ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಿಂಚು, ಗುಡುಗು, ಮಳೆ, ಸಿಡಿಲ ರುದ್ರ ತಾಂಡವ

By Staff
|
Google Oneindia Kannada News

ಬೆಂಗಳೂರು : ಗುಡುಗು ಕೇಳಿಸುತ್ತಿದೆ, ಮಿಂಚು ಇಣುಕುತ್ತಿದೆ. ರಾಜ್ಯದ ಅನೇಕ ಭಾಗಗಳಲ್ಲಿ ಚದುರಿದಂತೆ ಮಳೆ ಆಗುತ್ತಿದೆ. ಬೆಂಗಳೂರಿನಲ್ಲಿ ಕೂಡ ಶುಕ್ರವಾರ ಬೆಳಗ್ಗಿನಿಂದಲೂ ಅಕಾಲ ಸೋನೆಮಳೆ. ಶನಿವಾರ ಬಿಸಿಲು ಬಂದಿತ್ತು. ಮಳೆಯ ಸೂಚನೆ ಇರಲಿಲ್ಲ. ಬಿರು ಬಿಸಿಲಿನಿಂದ ಬೇಯುತ್ತಿದ್ದ ಇಳೆ ಸಂಪೂರ್ಣ ತಂಪಾಗಿದೆ. ಕೊಂಚ ಚಳಿಯೂ ಆಯಿತೆನ್ನಿ.

ಈ ಮಧ್ಯೆ ಕಳೆದ 24 ಗಂಟೆಗಳ ಅವಧಿಯಲ್ಲಿ ರಾಜ್ಯದ ದಕ್ಷಿಣ ಒಳನಾಡು, ಕರಾವಳಿ ಹಾಗೂ ಉತ್ತರ ಒಳನಾಡಿನ ಅಲ್ಲಲ್ಲಿ ಚದುರಿದಂತೆ ಮಳೆ ಆಯಿತು. ಸುಬ್ರಹ್ಮಣ್ಯದಲ್ಲಿ 4 ಸೆಂಟಿ ಮೀಟರ್‌, ಹೊಸಕೋಟೆಯಲ್ಲಿ 3, ಚಿಕ್ಕೋಡಿ, ಗದಗ, ರಾಮನಗರಗಳಲ್ಲಿ ತಲಾ 2 ಸೆಂಟಿ ಮೀಟರ್‌ನಷ್ಟು ಮಳೆ ಬಿದ್ದಿತ್ತು.

ತುಮಕೂರು ಜಿಲ್ಲೆಯಾದ್ಯಂತ ಜಡಿಮಳೆಯಾಗಿದ್ದು, ವಿದ್ಯುತ್‌ ಸಂಪೂರ್ಣವಾಗಿ ಕೈಕೊಟ್ಟಿತ್ತು. ಕುಣಿಗಲ್‌ ತಾಲೂಕಿನ ಹುಲಿಯೂರು ದುರ್ಗ ಹೋಬಳಿಯ ಕೊಡಿಗೇನಹಳ್ಳಿಯಲ್ಲಿ 55ವರ್ಷ ವಯಸ್ಸಿನ ಗೋವಿಂದಪ್ಪ ಎನ್ನುವವರು ಸಿಡಿಲು ಬಡಿದು ಸಾವನ್ನಪ್ಪಿದ್ದಾರೆ.

ರಾಜ್ಯಾದ್ಯಂತ ಬಿದ್ದ ಮಳೆಯ ಪರಿಣಾಮವಾಗಿ ತಾಪಮಾನ ಸಹ ಇಳಿದಿದೆ. ಉತ್ತರ ಒಳನಾಡಿನಲ್ಲಿ ಗರಿಷ್ಠ ಉಷ್ಣಾಂಶ ಸಾಮಾನ್ಯ ಮಟ್ಟಕ್ಕಿಂತಲೂ ಕಡಿಮೆ ಆಗಿತ್ತು. ಕರಾವಳಿಯಲ್ಲಿ ಕೂಡ ತಾಪಮಾನ ಕುಸಿದಿತ್ತು. ಮುನ್ಸೂಚನೆಯ ಪ್ರಕಾರ ರಾಜ್ಯಾದ್ಯಂತ ಚದುರಿದಂತೆ ಮಳೆ ಆಗುವ ಸಂಭವ ಇದೆ. ಬೆಂಗಳೂರು ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಭಾಗಶಃ ಮೋಡ ಇದ್ದು, ಗರಿಷ್ಠ ತಾಪಮಾನ 31 ಡಿಗ್ರಿ ಸೆಲ್ಸಿಯಸ್‌ ಇರಲಿದೆ ಎಂದಿದೆ ಬೆಂಗಳೂರಿನಲ್ಲಿರುವ ಹವಾಮಾನ ವೀಕ್ಷಣಾಲಯದ ವರದಿ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X