ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಿಂಬಾಬ್ವೆ ಪ್ರವಾಸಕ್ಕೆ ಭಾರತೀಯ ಕ್ರಿಕೆಟ್‌ ತಂಡದ ಪ್ರಕಟಣೆ

By Staff
|
Google Oneindia Kannada News

ಬೆಂಗಳೂರು : ಜಿಂಬಾಬ್ವೆ ವಿರುದ್ಧ ನಡೆಯಲಿರುವ ಎರಡು ಕ್ರಿಕೆಟ್‌ ಟೆಸ್ಟ್‌ಗಳ ಸರಣಿ ಪ್ರವಾಸಕ್ಕೆ ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿ.ಸಿ.ಸಿ.ಐ) 15 ಜನರ ತಂಡವನ್ನು ಗುರವಾರ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪ್ರಕಟಿಸಿದೆ.

ಕರ್ನಾಟಕದ ವೇಗದ ಬೌಲರ್‌ ಜಾವಗಲ್‌ ಶ್ರೀನಾಥ್‌ ಹಾಗೂ ರಾಹುಲ್‌ ದ್ರಾವಿಡ್‌ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ರಾಹುಲ್‌ ದ್ರಾವಿಡ್‌ ಈ ಸರಣಿಗೂ ಉಪನಾಯಕರಾಗಿ ಆಯ್ಕೆ ಆಗಿದ್ದಾರೆ. ತಂಡದಲ್ಲಿ ಏಳು ಮಂದಿ ಬ್ಯಾಟ್ಸ್‌ಮನ್‌ಗಳು ಹಾಗೂ 7 ಮಂದಿ ಬೌಲರ್‌ಗಳಿದ್ದಾರೆ. ಸಮೀರ್‌ ದಿಘ ಅವರನ್ನು ಮಾತ್ರ ವಿಕೆಟ್‌ ಕೀಪರ್‌ ಸ್ಥಾನಕ್ಕೆ ಆಯ್ಕೆ ಮಾಡಲಾಗಿದೆ.

ಮೇ 24ರಂದು ರಾತ್ರಿ ಭಾರತೀಯ ತಂಡ ಜಿಂಬಾಬ್ವೆ ಪ್ರವಾಸಕ್ಕೆ ವಿಮಾನ ಏರಲಿದೆ. ವೆಸ್ಟ್‌ ಇಂಡೀಸ್‌ ಸೇರಿದಂತೆ ಈ ಪ್ರವಾಸ ಕಾಲದಲ್ಲಿ ನಡೆಯಲಿರುವ ತ್ರಿಕೋಣ ಸರಣಿಯ ಹಾಗೂ ಏಕದಿನದ ಪಂದ್ಯಗಳಿಗೆ ಜೂನ್‌ ಎರಡನೇ ವಾರದಲ್ಲಿ ತಂಡವನ್ನು ಪ್ರಕಟಿಸಲಾಗುವುದು.

ಈ ವಿಷಯವನ್ನು ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿಯ ಕಾರ್ಯದರ್ಶಿ ಜಯವಂತ ಲೆಲೆ ಅವರು ತಿಳಿಸಿದರು. ನಮ್ಮ ಆಟಗಾರರು ಶ್ರದ್ಧೆಯಿಂದ ಅಭ್ಯಾಸ ನಡೆಸಿದ್ದು, ಪ್ರವಾಸದಲ್ಲಿ ದಿಗ್ವಿಜಯ ಸಾಧಿಸುವರು ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು. ಆಯ್ಕೆದಾರರು ವೇಗದ ಬೌಲರ್‌ಗಳ ಬಗ್ಗೆ ಒಲವು ತೋರಿದ ಹಿನ್ನೆಲೆಯಲ್ಲಿ ಮೊಹಂತಿ ತಂಡದಲ್ಲಿ ಸ್ಥಾನ ಗಿಟ್ಟಿಸಿದ್ದಾರೆ.

ತಂಡ ಇಂತಿದೆ - ಸೌರವ್‌ ಗಂಗೂಲಿ ( ನಾಯಕ), ರಾಹುಲ್‌ ದ್ರಾವಿಡ್‌ ( ಉಪ ನಾಯಕ), ಸಚಿನ್‌ ತಂಡೂಲ್ಕರ್‌, ವಿ.ವಿ.ಎಸ್‌. ಲಕ್ಷ್ಮಣ್‌, ಶಡಗೋಪನ್‌ ರಮೇಶ್‌, ಶಿವಸುಂದರ ದಾಸ್‌, ಹೇಮಾಂಗ್‌ ಬದಾನಿ, ಸಮೀರ್‌ ದಿಘ, ಜಾವಗಲ್‌ ಶ್ರೀನಾಥ್‌, ಅಜಿತ್‌ ಅಗರ್‌ಕರ್‌, ಜಾಹೀರ್‌ ಖಾನ್‌, ದೇಬಶೀಶ್‌ ಮೊಹಂತಿ, ಆಶಿಷ್‌ ನೆಹ್ರಾ, ಹರ್‌ಭಜನ್‌ಸಿಂಗ್‌ ಹಾಗೂ ಸಾಯಿರಾಜ್‌ ಬಹುತಲೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X