುವ ಕಚೇರಿ ಹಾಗೂ ಆವರಣದಲ್ಲಿ ಮಧ್ಯವರ್ತಿಗಳ ಪ್ರವೇಶವನ್ನು ನಿರ್ಬಂಧಿಸಲಾಗಿದ್ದು, ನಿಯಮ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.
ಮಧ್ಯವರ್ತಿಗಳಿಗೆ ಇಲ್ಲವೇ ಅಧಿಕಾರಿಗಳಿಗೆ 500 ರುಪಾಯಿ ಲಂಚ ನೀಡುವ ಬದಲು 1 ರುಪಾಯಿ ಖರ್ಚು ಮಾಡಿ, ಸಾರಿಗೆ ಆಯುಕ್ತರಿಗಾಗಲೀ ಅಥವಾ ತಮಗಾಗಲೀ ನೇರವಾಗಿ ಪತ್ರಬರೆಯುವಂತೆ ನಾಗರಿಕರಿಗೆ ಕರೆ ನೀಡಿದರು. ಕಂಪ್ಯೂಟರ್ನಲ್ಲಿ ಸುಮಾರು 16 ಲಕ್ಷ ನೊಂದಣಿ ಸಂಖ್ಯೆಗಳ ಮಾಹಿತಿ ದಾಖಲಿಸಲಾಗುವುದು ಎಂದೂ ಹೇಳಿದರು.
ದಲ್ಲಾಳಿಗಳ ಜತೆ ಕೈಜೋಡಿಸುವ, ಸಾರ್ವಜನಿಕರೊಂದಿಗೆ ಸಭ್ಯವಾಗಿ ವರ್ತಿಸದ ಹಾಗೂ ಅನಗತ್ಯ ವಿಳಂಬ ಮಾಡುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದರು. ಪತ್ರಿಕಾಗೋಷ್ಠಿಯಲ್ಲಿ ಸಾರಿಗೆ ಆಯುಕ್ತ ಟಿ. ತಿಮ್ಮೇಗೌಡ, ಜಂಟಿ ಆಯುಕ್ತ ಶ್ಯಾಂಭಟ್ ಹಾಗೂ ಅಯ್ಯಪ್ಪ ಅವರು ಹಾಜರಿದ್ದರು.
ಭ್ರಷ್ಟಾತಿಭ್ರಷ್ಟ ಇಲಾಖೆ ಆರ್.ಟಿ.ಓ : ಸಾರಿಗೆ ಇಲಾಖೆಯಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿರುವುದು ಈಗ ಗುಟ್ಟಾಗೇನೂ ಉಳಿದಿಲ್ಲ. ಡ್ರೆೃವಿಂಗ್ ಲೈಸೆನ್ಸ್ ಮಾಡಿಸಲು ಪಟ್ಟಿರುವ ಪಾಡು ಅನುಭವಿಸಿದವರಿಗೇ ಗೊತ್ತು. ಎಷ್ಟೇ ಚೆನ್ನಾಗಿ ವಾಹನ ಓಡಿಸಲು ಬಂದರೂ ಲಂಚ ಕೊಡದೆ ಲೈಸೆನ್ಸ್ ಸಿಗಲ್ಲ ಅನ್ನುವ ತತ್ವ ಅರ್ಥವಾದ ಕೂಡಲೇ ಪರವಾನಗಿ ಕೈಗೆ ಸಿಕ್ಕಂತೆಯೇ.
ಆರ್ಟಿಓ ಗಳಲ್ಲಂತೂ ಎಲ್ಎಲ್ (ಲರ್ನಿಂಗ್ ಲೈಸೆನ್ಸ್)ಗೆ ಇಷ್ಟು, ಡಿ.ಎಲ್ (ಡ್ರೆೃವಿಂಗ್ ಲೈಸೆನ್ಸ್)ಗೆ ಇಷ್ಟು ಎಂಬ ಲಂಚದ ರೇಟೇ ಇದೆ. ಇದೆಲ್ಲಕ್ಕಿಂತ ಮಿಗಿಲಾಗಿ ಆರ್.ಟಿ.ಓ.ಗೆ ನೀವು ಹೋಗುತ್ತಿದ್ದಂತೆ ಜಿಗಣೆಗಳಂತೆ ಮುತ್ತುವ ಬ್ರೋಕರ್ಗಳೇ ಆರ್ಟಿಓ ಯಜಮಾನರಂತೆ ವರ್ತಿಸುವುದೂ ಉಂಟು.
ಈ ದಲ್ಲಾಳಿಗಳು ಆರ್ಟಿಓ ಅಧಿಕಾರಿಗಳಿಗಿಂತ ಹೆಚ್ಚು ಮೋಟಾರು ವಾಹನ ಕಾಯಿದೆಯನ್ನು ಅರೆದು ಕುಡಿದಿದ್ದಾರೆ. 6 ಫೋಟೋ, ಎಲ್.ಐ.ಸಿ. ಪಾಲಿಸಿ, ಪಡಿತರ ಚೀಟಿ, ರೆವಿನ್ಯೂ ಸ್ಟಾಂಪ್ ಎಂದು ದೊಡ್ಡ ಪಟ್ಟಿಯನ್ನೇ ನೀಡುವ ಅವರು, ಹಣ ಕೊಟ್ಟೊಡನೆಯೇ ವಾಹನ ಓಡಿಸಲು ಬರಲಿ, ಬಾರದಿರಲಿ ಲೈಸೆನ್ಸ್ ಕೊಡಿಸುವಷ್ಟು ಸಮರ್ಥರು.
ಆರ್.ಟಿ.ಓ. ಕಚೇರಿಯಲ್ಲಿನ ಬಹುರೂಪಿ ಭ್ರಷ್ಟಾಚಾರ ಮಾಧ್ಯಮಗಳಲ್ಲಿ ಇತ್ತೀಚೆಗೆ ದೊಡ್ಡ ಸುದ್ದಿಯೇ ಅಗಿತ್ತು. ಕೂಡಲೇ ಎಚ್ಚೆತ್ತ ಸಾರಿಗೆ ಸಚಿವರು ಸಾರಿಗೆ ಕಚೇರಿ ಆವರಣಕ್ಕೆ ಮಧ್ಯವರ್ತಿಗಳ ಪ್ರವೇಷ ನಿಷೇಧಿಸಲಾಗಿದೆ ಎಂದು ಬುಧವಾರ ಅಪ್ಪಣೆ ಕೊಡಿಸಿದ್ದಾರೆ. ಲೈಸೆನ್ಸ್ ನೀಡಿಕೆಯಲ್ಲಿ ವಿಳಂಬವಾದರೆ, ಲಂಚ ನೀಡುವ ಬದಲು ತಮಗಾಗಲೀ, ಸಾರಿಗೆ ಆಯುಕ್ತರಿಗಾಗಲೀ ಪತ್ರ ಬರೆಯಿರಿ ಎಂದೂ ಕೋರಿದ್ದಾರೆ. ಇನ್ನಾದರೂ ಆರ್.ಟಿ.ಓ.ದಲ್ಲಿ ಹಣ ತಿನ್ನುವ ಹೆಗ್ಗಣಗಳ ಕಾಟ ತಪ್ಪುತ್ತದೆಯೇ ನೋಡೋಣ!
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications