ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿತ್ಯ ಭವಿಷ್ಯ

By Staff
|
Google Oneindia Kannada News

*ಜಾನುಕೊಂಡ ಶಾಮಾ ಶಾಸ್ತ್ರೀ

ಮೇಷ :ಇದ್ದ ಜಾಗದಲ್ಲಿಯೇ ಇರುವುದು ನಿಮ್ಮ ಜಾಯಮಾನಕ್ಕೆ ಒಪ್ಪುವುದಲ್ಲ. ಆದ್ದರಿಂದ ಸದ್ಯಕ್ಕೆ ದೂರದೂರಿಗೆ ಪ್ರವಾಸ ಅರೇಂಜ್‌ ಮಾಡಲು ಒಳ್ಳೇ ಸಮಯ.

ವೃಷಭ : ಜಗತ್ತಿನಲ್ಲಿ ಏನು ಬೇಕಿದ್ದರೂ ಘಟಿಸಬಹುದು ಎಂಬುದು ಮನವರಿಕೆಯಾದಾಗ ಖಾಲಿ ಎನಿಸುತ್ತದೆ. ಆದರೆ ಕಚೇರಿಯಲ್ಲಿ ಮೈ ತುಂಬಾ ಕೆಲಸ ಇರುವುದರಿಂದ ಬೇಜಾರು ಕ್ಷಣದಲ್ಲಿ ದೂರಾಗುತ್ತದೆ.

ಮಿಥುನ : ಲಕ್‌ ಆಗಲೀ ಪರಿಶ್ರಮವಾಗಲೀ ಕೆಲವು ವಿಷಯಗಳನ್ನು ಬದಲಾಯಿಸುವುದು ಸಾಧ್ಯವಿಲ್ಲ. ಇವತ್ತು ಬಿಡುವಿನ ವೇಳೆ ಹೆಚ್ಚಾಗಿರುತ್ತದೆ.

ಕಟಕ : ಸಂಜೆ ಹೊತ್ತಿಗೆ ನಿಮ್ಮ ಆತ್ಮಿಯ ಸ್ನೇಹಿತರು ಭೇಟಿಯಾಗುತ್ತಾರೆ. ಹಲವು ದಿನಗಳಿಂದ ತೋಡಿಕೊಳ್ಳಬೇಕೆಂದುಕೊಂಡಿರುವ ದುಃಖ ಇಂದು ಹರಿಯುತ್ತದೆ.

ಸಿಂಹ : ವಿನಾ ಕಾರಣ ಎದುರಾಗುವ ತೊಂದರೆಯಿಂದ ಕಿರಿಕಿರಿಗೊಂಡಿದ್ದೀರಿ. ಆಧ್ಯಾತ್ಮದಿಂದ ಸಾಕಷ್ಟು ಪ್ರಯೋಜನವಾಗಲಿದೆ.

ಕನ್ಯಾ : ಅಕಸ್ಮಿಕವಾಗಿ ಎದುರಾಗುವ ಸಮಸ್ಯೆಗಳನ್ನು ನೀವು ಚಕಚಕನೆ ಪರಿಹರಿಸುತ್ತೀರಿ. ಆದ್ದರಿಂದ ವಿಜಯದ ಸಂತೋಷ.

ತುಲಾ : ಇವತ್ತು ಮನೆಯಲ್ಲಿ ಅತಿಥಿ ಸತ್ಕಾರದ ಭಾಗ್ಯ. ನಿಮ್ಮ ಅತೀ ಹತ್ತಿರದ ಬಂಧುಗಳು ಅಪರೂಪಕ್ಕೆ ಬರಲಿದ್ದಾರೆ. ಕಂಜೂಸ್‌ತನ ಬೇಡ.

ವೃಶ್ಚಿಕ : ಹಣದ ವ್ಯವಹಾರ ನಡೆಸುವಾಗ ನಿಮ್ಮನ್ನು ಮೋಸಗೊಳಿಸಲೇ ನಿಮ್ಮ ಸ್ನೇಹಿತರು ಕಾಯುತ್ತಿರುತ್ತಾರೆ. ಆದ್ದರಿಂದ ಜೋಪಾನವಾಗಿರಿ.

ಧನಸ್ಸು : ಕೋರ್ಟ್‌ ವ್ಯವಹಾರಗಳಲ್ಲಿ ಈ ದಿನ ನಿಮಗೆ ಧನಾತ್ಮಕ ಫಲಿತಾಂಶ ಕಾಣಬಹುದು, ಆದರೆ ವೃತ್ತಿ ಸಂಬಂಧ ಹಿನ್ನಡೆ ಕಾಣಬೇಕಾಗುತ್ತದೆ.

ಮಕರ : ಮತ್ತೊಮ್ಮೆ ಕಳೆದುಕೊಳ್ಳುತ್ತಿರುವ ಆರೋಗ್ಯದ ಬಗ್ಗೆ ಹೆಚ್ಚು ಗಮನ ಹರಿಸಬೇಕು. ಇಲ್ಲವಾದಲ್ಲಿ ಅಪಾರ ನಷ್ಟವಾಗುತ್ತದೆ. ಬಿಡುವಿನ ವೇಳೆಯನ್ನು ಸದುಪಯೋಗಗೊಳಿಸಿ.

ಕುಂಭ : ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳುವ ದಿನ ಇದು. ಮನೆಯ ಎಲ್ಲ ಕೆಲಸ ಕಾರ್ಯಗಳಲ್ಲಿ ಪ್ರಗತಿ ಕಾಣುತ್ತೀರಿ. ಧನಲಾಭವೂ ಇರಬಹುದು.

ಮೀನ : ಕೆಂಡ ಮಂಡಲ ಸಿಟ್ಟು ಬಂದರೂ ಏನೂ ಮಾಡಲಾಗದ ಪರಿಸ್ಥಿತಿಯನ್ನು ನಿಭಾಯಿಸುವ ಜಾಣತನ ನಿಮಗಿರುವುದರಿಂದ ಇಂದು ಸುದಿನವೇ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X