Get Updates
Get notified of breaking news, exclusive insights, and must-see stories!

ಧಾರವಾಡಕ್ಕೆ ಇನ್ನು 3 ತಿಂಗಳಲ್ಲಿ ಬಯೋಟೆಕ್‌ ಸಂಸ್ಥೆ

ಬೆಂಗಳೂರು : ಉತ್ತರ ಕರ್ನಾಟಕದ ಹತ್ತಿ ಬೆಳೆಗಾರರು ಬೀಟಿ ಹತ್ತಿ ಬೆಳೆ ತೆಗೆಯಲು ವಿರೋಧಿಸುತ್ತಿದ್ದರೂ, ಧಾರವಾಡದಲ್ಲಿ ಇನ್ನು 3 ತಿಂಗಳಲ್ಲಿ ಬಯೋಟೆಕ್‌ ಸಂಸ್ಥೆ ಸ್ಥಾಪಿಸುವಂತೆ ಮುಖ್ಯಮಂತ್ರಿ ಕೃಷ್ಣ ಆದೇಶಿಸಿದ್ದಾರೆ.

ಭಾನುವಾರ ನಗರದ ಅರಮನೆ ಆವರಣದಲ್ಲಿ ಪ್ರಾರಂಭವಾದ ಜೈವಿಕ ತಂತ್ರಜ್ಞಾನ ಜಾತ್ರೆಯಲ್ಲಿ ಕೃಷ್ಣ ಈ ಆದೇಶ ಹೊರ ಹಾಕಿದರು. ತಮ್ಮ ಬಜೆಟ್‌ನಲ್ಲಿ ತಿಳಿಸಿರುವಂತೆ ಜೈವಿಕ ತಂತ್ರಜ್ಞಾನ ಸಂಸ್ಥೆ ಸ್ಥಾಪಿಸಲು ಧಾರವಾಡ ಕೃಷಿ ವಿಶ್ವವಿದ್ಯಾಲಯದ ಉಪ ಕುಲಪತಿಗೆ ಮುಖ್ಯಮಂತ್ರಿ ಕೃಷ್ಣ 5 ಕೋಟಿ ರುಪಾಯಿ ಚೆಕ್‌ ಕೊಟ್ಟರು. ಕಟ್ಟಡದ ನಿರ್ಮಾಣ, ಆಡಳಿತ ವೆಚ್ಚಕ್ಕೆ ಈ ಹಣ ಬಳಸಕೂಡದು. ಇದೇನಿದ್ದರೂ ಸಂಶೋಧನೆ ಹಾಗೂ ಪರಿಕರಗಳ ಕೊಳ್ಳಲು ಮೀಸಲು ಎಂದು ಅವರು ತಾಕೀತು ಮಾಡಿದರು.

ನಮ್ಮ ದೇಶದಲ್ಲಿ ರೈತರು ಕ್ರಿಮಿನಾಶಕಗಳಿಗಾಗಿ 3 ಸಾವಿರ ಕೋಟಿ ರುಪಾಯಿ ಖರ್ಚು ಮಾಡುತ್ತಿದ್ದಾರೆ. ಇದರಲ್ಲಿ ಅರ್ಧ ಪಾಲು ಹತ್ತಿ ಬೆಳೆಗಾರರದು. ಜೈವಿಕ ತಂತ್ರಜ್ಞಾನ (ಬೀಟಿ) ದಿಂದ ಕುಲಾಂತರಿ ತಳಿಯ ಹತ್ತಿ ಉತ್ಪಾದಿಸುವುದರಿಂದ ಈ ವೆಚ್ಚವನ್ನು ಅರ್ಧದಷ್ಟು ತಗ್ಗಿಸಬಹುದಾಗಿದೆ. ಹೇಗೆಂದರೆ, ಬೀಟಿ ಹತ್ತಿ ಕೀಟಗಳ ದಾಳಿಗೆ ಅಷ್ಟು ಸುಲಭವಾಗಿ ಬಲಿಯಾಗುವುದಿಲ್ಲ ಎಂದರು.

ಬೀಟಿ ಜಾತ್ರೆ ಬಿಕೋ ಬಿಕೋ : ಮಧುಮೇಹಕ್ಕೆ ಮದ್ದು ಕೊಡುವ ವಿಶ್ವದ ದೊಡ್ಡ ಕಂಪನಿ ನಾರ್‌ಡಿಸ್ಕ್‌, ಹೆಪಟೈಟಿಸ್‌- ಬಿಗೆ ಔಷಧಿ ಕಂಡುಹಿಡಿದ ಹೈದರಾಬಾದಿನ ಶಾಂತಾ ಬಯೋಟೆಕ್ನಿಕ್ಸ್‌, ಬೆಂಗಳೂರಿನ ಬಯೋಕಾನ್‌ ಮೊದಲಾದ ಜೈವಿಕ ತಂತ್ರಜ್ಞಾನದ ದಿಗ್ಗಜ ಕಂಪನಿಗಳು ಜಾತ್ರೆಯಲ್ಲಿ ಭಾಗವಹಿಸಿವೆ. ವಿವಿಧ ಜನಾಕರ್ಷಣೀಯ ಮಳಿಗೆಗಳಿವೆ. ಜೊತೆಗೆ ಬೀಟಿ ಪರಿಣತರ ಮಾತನ್ನು ಇಲ್ಲಿ ಮುಫತ್ತಾಗಿ ಕೇಳಬಹುದು. ಹೀಗಿದ್ದೂ ಬೆಂಗಳೂರು ಬಯೋ ಡಾಟ್‌ ಕಾಂ ಜಾತ್ರೆಯಲ್ಲಿ ಮೊದಲ ದಿನ ಸೇರಿದ್ದು ಬರೀ ಐದಾರು ಸಾವಿರ ಜನ.

ಈ ಜಾತ್ರೆ ಸಹಜವಾಗೇ ಸಾಮಾನ್ಯ ಜನರನ್ನು ಆಕರ್ಷಿಸದು. ಜೊತೆಗೆ ಕೇವಲ ಜನವರಿಯಿಂದಷ್ಟೇ ಈ ಮೇಳದ ಸಿದ್ಧತೆಗಳು ಶುರುವಾದದ್ದು. ಇದಕ್ಕೆ ಸಿಗಬೇಕಾದಷ್ಟು ಪ್ರಚಾರ ಲಭಿಸದ ಕಾರಣ ಜನರಿಂದ ಉತ್ತಮ ಪ್ರತಿಕ್ರಿಯೆ ಸಿಗುತ್ತಿಲ್ಲ ಎಂದು ಸಂಘಟಕರು ಹೇಳಿದ್ದಾರೆ.

(ಇನ್ಫೋ ವಾರ್ತೆ)

ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+