ಕರ್ನಾಟಕದ ಇಬ್ಬರು ವೇದ ಪಾರಂಗತರಿಗೆ ವೇದರತ್ನ ಪ್ರಶಸ್ತಿ
ಬೆಂಗಳೂರು : ಮೇ 18ರ ಶುಕ್ರವಾರ ನಗರದ ಭಾರತೀಯ ವಿದ್ಯಾಭವನವು ಮೈಸೂರಿನ ಜಿ.ಎನ್. ಚಕ್ರವರ್ತಿ, ಬೆಂಗಳೂರಿನ ಸುಧಾಕರ್ ಚತುರ್ವೇದಿ ಸೇರಿದಂತೆ ರಾಷ್ಟ್ರದ ಹೆಸರಾಂತ ವೇದ ಪಾರಂಗತರಿಗೆ ಶ್ರೀ ಗುರು ಗಂಗೇಶ್ವರಾನಂದ ವೇದರತ್ನ ಪುರಸ್ಕಾರ ನೀಡಿ ಗೌರವಿಸಲಿದೆ.
1995ರಲ್ಲಿ ಸ್ಥಾಪಿಸಲಾದ ಹಾಗೂ ಎರಡು ವರ್ಷಗಳಿಗೊಮ್ಮೆ ನೀಡುವ ಈ ಪುರಸ್ಕಾರಕ್ಕೆ (1999ರ ಸಾಲಿಗೆ) ಚೆನ್ನೈನ ಸುಬ್ರಹ್ಮಣ್ಯ ಗಣಪತಿಗಳು (ಋಗ್ವೇದ), ಚೆನ್ನೈನ ಪಂಚಪಕೇಶ ಶಾಸ್ತ್ರೀಗಳು (ಕೃಷ್ಣ ಯಜುರ್ವೇದ), ನಾಸಿಕ್ನ ಕೃಷ್ಣ ಶಾಸ್ತ್ರೀ ಕೆ ಗೊಡೇಶೆ (ಶುಕ್ಲ ಯಜುರ್ವೇದ), ವಾರಾಣಸಿಯ ದೇವಕೃಷ್ಣ ತ್ರಿಪಾಠಿ (ಸಾಮವೇದ), ವೇದ ಮತ್ತು ಸಂಸ್ಕೃತ ಪಂಡಿತರಾದ ಬೆಂಗಳೂರಿನ ಸುಧಾಕರ ಚತುರ್ವೇದಿ ಮತ್ತು ಮೈಸೂರಿನ ಜಿ.ಎನ್. ಚಕ್ರವರ್ತಿ ಅವರನ್ನು ಆಯ್ಕೆ ಮಾಡಲಾಗಿದೆ.
ಈ ವಿಷಯವನ್ನು ವಿದ್ಯಾಭವನದ ಬೆಂಗಳೂರು ಕೇಂದ್ರದ ಕಾರ್ಯನಿರ್ವಾಹಕ ನಿರ್ದೇಶಕ ಮತ್ತೂರು ಕೃಷ್ಣಮೂರ್ತಿ ಅವರು ತಿಳಿಸಿದ್ದಾರೆ. ಈ ಬಾರಿ ಭೌತಶಾಸ್ತ್ರ, ರಾಸಾಯನ ಶಾಸ್ತ್ರ ಹಾಗೂ ಗಣಿತದಲ್ಲಿ ವೇದದ ಬಗ್ಗೆ ಸಂಶೋಧನೆ ನಡೆಸಿದ ಹಾಗೂ ಜೀವಿತಾವಧಿಯ ಸಾಧನೆಗಾಗಿ ಕೂಡ ವಿಶೇಷ ಪುರಸ್ಕಾರಗಳನ್ನು ನೀಡಲಾಗುತ್ತಿದೆ ಎಂದೂ ಅವರು ಹೇಳಿದರು.
ಪ್ರಶಸ್ತಿಯು ಸ್ವಾಮಿ ಗುರು ಗಂಗೇಶ್ವರಾನಂದರ ಪ್ರತಿಮೆ, ತಾಮ್ರಪತ್ರ ಹಾಗೂ ಒಂದು ಲಕ್ಷ ರುಪಾಯಿ ನಗದು ಬಹುಮಾನವನ್ನು ಒಳಗೊಂಡಿದೆ. ಇದೇ ದಿನ 1997ರ ಪ್ರಶಸ್ತಿ ಪುರಸ್ಕೃತರನ್ನೂ ಸನ್ಮಾನಿಸುವ ಕಾರ್ಯಕ್ರಮ ಇದೆ.
ಸನ್ಮಾನಿತರು : ಋಗ್ವೇದ - ವಿದ್ವಾನ್ ಶಂಬಾ ದೀಕ್ಷಿತ್ (ಅಗ್ನಿಶರಣಂ, ಗೋಕರ್ಣ), ಕೃಷ್ಣ ಯಜುರ್ವೇದ :ಎಲ್.ಎಂ. ಸುಬ್ರಹ್ಮಣ್ಯ ಗಣಾದಿಗಳು ( ಕಾಂಚೀಪುರಂ), ಶುಕ್ಲ ಯಜುರ್ವೇದ : ಇ.ಜೆ. ಕಮಾರಸ್ವಾಮಿ ದೀಕ್ಷಿತರು (ಚಕ್ರಮಲ್ಲೂರು, ತಮಿಳುನಾಡು), ಸಾಮವೇದ :ಡಾ. ವಿ. ವಿಶ್ವನಾಥ ಶರ್ಮ (ಚೆನ್ನೈ), ಸಂಸ್ಕೃತ :ಟಿ.ಎನ್. ಧರ್ಮಾಧಿಕಾರಿ, ಗಣಿತ ವೇದ :ಡಾ. ಎಸ್.ಕೆ. ಕಪೂರ್ (ಹರಿಯಾಣ).
ಈ ವರೆಗೆ ಈ ಪ್ರಶಸ್ತಿಯನ್ನು ತಮಿಳುನಾಡಿನ 6 ಪಂಡಿತರು ಹಾಗೂ ಕರ್ನಾಟಕದ ಮೂವರು ಪಡೆದಿದ್ದಾರೆ. ಮಹಾರಾಷ್ಟ್ರದ ಇಬ್ಬರು ಗಣ್ಯರು ಈ ಪ್ರಶಸ್ತಿಗೆ ಪಾತ್ರರಾಗಿದ್ದಾರೆ ಎಂದೂ ಅವರು ವಿವರ ನೀಡಿದರು.
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications