Get Updates
Get notified of breaking news, exclusive insights, and must-see stories!

ನೆಲಕ್ಕೆ ತಲೆ ಇಟ್ಟ ವಿದುರಾಶ್ವತ್ಥದ ದೊಡ್ಡಮರ, ವೃಕ್ಷರಾಜಾಯತೇ ನಮಃ !

ಕೋಲಾರ : ಪುರಾಣ ಪ್ರಸಿದ್ಧ ಶ್ರೀಕ್ಷೇತ್ರ ವಿದುರಾಶ್ವತ್ಥದ ಅಶ್ವತ್ಥನಾರಾಯಣ ಸ್ವಾಮಿ ದೇವಾಲಯದ ಎದುರು ನೂರಾರು ವರ್ಷಗಳಿಂದ ಕದಲದೇ ನಿಂತಿದ್ದ ಶತಮಾನಗಳಷ್ಟು ಹಳೆಯದಾದ ಬೃಹದಾಕಾರದ ಅಶ್ವತ್ಥವೃಕ್ಷ ನೆಲಕಚ್ಚಿದೆ. ಈ ವೃಕ್ಷದ ಕೆಳಭಾಗದಲ್ಲಿ ಸಾವಿರಾರು ಭಕ್ತಾದಿಗಳು ಪ್ರತಿಷ್ಠಾಪಿಸಿದ್ದ ಕೆಲವು ನಾಗರಕಲ್ಲು, ಪ್ರತಿಮೆಗಳಿಗೂ ಸಹ ಹಾನಿಯುಂಟಾಗಿದೆ ಎಂದು ವರದಿಗಳು ತಿಳಿಸಿವೆ.

ಮಹಾಭಾರತದ ವಿದುರನ ಉಲ್ಲೇಖವೂ ಇರುವ ಪುರಾಣ ಪ್ರಸಿದ್ಧ ಈ ಸ್ಥಳ, ಐತಿಹಾಸಿಕವಾಗಿಯೂ ಪ್ರಸಿದ್ಧಿ ಪಡೆದಿದೆ. ಅಶ್ವತ್ಥನಾರಾಯಣನ ದರ್ಶನಕ್ಕೆ ಬರುವ ಭಕ್ತಾದಿಗಳಿಗೆ ನೂರಾರು ವರ್ಷಗಳಿಂದ ನೆರಳಾಗಿ ನಿಂತಿದ್ದ ವೃಕ್ಷಕ್ಕೆ ಪ್ರತಿನಿತ್ಯ ಸಾವಿರಾರು ಭಕ್ತರು ಪೂಜೆ ಸಲ್ಲಿಸುತ್ತಿದ್ದರು.

ಅಶ್ವತ್ಥವೃಕ್ಷದಲ್ಲಿ ಸೃಷ್ಟಿ, ಸ್ಥಿತಿ, ಲಯಕರ್ತರಾದ ತ್ರಿಮೂರ್ತಿಗಳಾದಿಯಾಗಿ ಮುಕ್ಕೋಟಿ ದೇವತೆಗಳೂ ನೆಲೆಸಿದ್ದಾರೆ. ಈ ವೃಕ್ಷಕ್ಕೆ ಮೂಲತೋ ಬ್ರಹ್ಮ ರೂಪಾಯ, ಮಧ್ಯತೋ ವಿಷ್ಣು ರುಪಿಣೆ, ಅಗ್ರತಃ ಶಿವರೂಪಾಯ ವೃಕ್ಷರಾಜಾಯತೇ ನಮಃ ಎಂಬ ಶ್ಲೋಕವನ್ನು ಪಠಿಸುತ್ತಾ ಪ್ರದಕ್ಷಿಣೆ ಹಾಕಿದರೆ ಬಂಜೆ ಎಂಬ ಪಟ್ಟಹೊತ್ತವರಿಗೂ ಮಕ್ಕಳಾಗುತ್ತದೆ ಎಂಬ ನಂಬಿಕೆ ಹಿಂದೂಗಳದು. ಇತಿಹಾಸ ಪರಂಪರೆಯ ಈ ಪುರಾತನ ವೃಕ್ಷವನ್ನು ಸಂರಕ್ಷಿಸಲು ಪ್ರಯತ್ನ ಮಾಡದ ದೇಗುಲದ ಆಡಳಿತ ಮಂಡಳಿಯನ್ನು ನಾಗರಿಕರು ಶಪಿಸುತ್ತಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+