ನಿತ್ಯ ಭವಿಷ್ಯ
*ಜಾನುಕೊಂಡ ಶಾಮಾ ಶಾಸ್ತ್ರೀ
ವೃಷಭ : ಮನೆಯಲ್ಲಿ ಕಿರಿಕಿರಿ ಇದೆ ಎಂದು ತೋಟಕ್ಕೆ ಹೋದರೆ, ಚಿಂತೆ ಬೆನ್ನು ಹತ್ತುತ್ತದೆ ಅನ್ನುವ ಪರಿಸ್ಥಿತಿ ಎದುರಿಸುತ್ತಿದ್ದೀರಿ. ಆದರೆ ಬಂಧುಗಳು ನಿಮ್ಮ ಕೈ ಬಿಡುವುದಿಲ್ಲ.
ಮಿಥುನ : ದೈನಂದಿನ ಮಾಮೂಲಿ ತೊಂದರೆಗಳಿಗೆ ಹೆಚ್ಚು ತಲೆಕೆಡಿಸಿಕೊಳ್ಳದಿದ್ದರೆ ಆಯ್ತು. ದಿನ ಚೆಂದವಾಗಿರುವುದರಲ್ಲಿ ಯಾವುದೇ ಸಂಶಯ ಬೇಡ.
ಕಟಕ : ಓದು ಮತ್ತು ಅಧ್ಯಯನದಲ್ಲಿ ಅಂತಹ ಪ್ರಗತಿ ಇಲ್ಲ ಎಂದು ದಿನವಿಡೀ ಕೊರಗುತ್ತೀರಿ. ಆದರೆ ಇನ್ನಷ್ಟು ಸಮಯ ನಿಮ್ಮ ಬಳಿ ಇದೆ. ಆಲ್ ದ ಬೆಸ್ಟ್.
ಸಿಂಹ : ಬಡಾಯಿ ಕೊಚ್ಚಿಕೊಳ್ಳಲು ಆರಂಭಿಸುತ್ತಿದ್ದೀರಿ ಅಲ್ವೇ ? ಅದರಿಂದ ಅಂತಹ ಉಪಯೋಗವೇನೂ ಆಗುವುದಿಲ್ಲ ಎಂದು ನೆನಪಿಟ್ಟುಕೊಳ್ಳಿ.
ಕನ್ಯಾ : ಹೊಡೆದತ್ತ ಬದುಕುವವರಿಗೆ ಧ್ಯೇಯೋದ್ದೇಶಗಳ ಹಂಗೇಕೆ ಎಂಬ ಜಿಗುಪ್ಸೆ ಬೇಡ. ನಿಮ್ಮ ಸ್ನೇಹಿತರ ಆಶ್ವಾಸನೆಗಳು ಇವತ್ತು ನಿಮ್ಮನ್ನು ಮೇಲೆತ್ತಲಿವೆ.
ತುಲಾ : ನೌಕರಿ ಕ್ಷೇತ್ರದಲ್ಲಿ ಕೀರ್ತಿ ನಿಮ್ಮ ಪಾಲಿಗೆ ಸಿಗುವ ನಿರೀಕ್ಷೆ ಇದೆ. ಆದರಿಂದ ಅಸೂಯೆಪಡುವವರೂ ಜಾಸ್ತಿ ಇರುವ ಸಂಭವವಿದೆ.
ವೃಶ್ಚಿಕ : ಕಚೇರಿಯಲ್ಲಿ ಹೊರೆ ಕೆಲಸ ಮಾಡಿ ಸುಸ್ತಾಗಿರುತ್ತೀರಿ. ಸ್ನೇಹಿತರು ಇವತ್ತು ಸಹಕರಿಸುವ ಮೂಡ್ನಲ್ಲಿರುವುದಿಲ್ಲ.
ಧನಸ್ಸು : ಬರೀ ಆಡು ಮಾತಿನಲ್ಲಿಯೇ ಎಲ್ಲವನ್ನೂ ಮುಗಿಸುವ ನಿಮ್ಮ ಸ್ನೇಹಿತರ ಬಗ್ಗೆ ತುಂಬಾ ಬೇಸರಗೊಂಡ ಹಾಗೆ ಕಾಣಿಸುತ್ತದೆ. ನಿಮ್ಮ ಮಟ್ಟಿಗೆ ನೀವು ಸರಿ ಇದ್ದರೆ ಆಯ್ತು ಅಲ್ವಾ?
ಮಕರ : ಶಾಪಿಂಗ್ ಹೋಗುವವರಿಗೆ ಇವತ್ತು ಯಾವುದೇ ಲಾಭ ಇಲ್ಲ. ಆದ್ದರಿಂದ ಟೋಪಿ ಹಾಕಿಸಿಕೊಳ್ಳುವ ಪ್ರಯತ್ನ ಬೇಡ.
ಕುಂಭ : ಇವತ್ತು ಧನಲಾಭವಿದೆ. ಪ್ರವಾಸಕ್ಕೆ ತಯಾರಿ ನಡೆಸುತ್ತಿರುವ ನಿಮ್ಮ ಸಂಭ್ರಮಕ್ಕೆ ಮನೆಯವರೂ ಖುಷಿ ಪಡುತ್ತಾರೆ. ಒಟ್ಟಿನಲ್ಲಿ ಒಳ್ಳೇ ದಿನ.
ಮೀನ : ಕಚೇರಿಯಲ್ಲಿ ಎದುರಿಸಬೇಕಾದ ವಾತಾವರಣ ಸರಳವಾಗಿರುತ್ತದೆ. ಅಂತಹ ಗೊಂದಲಗಳೇನೂ ನಿಮ್ಮನ್ನು ಇಕ್ಕಟ್ಟಿಗೆ ಸಿಲುಕಿಸುವುದಿಲ್ಲ.