ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

24 ಗಂಟೆ ಅವಧಿ, ನಾಲ್ಕು ರಸ್ತೆ ಅಪಘಾತಗಳಲ್ಲಿ 13 ಬಲಿ

By Staff
|
Google Oneindia Kannada News

ಬೆಂಗಳೂರು : ಮಂಗಳೂರಿನ ಎಕ್ಕೂರಿನಲ್ಲಿ ನಡೆದ ಕಾರ್‌ ಮತ್ತು ಜೀಪ್‌ ಡಿಕ್ಕಿಯಲ್ಲಿ ಮೂರು ಮಂದಿ ಸತ್ತಿದ್ದು , ಮೃತಪಟ್ಟವರನ್ನು ಅನುಪಮ್‌ ಜಾಹೀರಾತು ಸಂಸ್ಥೆಯ ಮಾಲಕ ಸುಮಂತ್‌ ಜೆ. ರಾವ್‌ (34), ಕಂಪ್ಯೂಟರ್‌ ಡಿಸೈನರ್‌ ಶೇವಗೂರ್‌ ನರಸಿಂಹ ಕಾಮತ್‌(32) ಹಾಗೂ ದೇವದಾಸ್‌ ಕಾಮತ್‌ ಎಂದು ಗುರುತಿಸಲಾಗಿದೆ.

ಗುಂಡ್ಲು ಪೇಟೆಯ ಸಾರಿಗೆ ಸಂಸ್ಥೆ ಬಸ್‌ ಮತ್ತು ಮ್ಯಾಕ್ಸಿ ಕಾಬ್‌ ಮುಖಾಮುಖಿಯಲ್ಲಿ ನಾಲ್ಕು ಮಂದಿ ಮೃತರಾಗಿದ್ದಾರೆ. ಹಸುಗೂಲಿ ಗ್ರಾಮದ ಮಾಜಿ ಛೇರ್ಮನ್‌ ಎಚ್‌. ಎಂ. ಶಿವಣ್ಣ (60), ಟಿ. ನರಸೀಪುರ ನವಿಲೂರು ಗ್ರಾಮದ ಶಿವಪ್ಪ (35), ನಾಗರಾಜು ಹಾಗೂ ಶೆಟ್ಟಿ ಹಳ್ಳಿ ಗ್ರಾಮದ ರಾಮಗೌಡರ ಮಗ (ಗುರ್ತಿಸಲಾಗಿಲ್ಲ ) ಸಾವನ್ನಪ್ಪಿದ್ದಾರೆ.

ಭಾನುವಾರ ಸಂಜೆ ಬೇಗೂರು ಬಳಿ ಸಂಭವಿಸಿದ ಮ್ಯಾಕ್ಸಿ ಕಾಬ್‌ ಮತ್ತು ಬಿಟಿಎಸ್‌ ಬಸ್‌ ಅಪಘಾತದಲ್ಲಿ ಆರು ಮಂದಿ ಮತ್ತು ಅರಸಿಕೆರೆಯಲ್ಲಿ ಸಾರಿಗೆ ಬಸ್ಸು ಕೆರೆಗೆ ಉರುಳಿ ಬಿದ್ದು ಒಬ್ಬ ವ್ಯಕ್ತಿ ತೀರಿಕೊಂಡಿದ್ದಾರೆ.

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X